ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಎನ್ ಎಸ್ ಎಸ್ ಎಂದರೆ ಅದು ಪ್ರೀತಿ, ತ್ಯಾಗ, ಸೌಹಾರ್ದತೆ, ಸಹಯೋಗವೇ ಶಿಬಿರದ ಮುಖ್ಯ ಉದ್ದೇಶ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಎನ್ ಎಸ್ ಎಸ್ ಘಟಕದ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭ ಮರವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯವು ಶಿಕಾರಿಪುರ ತಾಲ್ಲೂಕು ಇಟ್ಟಿಗೆಹಳ್ಳಿ ಗ್ರಾಮದಲ್ಲಿ ಏಳು ದಿನಗಳ ಕಾಲ ಹಮ್ಮಿಕೊಂಡ ಎನ್ ಎಸ್ ಎಸ್ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಬಿರ ಎನ್ನುವುದು ಕೇವಲ ನೆಪ ಮಾತ್ರ ಅಲ್ಲ ಅದು ಗ್ರಾಮೀಣ ಜನರ ನಾಡಿಮಿಡಿತವನ್ನು ಅರಿಯುವ ಸುಂದರ ವೇದಿಕೆಯಾಗಿದೆ. ಇಲ್ಲಿ ಶಿಬಿರಾರ್ಥಿಗಳು ಜನರನ್ನು ಅತ್ಯಂತ ಹತ್ತಿರದಿಂದ ಕ್ರೀಯಾಶೀಲ ಕಾರ್ಯಕ್ರಮ. ಒಬ್ಬರನ್ನೊಬ್ಬರನ್ನು ಅರಿತುಕೊಳ್ಳುವ, ಜನರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಗ್ರಾಮೀಣ ಜನರ ಜೀವನ ವಿಧಾನ, ಸಂಸ್ಕೃತಿ, ನಂಬಿಕೆಗಳಲ್ಲಿ ಪಾಲ್ಗೊಳ್ಳುವುದಾಗಿದೆ, ಇಲ್ಲಿ ಕೇವಲ ಒಬ್ಬರ ನೋವು ಮಾತ್ರ ಅಲ್ಲ ಅದು ಇಡೀ ಶಿಬಿರದ ನೋವು ಎಂದು ಅರಿತು ಬದುಕುವ ಜೀವನ ಕಲೆ. ಇದರಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದಾಗಿದೆ, ವ್ಯಕಿತ್ವದ ವಿಕಾಸವೂ ಆಗಿದೆ. ಹಳ್ಳಿಯ ಕೌಶಲ, ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಸೌಹಾರ್ದತೆ, ಹೊಂದಾಣಿಕೆ ಪ್ರೀತಿ, ಕಷ್ಟ ಸಹಿಷ್ಣುತೆ ವಿಶ್ವಾಸದಂತಹ ಗುಣಗಳನ್ನು ಹಾಗೂ ಬದುಕುವ ಶೈಲಿಯನ್ನು ಕಲಿಸುವುದಾಗಿದೆ ಶಿಬಿರಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ತೊಡಗುವುದರಿಂದ ಎಲ್ಲರನ್ನೂ ಆತ್ಮೀಯತೆಯಿಂದ ನೋಡುವ ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದೇ ಎನ್ ಎಸ್ ಎಸ್ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಡಾ. ಶಿವಕುಮಾರ್ ಜಿ ಎಸ್., ಪ್ರಾಚಾರ್ಯರು, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಆಢಳಿತ ಮಂಡಳಿಯ ಪ್ರತಿನಿಧಿಗಳು, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಶಿಬಿರದ ನಿರ್ದೇಶಕರು ಮಾತನಾಡಿ, ಶಿಬಿರಾರ್ಥಿಗಳಲ್ಲಿ ಸರ್ವೋತ್ತಮ ಬೆಳವಣಿಗೆಗೆ ಪೂರಕವಾಗಿದೆ. ಇಲ್ಲಿ ವಿದ್ಯಾರ್ಥಿಗಳು ಕಷ್ಟಗಳನ್ನು ಸಹಿಸಿಕೊಂಡು ಬಿಸಿಲು, ಮಳೆಯಂತಹ ಸನ್ನಿವೇಶಗಳಲ್ಲಿ ಜನರು ಹಳ್ಳಿಯ ವಾತಾವರಣ, ಆರೋಗ್ಯ ಬೆಳವಣಿಗೆ ಉತ್ತಮವಾಗಿರಲು ಸಾಧ್ಯವಾಗಿರುವುದನ್ನು ನೆನಪಿಸಿದರು. ನಮ್ಮ ಶಿಬಿರ ಹಳ್ಳಿಯ ಜನರುಗಳಿಗೆ ಆರೋಗ್ಯ ಕಾಪಾಡಿಕೊಳ್ಳುವಿಕೆ, ವ್ಯಸನದಿಂ ಮುಕ್ತವಾಗುವಿಕೆ, ಅಗ್ನಿ ದುರಂತದಂತಹ ಕಾರ್ಯಕ್ರಮಗಳ ಬಗೆಗೆ ಅರಿವು ಮೂಡಿಸುವುದಾಗಿರುತ್ತದೆ. ಎನ್ ಎಸ್ ಎಸ್ ಶಿಬಿರದ ಮುಖ್ಯ ಸಾರಾಂಶ ಒಬ್ಬರನ್ನು ಒಬ್ಬರು ಅರ್ಥಮಾಡಿಕೊಂಡು ಸೌಹಾರ್ದತೆಯಿಂದ ಬದುಕುವ ಮನೋಭಾವವನ್ನು ಮೂಡಿಸುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ವೀರೇಂದ್ರ ಎಂ, ಪ್ರಾಚಾರ್ಯರು, ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಶಿಕಾರಿಪುರ, ಸಿದ್ಧನ ಗೌಡರು, ಮಾಜಿ ಅಧ್ಯಕ್ಷರು, ಮತ್ತು ಪ್ರಸ್ತುತ ಸದಸ್ಯರು, ಗ್ರಾಮ ಪಂಚಾಯಿತಿ, ಮುದ್ದೇನಹಳ್ಳಿ, ರೂಪಾ ನಾಗರಾಜ್, ಸದಸ್ಯರು, ಗ್ರಾಮ ಪಂಚಾಯಿತಿ, ಇಟ್ಟಿಗೆಹಳ್ಳಿ, ಗುರುಮೂರ್ತಿ ಹೆಚ್ ಎಸ್, ಗ್ರಾಮದ ಹಿರಿಯರು, ಇಟ್ಟಿಗೆಹಳ್ಳಿ, ಶ್ರೀರಾಮಾನಾಯ್ಕ ಇಟ್ಟಿಗೆಹಳ್ಳಿ ತಾಂಡಾದ ಹಿರಿಯರು, ಶ್ರೀಲಕ್ಷ್ಮಣಪ್ಪ ಕಾರ್ಯದರ್ಶಿಗಳು, ಇಟ್ಟಿಗೆಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ, ಇಟ್ಟಿಗೆಹಳ್ಳಿ, ನೀಲಮ್ಮ, ಅಂಗನವಾಡಿ, ಕಾರ್ಯಕರ್ತರು, ಇಟ್ಟಿಗೆಹಳ್ಳಿ, ಶ್ರೀ ಹೂವಣ್ಣ ವ್ಯವಸ್ಥಾಪಕರು, ಶ್ರೀ ನಂದಿ ಸಹಕಾರ ಬ್ಯಾಂಕ್, ಶಿಕಾರಿಪುರ, ಅರುಣ್ ಗೌಡ್ರು ಅಧ್ಯಕ್ಷರು ಭಜನಾ ಮಂಡಳಿ ಹಾಗೂ ಇಟ್ಟಿಗೆಹಳ್ಳಿ ಮುದ್ದೇನಹಳ್ಳಿ ವಿವಿಧ ಮುಖಂಡರು, ಗ್ರಾಮದ ಜನರುಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳು ಹಾಗೂ ಕಾರ್ಯಕ್ರಮಾಧಿಕಾರಿ ರವಿಕುಮಾರ್ ಎನ್ ಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ನಯನ ಎಸ್ ಮತ್ತು ಸಂಗಡಿಗರು, ಎನ್ ಎಸ್ ಎಸ್ ಗೀತೆಯನ್ನು ಕೋಗಿಲೆ ಮತ್ತು ನೀಲಕಂಠ ತಂಡದ ಶಿಬಿರಾರ್ಥಿಗಳು ಹಾಡಿದರೆ, ಸ್ವಾಗತವನ್ನು ಡಾ. ದೇವರಾಜ ವೈ ಸಹಾಯಕ ಪ್ರಾಧ್ಯಾಪಕರು, ವಂದನೆಯನ್ನು ಡಾ.ವೀರೇಂದ್ರ ಕುಮಾರ ವಾಲಿ ಎಸ್, ಸಹಾಯಕ ಪ್ರಾಧ್ಯಾಪಕರು ಹಾಗೂ ಸಹ ಶಿಬಿರಾಧಿಕಾರಿ ನೆರವೇರಿಸಿದರೆ, ಕಾರ್ಯಕ್ರಮದ ನಿರೂಪಣೆಯನ್ನು ಸ್ವಾತಿ ಹೆಚ್ ಬಿ ಮತ್ತು ಪ್ರೇಮ ಚಮನಗೌಡ ಪಾಟೀಲ್ ಪ್ರಶಿಕ್ಷಣಾರ್ಥಿಗಳು ನೆರವೇರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















