ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಕಡಿಮೆ ಮಾಡುವಂತೆ ಆಗ್ರಹಿಸಿ ಪೆಟ್ರೋಲ್ ಮತ್ತು ಡೀಸೆಲ್ ವರ್ತಕರ ಸಂಘ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.
ನಮ್ಮ ಸುತ್ತಮುತ್ತಲಿನ ಕೆಲವು ರಾಜ್ಯಗಳಲ್ಲಿ ಇಂಧನ ತೆರಿಗೆ ದರ ಕಡಿಮೆ ಇದ್ದು, ರಾಜ್ಯದಲ್ಲಿ ಕ್ರಮವಾಗಿ ಶೇ.35 ಮತ್ತು ಶೇ.24ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ತೆರಿಗೆ ದರ ಕಡಿಮೆ ಇರುವ ರಾಜ್ಯದ ಗಡಿಭಾಗಳಲ್ಲಿ ಇರುವ ನಮ್ಮ ವರ್ತಕರಿಗೆ ಗಣನೀಯವಾಗಿ ವ್ಯವಹಾರ ಕಡಿಮೆಯಾಗುತ್ತಿದ್ದು, ವರ್ತಕರ ಆದಾಯದಲ್ಲಿ ನಷ್ಟವಾಗುತ್ತಿದೆ. ಹಾಗೂ ರಾಜ್ಯದ ಆದಾಯವೂ ಸಹಾ ಅದೇ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಈಬಗ್ಗೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳ ಗಡಿ ಭಾಗಗದಲ್ಲಿರುವ ಸ್ಥಳಗಳ ಮತ್ತು ನಮ್ಮ ರಾಜ್ಯದ ಅದೇ ಗಡಿ ಭಾಗದಲ್ಲಿರುವ ಸ್ಥಳಗಳ ದರ ಹೆಚ್ಚು-ಕಡಿಮೆ ಒಂದೇ ಆಗಿದ್ದು, ಆ ರಾಜ್ಯಗಳ ವರ್ತಕರಿಗೆ ಹೆಚ್ಚು ವ್ಯವಹಾರವಾಗುತ್ತಿದ್ದು, ಇದರಿಂದ ಪರೋಕ್ಷವಾಗಿ ನಮ್ಮ ರಾಜ್ಯದ ಆದಾಯ ಬಹಳ ಕಡಿಮೆಯಾಗುತ್ತಿರುವುದನ್ನು ಈ ಹಿಂದಿನ ನಮ್ಮ ಮನವಿಗಳಲ್ಲಿ ವಿವರಿಸಿರುತ್ತೇವೆ ಎಂದು ತಿಳಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಪ್ರತಿದಿನ ವ್ಯತ್ಯಾಸವಾಗುತ್ತಿದ್ದು, ಕಳೆದ ಮೂರು ತಿಂಗಳಿನಲ್ಲಿ ಇವುಗಳ ದರದಲ್ಲಿ ವಿಪರೀತ ಏರಿಕೆಯಾಗಿದೆ. 2020 ಜನವರಿ 15ರಂದು ಇದ್ದ ದರ ಹಾಗೂ 2021 ಫೆಬ್ರವರಿ 15ರ ದರ ಇವುಗಳನ್ನು ಹೋಲಿಸಿದಾಗ ಪೆಟ್ರೋಲಿಗೆ ಲೀ.ಗೆ 9ರೂ ಮತ್ತು ಡೀಸೆಲ್ ಲೀ.ಗೆ 10ರೂ. ಹೆಚ್ಚಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಸುಮಾರು 3ರೂ. ಹಾಗೂ ಡೀಸೆಲ್ ಮೇಲೆ ಸುಮಾರು 2.50ರೂ ಹೆಚ್ಚುವರಿ ತೆರಿಗೆ ಆದಾಯ ಬರುತ್ತಿದೆ. ಆದ್ದರಿಂದ ಈ ಬಾರಿಯ ಬಜೆಟ್ ಮಂಡಿಸು ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್ಗೆ ಕನಿಷ್ಟ 2ರೂ ಕಡಿಮೆ ಮಾಡುವ ಮೂಲಕ ವರ್ತಕ ಸಮುದಾಯ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಳ್ಳಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post