ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದುಳಿದ ವರ್ಗಗಳ ಕಲ್ಯಾಣ ಕಾಮಗಾರಿಗಳಿಗಾಗಿ ಮೀಸಲಿಟ್ಟ 312 ಕೋಟಿ ರೂ. ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು #CM Siddaramaiah ವಾಪಾಸ್ಸು ತೆಗೆದುಕೊಂಡು ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ #K S Eshwarappa ಇಂದು ಗಂಭೀರ ಆರೋಪ ಮಾಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತ ಇದೆ. ಈ ಹಿಂದೆ ದಲಿತರಿಗಾಗಿ ಮೀಸಲಿಟ್ಟ ಹಣವನ್ನು ಸರ್ಕಾರ ವಾಪಾಸ್ಸು ತೆಗೆದುಕೊಂಡಿತ್ತು. ಇದೀಗ ಮತ್ತೆ ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗಾಗಿ ವಿವಿಧ ಸಂಘ ಸಂಸ್ಥೆಗಳು ನಿರ್ವಹಿಸಿದ್ದ ಕಾಮಗಾರಿಗಳಿಗೆ ಹಣವನ್ನು ಬಿಡುಗಡೆ ಮಾಡದೇ ಮತ್ತು ಅದಕ್ಕಾಗಿ ಮೀಸಲಿಟ್ಟಿದ್ದ ಸುಮಾರು ೩೧೨ ಕೋಟಿ ರೂ.ಗಳನ್ನು ಹಿಂತೆಗೆದುಕೊಂಡಿದೆ. ಇದು ಘೋರ ಅನ್ಯಾಯವಾಗಿದ್ದು, ತಕ್ಷಣವೇ ಈ ಹಣವನ್ನು ವಾಪಾಸ್ಸು ನೀಡಬೇಕು ಎಂದರು.

ಆಶ್ರಯ ಮನೆಯ ಹೋರಾಟ ಮುಂದುವರೆದಿದೆ. ಈ ಹಿಂದೆ ವಸತಿ ಸಚಿವ ಜಮೀರ್ ಅಹಮ್ಮದ್ ಅವರು ನಮ್ಮನ್ನು ಬರ ಹೇಳಿದ್ದರು. ಅವರೇ ಸಮಯ ನೀಡಿದ್ದರು, ಶಿವಮೊಗ್ಗದ ಆಶ್ರಯ ಬಡಾವಣೆಯ ವಿಷಯಕ್ಕೆ ಸಂಬಂಧಿಸಿದಂತೆ ಬಡವರಿಗೆ ಮನೆಕೊಡಲು ಈ ಹಿಂದೆಯೇ ಅವರಿಗೆ ಆಗ್ರಹಿಸಿದ್ದೇವು. ಅಲ್ಲಿಗೆ ಹೋದರೆ ಅವರು ವಿದೇಶಿ ಯಾತ್ರೆಗೆ ಹೋಗಿದ್ದರು. ನಮ್ಮನ್ನು ಬರ ಹೇಳಿ ಹೀಗೆ ಹೋಗಿದ್ದು ನಮಗೆ ಬೇಸರ ತರಸಿದೆ. ಈಗಲಾದರೂ ಅವರು ಶಿವಮೊಗ್ಗಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸಿ ಆಶ್ರಯ ಮನೆಗಳನ್ನು ನೀಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟಸ್ವರೂಪವೇ ಬೇರೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Also read: ದೆಹಲಿ | ಕೋಚಿಂಗ್ ಸೆಂಟರ್’ನಲ್ಲಿ ಯುಪಿಎಸ್’ಪಿ ಆಕಾಂಕ್ಷಿಗಳ ಸಾವು | ಐವರ ಬಂಧನ
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿಗಳೇ ನಿಂತು ಹೋಗಿವೆ, ರೈತರ ಬೆಳೆ ನಾಶವಾಗಿವೆ, ಪ್ರಕೃತಿ ವಿಕೋಪಗಳಗಿವೆ, ಪರಿಹಾರದ ಭರವಸೆಗಳು ಇಲ್ಲ, ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ, ಹೊಸ ಕಾಮಗಾರಿಗಳು ಮೊದಲೇ ಇಲ್ಲ, ಇದರ ಜೊತೆಗೆ ರಾಶಿರಾಶಿ ಹಗರಣಗಳು ಸರ್ಕಾರವನ್ನು ಸುತ್ತಿಕೊಂಡಿವೆ, ಸರ್ಕಾರ ಜೀವಂತವಾಗಿಲ್ಲ ಎಂದು ಆರೋಪಿಸಿದರು.

ಮುಸ್ಲಿಂರನ್ನು ಓಲೈಸುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ರಾಮನಗರ ಊರಿನ ಹೆಸರನ್ನು ಬದಲಾವಣೆ ಮಾಡಿ ಬೆಂಗಳೂರು ದಕ್ಷಿಣ ಭಾಗಕ್ಕೆ ಸೇರಿಸಲು ಹೊರಟಿದೆ. ರಾಮ ಎಂಬ ಹೆಸರು ಕಂಡರೆ ಇವರಿಗೆ ಅದೇಕೋ ಆಗಿ ಬರುತ್ತಿಲ್ಲ, ಹಿಂದುತ್ವದ ವಿಚಾರ ಬಂದರೆ ಮೈಮೇಲೆ ಬಂದವರಂತೆ ಮಾಡುತ್ತಾರೆ. ಇದು ಸಲ್ಲದು, ರಾಮನಗರವನ್ನು ಅದೇ ಹೆಸರಿನಲ್ಲಿ ಉಳಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗಶಾಸ್ತ್ರಿ, ಈ.ವಿಶ್ವಾಸ್, ಎಂ.ಶಂಕರ್, ಶಂಕರ್ಗನ್ನಿ, ಶ್ರೀಕಾಂತ್, ಜಾಧವ್, ಮೋಹನ್, ರಾಚಯ್ಯ, ಅ.ಮಾ.ಪ್ರಕಾಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post