ಶಿವಮೊಗ್ಗ: ನವರಾತ್ರಿ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಭಿನ್ನ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿರುವ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಈ ಬಾರಿಯೂ ಸಹ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಈ ಅಂಗವಾಗಿ ಆರ್ಟ್ ಆಫ್ ಲಿವಿಂಗ್ನ ಸುಪ್ರಸಿದ್ದ ಗಾಯಕ ಸುದರ್ಶನ್ ಜೀ ಅವರಿಂದ ಅಕ್ಟೋಬರ್ 10ರಂದು ಸಂಜೆ 6 ಗಂಟೆಗೆ ದಿವ್ಯ ಸತ್ಸಂಗವನ್ನು ಆಯೋಜಿಸಲಾಗಿದೆ.
ಸತ್ಸಂಗ ರವೀಂದ್ರ ನಗರ ಗಣಪತಿ ದೇವಾಲಯದಲ್ಲೇ ನಡೆಯಲಿದ್ದು, ಭಜನಾ ಪರಿಷತ್ ಸದಸ್ಯರು, ಹಲವು ಭಜನಾ ಮಂಡಳಿಗಳ ಸದಸ್ಯ ಸಹಕಾರ ನೀಡಿದ್ದಾರೆ.
ಮಾಹಿತಿಗೆ ಶಬರೀಶ್ ಕಣ್ಣನ್(9964072793) ಅವರನ್ನು ಸಂಪರ್ಕಿಸಬಹುದು.
Discussion about this post