ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ನಗರದ ಮೀನಾಕ್ಷಿ ಭವನ ಹೋಟೆಲ್ನಲ್ಲಿ ಉಪಹಾರ ಸೇವಿಸಿ ತಮ್ಮ ಸರಳತೆಯನ್ನು ಮೆರೆದಿದ್ದಾರೆ.

ಯಡಿಯೂರಪ್ಪ ಅವರು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರುವ ಮುಂಚಿನ ದಿನಗಳಿಂದಲೂ ಸ್ನೇಹಿತರೊಂದಿಗೆ ಮೀನಾಕ್ಷಿ ಭವನಕ್ಕೆ ಬಂದು ಉಪಹಾರ ಸೇವಿಸುತ್ತಿದ್ದರು. ಪ್ರಸ್ತುತ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಇಲ್ಲಿಗೆ ಭೇಟಿ ನೀಡಿದ್ದು, ಎಷ್ಟೇ ದೂಡ್ಡವರಾದರೂ ಹಿಂದಿನ ನೆನಪುಗಳನ್ನು ಮರೆಯಬಾರದು ಎಂಬ ಸಂದೇಶ ಸಾರುವಂತಿತ್ತು ಮೀನಾಕ್ಷಿ ಭವನ ಹೋಟೆಲ್ನ ಭೇಟಿ.
ಸಂಸದ ಬಿ.ವೈ.ರಾಘವೇಂದ್ರ. ಜೋತಿಪ್ರಕಾಶ್ ಇವರಿಗೆ ಸಾಥ್ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















