ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಟಿಪ್ಪುನಗರದಲ್ಲಿ ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾದವರು ಸಯ್ಯದ್ ಇಮ್ರಾನ್(ರಿಹಾನ್) ಮತ್ತು ಸಯ್ಯದ್ ಸಾದಿಕ್ ಎಂದು ಹೇಳಲಾಗುತ್ತಿದ್ದು, ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮುಸುಕು ಹಾಕಿಕೊಂಡು ಕಾರಿನಲ್ಲಿ ಬಂದ ಸುಮಾರು ನಾಲ್ಕೈದು ಜನರ ಗುಂಪು ಇಮ್ರಾನ್ನನ್ನು ಟೀ ಕುಡಿಯುವ ನೆಪದಲ್ಲಿ ಮನೆಯಿಂದ ಹೊರ ಕರೆದು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಹಣಕಾಸಿನ ವಿಚಾರ ಹಾಗೂ ಹಳೇ ವೈಷ್ಯಮ್ಯ ಕುರಿತಂತೆ ಹಲ್ಲೆ ನಡೆದಿರುಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ರಿಹೂ ಆಲಿಯಾಸ್ ಇಮ್ರಾನ್ ಆಲಿಯಾಸ್ ಡಬ್ಬಲ್ ಟು ಈ ಹಿಂದೆ ಓಸಿ ನಡೆಸುತ್ತಿದ್ದನು ಎಂದು ಹೇಳಲಾಗುತ್ತಿದೆ. ಇಮ್ರಾನ್ನ ಎರಡೂ ಕೈಗಳು ಹಾಗೂ ಸಾದಿಕ್ ಎಂಬುವರ ಬೆರಳು ಮತ್ತು ಕಿವಿ ಭಾಗದಲ್ಲಿ ಗಾಯವಾಗಿದೆ ಎಂದು ತಿಳಿದುಬಂದಿದೆ.
ಇಮ್ರಾನ್ ಹಳೇ ವಾಹನ ಖರೀದಿ ಮತ್ತು ಮಾರಾಟ ಮಾಡುವ ವ್ಯಾಪಾರಸ್ಥರಾಗಿದ್ದು, ಮೊನ್ನೆ ರಾತ್ರಿ ಬಚ್ಚಾ ಕಡೆಯವರು ಬಂದು ಹಣಕೊಡುವಂತೆ ಒತ್ತಾಯಿಸಿದ್ದು, ಬಚ್ಚಾ ಜೈಲಿನಲ್ಲಿದ್ದರೂ ತೌಸೀಫ್ ಎಂಬ ಯುವಕನ ಮೂಲಕ ಫೋನ್ ಮಾಡಿಸಿದ್ದನು. ಈ ಕುರಿತು ಇಮ್ರಾನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post