Tuesday, July 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗ ಜಿಲ್ಲಾ ಗ್ರಾಹಕರ ವೇದಿಕೆಗೆ ಇನ್ನು ಮುಂದೆ ಜಿಲ್ಲಾ ಆಯೋಗ

ವೆಬ್’ಸೈಟ್ ಜಾಹೀರಾತುಗಳೂ ವ್ಯಾಪ್ತಿಗೆ, ಪರಿಹಾರ ಮೊತ್ತದ ವ್ಯಾಪ್ತಿ 20 ಲಕ್ಷದಿಂದ 1 ಕೋಟಿ ರೂ.ಗೆ ಏರಿಕೆ

March 13, 2020
in ಶಿವಮೊಗ್ಗ
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶಿವಮೊಗ್ಗ: ಜಿಲ್ಲೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಸಂರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ಗ್ರಾಹಕರ ವೇದಿಕೆಯು ಗ್ರಾಹಕ ಸಂರಕ್ಷಣಾ ಕಾಯ್ದೆಗಳಲ್ಲಿ ಕೆಲವು ಮುಖ್ಯ ಬದಲಾವಣೆಯನ್ನು ಮಾಡಲಾಗಿದೆ. ಜಿಲ್ಲಾ ಗ್ರಾಹಕರ ವೇದಿಕೆಯನ್ನು ಜಿಲ್ಲಾ ಆಯೋಗವೆಂದು ಮರು ಹೆಸರಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಸಿ.ಎಂ. ಚಂಚಲ ತಿಳಿಸಿದರು.

ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಾಹೀರಾತು ಹಳೆಯ ಕಾಯ್ದೆ ಆಡೀಯೋ, ವಿಶುವಲ್ ಪಬ್ಲಿಸಿಟಿ, ರೆಪ್ರಸೆಂಟೇಷನ್, ಲೈಟ್, ಸ್ಮೋಕ್, ಗ್ಯಾಸ್, ಪ್ರಿಂಟ್’ಗಳ ಜಾಹೀರಾತುಗಳ ಜೊತೆಗೆ ಎಲೆಕ್ಟ್ರಾನಿಕ್ ಮೀಡಿಯಾ, ಇಂಟರ್‌ನೆಟ್, ವೆಬ್’ಸೈಟ್ ಜಾಹೀರಾತುಗಳನ್ನು ಸೇರಿಸಲಾಗಿದೆ. ವಸ್ತುಗಳನ್ನು ಕೊಂಡುಕೊಳ್ಳುವುದರ ಕಾಯ್ದೆ ಜೊತೆಗೆ ಆನ್’ಲೈನ್ ಮತ್ತು ಎಲೆಕ್ಟ್ರಾನಿಕ್ ಅಥವಾ ಟೆಲಿಶಾಪಿಂಗ್ ಮೂಲಕ ನೇರವಾಗಿ ಅಥವಾ ಪರೋಕ್ಷವಾಗಿ ಕೊಂಡುಕೊಳ್ಳುವುದರ ಮೊಕದ್ದಮೆಗಳನ್ನು ಸೇರಿಸಲಾಗಿದೆ. ಹಾಗೆಯೇ ಇ-ಕಾಮರ್ಸ್ ವಸ್ತುಗಳನ್ನು ಕೊಂಡುಕೊಳ್ಳುವುದು ಮತ್ತು ಮಾರುವಿಕೆ ವ್ಯಾಜ್ಯಗಳ ಜೊತೆ ಡಿಜಿಟಲ್ ಪ್ರಾಡಕ್ಟ್‌ ಅಥವಾ ಎಲೆಕ್ಟ್ರಾನಿಕ್ ನೆಟ್‌ವರ್ಕ್ ವ್ಯಾಜ್ಯಗಳನ್ನು ಸಹ ಸೇರಿಸಲಾಗಿದೆ ಎಂದವರು ತಿಳಿಸಿದರು.

ರಕ್ತ, ರಕ್ತದ ಕಣಗಳು, ರಕ್ತಕ್ಕೆ ಸಂಬಂಧಿಸಿದ ಯಾವುದೇ ಪ್ರಾಡೆಕ್ಟ್‌ ಮತ್ತು ಆರ್ಗನೈಸರ್ಸ್‌’ಗಳನ್ನು ಗೂಡ್ಸ್‌ ಡೆಫಿನೇಷನ್‌ನಿಂದ ಹೊರತುಪಡಿಸಲಾಗಿದೆ. ವಸ್ತುಗಳನ್ನು ತಯಾರಿಸುವವನ ಜೊತೆ ಮಾರುವವನು ಹಾಗೂ ಸರ್ವಿಸ್ ಪ್ರೊವೈಡರ್‌ಗಳನ್ನು ಸಹ ಸೇವಾ ನ್ಯೂನತೆಗೆ ಸಂಬಂಧಿಸಿದ ಕೇಸ್‌ಗಳಲ್ಲಿ ಒಳಪಡಿಸಬಹುದಾಗಿದೆ. ಜೊತೆಯಲ್ಲಿ ಪ್ರಾಡೆಕ್ಟ್‌ ಲೈಯಾಬಿಲಿಟಿ ಆಕ್ಷನ್ ಎಂಬ ಅಂಶವನ್ನು ಸೇರಿಸಿ ಇದರಲ್ಲಿ ಆ ಪ್ರಾಡೆಕ್ಟ್‌ನಿಂದ ಕೊಂಡುಕೊಂಡ ವ್ಯಕ್ತಿಗೆ ಯಾವುದೇ ತೊಂದರೆ ಆದಲ್ಲಿ ಪ್ರಾಡಕ್ಟ್‌’ಗೆ ಸಂಬಂಧಿಸಿದ ಎಲ್ಲಾ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.

ಸೆಂಟ್ರಲ್ ಕನ್ಸೂಮರ್ ಕೌನ್ಸಿಲ್‌ಗಳಲ್ಲಿ ಇನ್‌ವೆಸ್ಟಿಗೇಷನ್ ವಿಂಗ್‌ಗಳನ್ನು ಹೊಸದಾಗಿ ಜಾರಿಗೆ ತರಲಾಗಿದೆ. ಸೆಂಟ್ರಲ್ ಕನ್ಸೂಮರ್ ಕೌನ್ಸಿಲ್‌ಗಳು ಇನ್‌ವೆಸ್ಟಿಗೇಷನ್ ಮಾಡಿಕೊಟ್ಟಂತಹ ರಿಪೋರ್ಟಿನ ಆಧಾರದ ಮೇಲೆ ಯಾವುದೇ ಸುಳ್ಳು ಜಾಹಿರಾತು ಎಂದು ತಿಳಿದು ಬಂದಲ್ಲಿ ಅವರ ವಿರುದ್ಧ 10 ಲಕ್ಷದವರೆಗೆ ದಂಡ ವಿಧಿಸಲು ಸೆಂಟ್ರಲ್ ಅಥಾರಿಟಿಗೆ ಅಧಿಕಾರ ನೀಡಲಾಗಿದೆ. ಸುಳ್ಳು ಜಾಹೀರಾತು ಪುನಃ ಮರುಕಳಿಸಿದರೆ ಅದಕ್ಕೆ 50 ಲಕ್ಷದವರೆಗೆ ದಂಡ ವಿಧಿಸಲು ಅಧಿಕಾರ ನೀಡಲಾಗಿದೆ. ಜಾಹೀರಾತಿನ ಪ್ರಾಡಕ್ಟ್‌’ಗಳ ಬಗ್ಗೆ 1 ವರ್ಷದವರೆಗೆ ಯಾವುದೇ ಜಾಹೀರಾತು ನೀಡದಂತೆ ಪ್ರತಿಬಂಧಿಸುವ ಅಧಿಕಾರ ಸಹ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನು ಮೀರಿ ಜಾಹೀರಾತು ನೀಡಿದಲ್ಲಿ ಆ ಒಂದು ವರ್ಷದಿಂದ ಮೂರು ವರ್ಷದವರೆಗೆ ವಿಸ್ತರಿಸಲು ಹಾಗೂ ಯಾವುದೇ ವ್ಯಕ್ತಿ ಸುಳ್ಳು ಜಾಹೀರಾತು ನೀಡಿದಲ್ಲಿ ಅವನಿಗೆ 10 ಲಕ್ಷದವರೆಗೆ ದಂಡ ವಿಧಿಸಲು ಅಧಿಕಾರವಿರುತ್ತದೆ ಎಂದು ತಿಳಿಸಿದರು.

ಜಿಲ್ಲಾ ಆಯೋಗವು ಗ್ರಾಹಕರಿಗೆ ಪರಿಹಾರ ಕೊಡಿಸುವ ಹಣದ ವ್ಯಾಪ್ತಿಯು 20 ಲಕ್ಷದಿಂದ 1 ಕೋಟಿಗೆ ವಿಸ್ತರಿಸಲಾಗಿದ್ದು, ರಾಜ್ಯ ಆಯೋಗಕ್ಕೆ ಒಂದು ಕೋಟಿಯಿಂದ ಹತ್ತು ಕೋಟಿಗೆ ಹಾಗೂ ರಾಷ್ಟ್ರೀಯ ಆಯೋಗಕ್ಕೆ 10 ಕೋಟಿಗಿಂತ ಹೆಚ್ಚಿರಬೇಕೆಂದು ಅವರು ತಿಳಿಸಿದರು.

ಮೊದಲು ಪಿರ್ಯಾದಿಯು ಯಾವ ಪ್ರದೇಶದಲ್ಲಿ ಪ್ರಾಡಕ್ಟ್‌’ನ್ನು ಕೊಂಡುಕೊಳ್ಳುವನೋ ಆ ಪ್ರದೇಶದ ವ್ಯಾಪ್ತಿಯಲ್ಲೇ ದೂರು ದಾಖಲಿಸಬೇಕಿತ್ತು. ಆದರೆ ಈಗ ಪಿರ್ಯಾದಿಯು ಎಲ್ಲೇ ಪ್ರಾಡಕ್ಟ್‌ನ್ನು ಕೊಂಡುಕೊಂಡರೂ ಅವನಿದ್ದ ಜಾಗದ ವ್ಯಾಪ್ತಿಯಲ್ಲಿರುವ ಜಿಲ್ಲಾ ಗ್ರಾಹಕರ ಆಯೋಗದ ಮುಂದೆ ದೂರು ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ಜಿಲ್ಲಾ ಗ್ರಾಹಕರ ಆಯೋಗದ ಮುಂದೆ ದೂರು ದಾಖಲಾದ 5 ದಿನದ ಒಳಗೆ ಇಬ್ಬರು ಪಕ್ಷಗಾರರು ಇಷ್ಟಪಟ್ಟಲ್ಲಿ ಈ ದೂರುಗಳನ್ನು 15 ದಿನದ ಒಳಗೆ ಮಧ್ಯಸ್ಥಿಕೆ ಕೇಂದ್ರಕ್ಕೆ ಚಾಪ್ಟರ್ 5 ರ ರೀತ್ಯಾ ಕಳುಹಿಸಿಕೊಡಲು ಅವಕಾಶ ಮಾಡಿಕೊಡಲಾಗಿದೆ. ಜಿಲ್ಲಾ ಆಯೋಗಕ್ಕೆ ತಾನು ಮಾಡಿದ ಆದೇಶವನ್ನು ಮರುಪರಿಶೀಲಿಸುವ ಅವಕಾಶವನ್ನು ಮಾಡಿಕೊಡಲಾಗಿದೆ. ರಾಜ್ಯ ಆಯೋಗಕ್ಕೆ ಒಬ್ಬ ಅಧ್ಯಕ್ಷರ ಜೊತೆಗೆ 4 ಜನ ಸದಸ್ಯರಿರುವುದನ್ನು ಕಡ್ಡಾಯಗೊಳಿಸಿದೆ. ಜಿಲ್ಲಾ ಆಯೋಗದಲ್ಲಿ ಒಬ್ಬ ಅಧ್ಯಕ್ಷರ ಜೊತೆ ಒಬ್ಬ ಸದಸ್ಯರಿರುತ್ತಾರೆ ಎಂದು ತಿಳಿಸಿದರು.

ವ್ಯಾಜ್ಯ ಅಪೀಲು ಮಾಡುವ ಸಂದರ್ಭದಲ್ಲಿ ಮೊದಲು ಇದ್ದ 25% ಡೆಪಾಸಿಟ್ ಬದಲು 50% ಮಾಡಲು ಇಚ್ಛಿಸಲಾಗಿದೆ. ರಾಷ್ಟ್ರೀಯ ಆಯೋಗಕ್ಕೆ ಯಾವುದೇ ಕರಾರಿನ ಅಂಶವನ್ನು ಶೂನ್ಯ ಕರಾರು ಎಂದು ಘೋಷಿಸಲು ಅಧಿಕಾರ ನೀಡಲಾಗಿದೆ. ರಾಷ್ಟ್ರೀಯ ಆಯೋಗವು ಯಾವುದೇ ತೀರ್ಪನ್ನು ನೀಡಲು ಮೊದಲು ವಿಷಯದ ಬಗ್ಗೆ ಸಂಶಯವಿದ್ದಲ್ಲಿ ಯಾವುದೇ ಎಕ್ಸ್‌’ಪರ್ಟ್‌ಗಳ ಸಹಾಯವನ್ನು ತೆಗೆದುಕೊಳ್ಳಬಹುದಾಗಿದೆ. ಮೇಲ್ಮನವಿ ಅರ್ಜಿಯನ್ನು ರಾಜ್ಯ ಆಯೋಗಕ್ಕೆ ಸಲ್ಲಿಸುವ ಅವಧಿಯನ್ನು 30 ದಿನಗಳಿಂದ 45 ದಿನಗಳವರೆಗೆ ಹೆಚ್ಚಿಸಲಾಗಿದೆ ಹಾಗೂ ರಾಜ್ಯ ಆಯೋಗದ ತೀರ್ಪನ್ನು ರಾಷ್ಟ್ರೀಯ ಆಯೋಗದ ಮುಂದೆ ಸಲ್ಲಿಸಲು 30 ದಿನಗಳ ಕಾಲಾವಕಾಶವನ್ನು ಉಳಿಸಿಕೊಳ್ಳಲಾಗಿದೆ ಎಂದರು.

ರಾಜ್ಯ ಸರ್ಕಾರ ಹಾಗೂ ರಾಜ್ಯ ಆಯೋಗಕ್ಕೆ ಮಧ್ಯಸ್ಥಿಕೆ ಕೇಂದ್ರ (ಮಿಡಿಯೇಷನ್ ಸೆಂಟರ್)ನ್ನು ರಚಿಸಲು ಅಧಿಕಾರ ವಹಿಸಲಾಗಿದ್ದು, ಮೀಡಿಯೇಷನ್ ಮುಂದೆ ರಾಜಿಯಾದ ಪ್ರಕರಣಗಳ ಬಗ್ಗೆ ಯಾವುದೇ ಅಪೀಲು ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದರು.

ಯಾವುದೇ ಗ್ರಾಹಕ ತಾನು ಕೊಂಡ ವಸ್ತುಗಳನ್ನು ದುರುಪಯೋಗ ಮಾಡಿಕೊಂಡಲ್ಲಿ ಅಥವಾ ಬದಲಾವಣೆ ಅಥವಾ ರಿಪೇರಿ ಮಾಡಿದಲ್ಲಿ ಅವನು ಪ್ರಾಡಕ್ಟ್‌ ಲೈಯಾಬಿಲಿಟಿಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಹಾಗೂ ಯಾವುದೇ ತಯಾರಕರು ಅಥವಾ ಸರ್ವಿಸ್ ಪ್ರೊವೈಡರ್ ಸುಳ್ಳು ಜಾಹೀರಾತು ನೀಡಿದಲ್ಲಿ ಎರಡು ವರ್ಷಗಳ ಶಿಕ್ಷೆಯ ಜೊತೆ 10 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ ಮತ್ತು ನಂತರವೂ ಮುಂದುವರೆಸಿದಲ್ಲಿ 5 ವರ್ಷದ ಶಿಕ್ಷೆಯ ಜೊತೆಗೆ 50 ಲಕ್ಷದವರೆಗೆ ದಂಡವನ್ನು ವಿಧಿಸಬಹುದಾಗಿದೆ ಎಂದು ತಿಳಿಸಿದರು.

Get in Touch With Us info@kalpa.news Whatsapp: 9481252093

Tags: AdvertisementConsumer CommissionConsumer CourtKannada News WebsiteLatestNewsKannadaMalnadNewsShivamoggaಜಿಲ್ಲಾ ಗ್ರಾಹಕರ ಆಯೋಗಜಿಲ್ಲಾ ಗ್ರಾಹಕರ ವೇದಿಕೆರಕ್ಷಣೆ ಗ್ರಾಹಕರಶಿವಮೊಗ್ಗ
Previous Post

ಮಕ್ಕಳ ಕೃಷಿ ಪ್ರವಾಸದ ಚಿಂತನೆಗೆ ಧನ್ಯವಾದ ಸಲ್ಲಿಸಿದ ಸಚಿವ ಬಿ.ಸಿ. ಪಾಟೀಲ್

Next Post

ಕೊರೋನಾ ಮುಂಜಾಗ್ರತೆ-ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ 10 ಹಾಸಿಗೆ ಮೀಸಲು: ಡಿಸಿ ಆದೇಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕೊರೋನಾ ಮುಂಜಾಗ್ರತೆ-ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ 10 ಹಾಸಿಗೆ ಮೀಸಲು: ಡಿಸಿ ಆದೇಶ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

20 ಸಾವಿರ ರೂ. ಮೌಲ್ಯದ AI ಶಿಕ್ಷಣ ಕಿಟ್ ಉಚಿತವಾಗಿ ಪಡೆಯಲು ಸುವರ್ಣಾವಕಾಶ

July 22, 2025

ಸೊರಬ | ಕುಬಟೂರಿನಲ್ಲಿ ನರಸಿಂಹಸ್ವಾಮಿ ಪೌರಾಣಿಕ ವಿಗ್ರಹ ಭಗ್ನಕ್ಕೆ ಖಂಡನೆ | ಮಾನಸಿಕ ಅಸ್ವಸ್ಥನಿಂದ ಕೃತ್ಯ?

July 22, 2025

ಮಹಾನ್ ಚೇತನ ಹೆಚ್. ಎಸ್ ವೆಂಕಟೇಶ್ ಮೂರ್ತಿ ಅವರಿಗೆ ಸಾರ್ಥಕ ಭಾವನಮನ

July 22, 2025

ಶರಾವತಿ ಸಂತ್ರಸ್ತರ ಬೆಳೆ ತೆರವು | ರೈತರ ಆಕ್ರೋಶ

July 22, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

20 ಸಾವಿರ ರೂ. ಮೌಲ್ಯದ AI ಶಿಕ್ಷಣ ಕಿಟ್ ಉಚಿತವಾಗಿ ಪಡೆಯಲು ಸುವರ್ಣಾವಕಾಶ

July 22, 2025

ಸೊರಬ | ಕುಬಟೂರಿನಲ್ಲಿ ನರಸಿಂಹಸ್ವಾಮಿ ಪೌರಾಣಿಕ ವಿಗ್ರಹ ಭಗ್ನಕ್ಕೆ ಖಂಡನೆ | ಮಾನಸಿಕ ಅಸ್ವಸ್ಥನಿಂದ ಕೃತ್ಯ?

July 22, 2025

ಮಹಾನ್ ಚೇತನ ಹೆಚ್. ಎಸ್ ವೆಂಕಟೇಶ್ ಮೂರ್ತಿ ಅವರಿಗೆ ಸಾರ್ಥಕ ಭಾವನಮನ

July 22, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!