ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತನ್ನ ಮಗುವಿಗೆ ಕುಡಿಸಲು ಎದೆಯಲ್ಲಿ ಹಾಲಿಲ್ಲ ಎಂದು ಮನನೊಂದು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೊರಬ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕುಪ್ಪಗುಡ್ಡೆಯಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಶಾಂತಾ (28) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ:
ಜಡೇಹಳ್ಳಿ ಗ್ರಾಮಕ್ಕೆ ಮದುವೆಯಾಗಿ ಬಂದಿದ್ದ ಶಾಂತಾ ಅವರು ಹೆರಿಗೆ ಹಾಗೂ ಬಾಣಂತನಕ್ಕೆ ತವರುಮನೆಗೆ ತೆರಳಿದ್ದರು. ಒಂದೂವರೆ ತಿಂಗಳ ತನ್ನ ಮಗುವಿಗೆ ಕುಡಿಸಲು ಎದೆಯಲ್ಲಿ ಹಾಲು ಸರಿಯಾಗಿ ಬರುತ್ತಿಲ್ಲ ಎಂದು ಈಕೆ ಬಹಳಷ್ಟು ಬಾರಿ ನೊಂದುಕೊಂಡಿದ್ದರಂತೆ.
ಈ ಬೆಳವಣಿಗೆಯ ನಂತರ ಈಕೆ ಕಾಣೆಯಾಗಿದ್ದರು ಎಂದು ವರದಿಯಾಗಿದೆ. ಈಕೆಯನ್ನು ಹುಡುಕಾಟ ನಡೆಸುತ್ತಿದ್ದ ವೇಳೆ ತುಂಬೆ ಹೊಂಡದಲ್ಲಿ ಮಗುವಿನ ಶವ ದೊರೆತಿದ್ದು, ಇದರ ಬೆನ್ನಲ್ಲೇ ತಾಯಿತ ಶವವೂ ಸಹ ದೊರೆತಿದೆ.
Also read: ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ: ಸಂಸದ ರಾಘವೇಂದ್ರ ಹೇಳಿದ್ದೇನು?
ಈ ಸಂಬಂಧ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post