ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಶ್ರಯದಲ್ಲಿ ಗುರು ಪೌರ್ಣಿಮೆ ಅಂಗವಾಗಿ ಜುಲೈ 3 ರಿಂದ 8 ರವರೆಗೆ ಒಂದು ವಾರಗಳ ಕಾಲ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮಾರ್ಗದರ್ಶಕ ಶಬರೀಶ್ ಕಣ್ಣನ್ ಹೇಳಿದರು.
ನಗರದ ವಿನೋಬನಗರ, 60 ಅಡಿ ರಸ್ತೆ, 12 ನೇ ತಿರುವಿನ ಶ್ರೀಮತಿ ಚಂದ್ರಮ್ಮನವರ “ಸಹನಿ” ಮನೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹೊಯ್ಸಳ ಸೊಸೈಟಿ ಅಧ್ಯಕ್ಷ ಎಂ. ಶಂಕರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಖ್ಯಾತ ಉದ್ಯಮಿ ಅಶ್ವಥ್ ನಾರಾಯಣ ಶೆಟ್ಟಿ ವಹಿಸುವರು ಎಂದರು.
ವಿದ್ವಾನ್ ಹಂದಲಸು ವಾಸುದೇವ ಭಟ್ ರವರಿಂದ “ಅಪಾರ ಮಹಿಮಾ ಗುರು ಮಹಿಮಾ” ಎಂಬ ವಿಷಯದ ಬಗ್ಗೆ ಪ್ರವಚನ ನಡೆಯಲಿದ್ದು, ನಂತರದ ಐದು ದಿನಗಳ ಕಾಲ ಪ್ರತಿದಿನ ಸಂಜೆ 7 ಗಂಟೆಯಿಂದ ರಿಂದ 8.15 ಗಂಟೆಯವರೆಗೆ “ಗುರುಮಹಿಮೆ” ಕುರಿತಾದ ಉಪನ್ಯಾಸ ಕಾರ್ಯಕ್ರಮ ವಿದ್ವಾನ್ ವಿನಾಯಕರಾವ್ ರಿಂದ ನಡೆಯಲಿದೆ ಎಂದು ಅವರು ಹೇಳಿದರು.
Also read: ಮಣಿಪುರದ ಚುರಚಂದಪುರ ನಿರಾಶ್ರಿತರ ಶಿಬಿರಕ್ಕೆ ರಾಹುಲ್ ಗಾಂಧಿ ಭೇಟಿ
ಪ್ರತಿದಿನ ಸಂಜೆ 6.30 ಗಂಟೆಯಿಂದ ಸಾಮೂಹಿಕ ಜಪ, ಭಜನೆ ಹಾಗೂ ಧ್ಯಾನ, ಮಂಗಳಾರತಿ, ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿದೆ. ಭಕ್ತಾದಿಗಳು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗುರುವಿನ ಕೃಪೆಗೆ ಪಾತ್ರರಾಗಬೇಕಾಗಿ ಶಬರೀಶ್ ಕಣ್ಣನ್ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9964072793 ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post