ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸವಳಂಗ ರಸ್ತೆಯ ನವುಲೆ ಭಾಗದಲ್ಲಿ ಕೆಲವು ದಿನಗಳಿಂದ ರಾತ್ರಿ ವೇಳೆ ಚಿರತೆಯೊಂದು #Leapord ಓಡಾಡುತ್ತಿದೆ ಎಂಬ ವದಂತಿ ಹಬ್ಬಿದ್ದು, ಇದು ಸ್ಥಳೀಯರನ್ನು ಆತಂಕವನ್ನು ಸೃಷ್ಠಿಸಿದೆ.
ನವುಲೆಯ ಧವಳಗಿರಿ, ಇಂದಿರಾ ಬಡಾವಣೆ, ಶಿವಬಸವ ನಗರ, ಬಂಜಾರ ಸಭಾ ಭವನ, ಅರುಣೋದಯ ಶಾಲೆ ಹಿಂಭಾಗದ ಪ್ರದೇಶ, ಹೆಗ್ಗೇರಿ, ಶ್ರೀ ವೀರಭದ್ರೇಶ್ವರ ಬಡಾವಣೆ, ಸರ್ಕಾರಿ ನೌಕರರ ನೀಲಮ್ಮ ಜ್ಞಾನೇಶ್ವರ ಬಡಾವಣೆ, ಮಲ್ನಾಡ್ ಕೌಂಟಿ ಲೇಔಟ, ಸಾನ್ವಿ ಲೇಔಟ್ ಮೊದಲಾದ ಬಡಾವಣೆಗಳ ನಾಗರೀಕರು ಹಗಲು ರಾತ್ರಿ ಚಿರತೆಯ ಬಗ್ಗೆಯೇ ಯೋಚನೆ ಮಾಡುತ್ತಿದ್ದಾರೆ.
ಅರಣ್ಯ ಇಲಾಖೆಯ #ForestDepartment ಸಿಬ್ಬಂದಿಗಳು ಚಿರತೆಯ ಸೆರೆಗೆ ಶ್ರಮಿಸಿದರೂ ಫಲಕಾರಿಯಾದ ಬಗ್ಗೆ ವರದಿಯಾಗಿಲ್ಲ.
ಹಲವು ಮಂದಿ ಸ್ಥಳೀಯರು ಕೆಲವು ದಿನಗಳಿಂದ ರಾತ್ರಿ ವೇಳೆ ಚಿರತೆ ಓಡಾಡುತ್ತಿರುವುದನ್ನು ತಾವು ನೋಡಿರುವುದಾಗಿ ಹೇಳಿಕೊಂಡಿದ್ದಾರೆ ಎಂಬ ಮಾತುಗಳನ್ನು ಆಡಿರುವುದು ನವುಲೆ ಭಾಗದಲ್ಲಿ ಆತಂಕ ಮೂಡಿಸಿದೆ.
ನಿಜಕ್ಕೂ ರಾತ್ರಿ ವೇಳೆ ಈ ಭಾಗದಲ್ಲಿ ಚಿರತೆ ಓಡಾಡುತ್ತಿರುವುದು ಸತ್ಯವೇ ಅಥವಾ ಇಲ್ಲವೇ ಎಂಬ ಕುರಿತಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಷ್ಟನೆ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆದು, ಸ್ಥಳೀಯರ ಆತಂಕ ನಿವಾರಣೆ ಮಾಡಬೇಕಿದೆ.
ಒಂದು ವೇಳೆ ಚಿರತೆ ಓಡಾಡುತ್ತಿರುವುದು ನಿಜವೇ ಆಗಿದ್ದರೆ ಅದನ್ನು ಸೆರೆ ಹಿಡಿಯಬೇಕಿದೆ ಎಂಬುದು ಈ ಭಾಗದ ನಿವಾಸಿಗಳ ಮನವಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post