ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ದೇಶದ ಏಳಿಗೆಯಲ್ಲಿ ಯುವಜನರ ಪಾತ್ರ ಬಹು ಮುಖ್ಯವಾಗಿದೆ. ಯುವಜನರ ಮನಸ್ಥಿತಿ ಸಕಾರಾತ್ಮಕವಾಗಿ ಮುಂದುವರೆಯಬೇಕು ಎಂದು ಸಾಗರ ಇಂದಿರಾ ಗಾಂಧಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಅತಿಥಿ ಉಪನ್ಯಾಸಕ ಎನ್. ಸುರೇಶ್ ಕಿವಿಮಾತು ಹೇಳಿದರು.
ನೆಹರು ಯುವ ಕೇಂದ್ರ ಶಿವಮೊಗ್ಗ ಮತ್ತು ಯೂಥ್ ಕ್ಲಬ್ ಶಿಕಾರಿಪುರ ಇವರ ಸಂಯುಕ್ತ ಆಶ್ರಯದಲ್ಲಿ ಶಿಕಾರಿಪುರದ ಬಂಜಾರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವ ಮಂಡಳಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಯುವಜನರು ಮಾರುಹೋಗುತ್ತಿರುವ ಅಂತಹ ಧೂಮಪಾನ,ಮದ್ಯಪಾನ, ಆಡಂಬರದ ಜೀವನ, ಡ್ರೈವಿಂಗ್ ರೇಸಿನಲ್ಲಿ ಸೆಲ್ಫಿ ಕ್ರೇಜ್, ಹಾಗೆಯೇ ಜಾಗೃತಿಯ ವರ್ತನೆ ಬಗ್ಗೆ ಎಚ್ಚರವಹಿಸಬೇಕು ದೇಶವನ್ನು ಅಭಿವೃದ್ಧಿ ಪಥದತ್ತ ಕರೆದೊಯ್ಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂಬುದನ್ನು ಮನದಟ್ಟು ಮಾಡಿದರು.
ಸೊರಬ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಶಂಕರನಾಯ್ಕ್ ಮಾತನಾಡಿ, ತಮ್ಮ ಆಸಕ್ತಿಗನುಗುಣವಾಗಿ ವಿವಿಧ ಕ್ಷೇತ್ರದಲ್ಲಿ ಯುವಕರು ತಮ್ಮ ಛಾಪನ್ನು ಮೂಡಿಸಬೇಕು. ನಿರುದ್ಯೋಗಿಗಳಾಗಿರದೆ ಕುಲಕಸುಬುಗಳಾದ ಕೃಷಿ, ಚಮ್ಮಾರ ಕಮ್ಮಾರ, ಫೋಟೋಗ್ರಫಿ, ಮೇದಾರ, ಕುಂಬಾರ ಇನ್ನಿತರ ಉದ್ಯೋಗಗಳಲ್ಲಿ ನಿರತರಾಗಿ ತಮ್ಮ ಜೀವನವನ್ನು ಸುಗಮವಾಗಿ ಸಾಗಿಸಬೇಕು ಎಂದು ಯುವಕರಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಅಧಿಕಾರಿಗಳಾದ ಉಲ್ಲಾಸ್, ಸಾಗರ, ಸೊರಬ, ಶಿಕಾರಿಪುರದ ಯುವ ಕಾರ್ಯಕರ್ತರು, ಎವರ್ಗ್ರೀನ್ ಯುವಕ ಸಂಘ, ತರಲಘಟ್ಟ ಕುಮದ್ವತಿ ಕಲಾ ಸಂಘ, ಹಿತ್ಲ ನೆವರ್ ಎಂಡ್ ಕ್ರೀಡಾ ಯುವಕ ಸಂಘ ಹೊಸೂರು ಹಾಗೂ ಇನ್ನಿತರ ಶಿಕಾರಿಪುರ ತಾಲೂಕಿನ ಹಲವಾರು ಯುವಕ ಸಂಘಗಳು ಭಾಗವಹಿಸಿದ್ದವು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post