ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ವಿವಿಧ ಸಾಂಸ್ಕೃತಿ ಸಂಸ್ಥೆಗಳ ಆಶ್ರಯದಲ್ಲಿ ಈಗಾಗಲೇ ಆಯೋಜನೆಗೊಂಡು ಪೇಜಾವರ ಶ್ರೀಗಳು ಹರಿಪಾದ ಸೇರಿದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಕಾರ್ಯಕ್ರಮಗಳ ಪೂರ್ವಭಾವಿ ಸಭೆಯಲ್ಲಿ ಜ.2ರಂದು ಆಯೋಜಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಶ್ರೀಗಂಧ ಸಂಸ್ಥೆಯ ಸಂಚಾಲಯ ಮಧುಸೂಧನ್, ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ವಾಸವಿ ಸಂಸ್ಕೃತ ಅಧ್ಯಯನ ಕೇಂದ್ರ, ಸಂಸ್ಕೃತ ಭಾರತಿ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಡಿ.21 ರಂದು ರಾಜ್ಯ ಮಟ್ಟದ ಸಂಸ್ಕೃತ ಬಾಲ ಸಂಗಮ ಹಾಗೂಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪೂಜ್ಯ ಪೇಜಾವರ ಶ್ರೀಗಳ ಅನಾರೋಗ್ಯ, ಇದೀಗ ಅವರು ವೈಕುಂಠ ವಾಸಿಗಳಾದ ಕಾರಣ ಮುಂದೂಡಲ್ಪಟ್ಟಿತ್ತು. ಈ ಕಾರ್ಯಕ್ರಮವನ್ನು ಈಗ 2020ರ ಜನವರಿ 17ರಂದು ಈ ಹಿಂದೆ ಯೋಚಿಸಿದಂತೆ ಶುಭಮಂಗಳ ಸಮುದಾಯ ಭವನದಲ್ಲಿ ಯಥಾಪ್ರಕಾರ ನಡೆಯಲಿದೆ ಎಂದರು.
ಅಲ್ಲದೆ ಜ. 5 ರಂದು ಪರಮಪೂಜ್ಯ ಪೇಜಾವರ ಶ್ರೀಗಳಿಗೆ ಸಂಸ್ಮರಣಾ ಕಾರ್ಯಕ್ರಮವನ್ನು ಹಾಗೂ ಜ.10ರಂದು ಶ್ರೀಗಂಧದ ವತಿಯಿಂದ ಕೇಶವ ಸಂಪದ ಎಂಬ ಶಿರ್ಷಿಕೆ ಅಡಿಯಲ್ಲಿ ದಾಸವರೇಣ್ಯರಾದ ಕನಕದಾಸರ ಬಗ್ಗೆ ಬರೆದ ಪುಸ್ತಕದ ಬಿಡುಗಡೆ ಹಾಗೂ ಗಾಯನ ಹಾಗೂ ವ್ಯಾಖ್ಯಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ 2020ರ ಜನವರಿ 2ರ ಬುಧವಾರ ಬೆಳಿಗ್ಗೆ 8:30ಕ್ಕೆ ಸಚಿವ ಕೆ.ಎಸ್. ಈಶ್ವರಪ್ಪನವರ ಮನೆಯಲ್ಲಿ ಅವರ ಘನ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಈ ಸಭೆಗೆ ರಾಜ್ಯ ಮಟ್ಟದ ಸಂಸ್ಕೃತ ಬಾಲ ಸಂಭ್ರಮ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಕ್ರಿಯ ಪಾತ್ರ ವಹಿಸಲು ಆಸಕ್ತರಿಗೆ ಮತ್ತು ಶ್ರೀಗಂಧ ಸಂಸ್ಥೆಯ ಹಾಗೂ ವಾಸವಿ ಸಂಸ್ಕೃತ ಅಧ್ಯಯನ ಕೇಂದ್ರ, ಮತ್ತು ಸಂಸ್ಕೃತ ಭಾರತಿ, ತರುಣೋದಯ ಸೇವಾ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಳ್ಳಬೇಕು ಎಂದು ವಿನಂತಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post