ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ಗಡಿ ಗ್ರಾಮ ಪಂಚಾಯತಿ ಅಗ್ರಹಾರ ಮುಚಡಿ ಗ್ರಾಪಂ ನೂತನ ಅಧ್ಯಕ್ಷೆಯಾಗಿ ಯಮನಿಬಾಯಿ ಶಂಕರ್ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿಕಟ ಪೂರ್ವ ಅಧ್ಯಕ್ಷೆಯಾಗಿದ್ದ ರಾಜಮ್ಮ ನವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಯಮನಿಬಾಯಿ ಶಂಕರ್ ನಾಯ್ಕ ಮುಂದಿನ ಎರಡೂವರೆ ವರ್ಷಗಳ ಕಾಲ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.ಈ ಹಿಂದೆ ಸಹ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ.
ಚುನಾವಣಾ ಅಧಿಕಾರಿಯಾಗಿ ನಂದನ್ ಕುಮಾರ್ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಪಿಡಿಓ ರಾಜಪ್ಪ, ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷ ಹರೀಶ್,ಸದಸ್ಯರಾದ ಕೀರ್ತಿಗೌಡ,ನಿಲಮ್ಮ ,ರಾಜಣ್ಣ,ರಾಧಾ,ಮಂಜಮ್ಮ ಸೇರಿದಂತೆ ಶೀರಿಹಳ್ಳಿತಾಂಡದ ಗ್ರಾಮಸ್ಥರು, ಅಗ್ರಹಾರ ಮುಚಡಿ ಗ್ರಾಮಸ್ಥರು, ಶೀರಿಹಳ್ಳಿ,ಮತ್ತಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
Also read: ಅಪವಿತ್ರವಾಗಿರುವ ತುಂಗಾ ನದಿಯನ್ನು ಸಂರಕ್ಷಿಸಿ ಪವಿತ್ರವಾಗಿಸಬೇಕಿದೆ: ಡಾ.ಧನಂಜಯ ಸರ್ಜಿ ಕರೆ
ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಪಕ್ಷದ ಕಾರ್ಯಕರ್ತರು ,ಮುಖಂಡರು ಶುಭಾಶಯ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post