ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾವುದೇ ದಿನಾಚರಣೆಗಳು ಹಾಗೂ ಹುಟ್ಟು ಹಬ್ಬಗಳು ಮತ್ತು ವಿವಾಹ ವಾರ್ಷಿಕೋತ್ಸವಗಳು ಸಮಾಜಮುಖಿಯಾಗಿರಬೇಕು ಹಾಗೂ ಅರ್ಥಪೂರ್ಣವಾಗಿರಬೇಕು. ಸಡಗರ ಸಂಭ್ರಮದ ಜೊತೆಗೆ ಮನುಕುಲದ ಸೇವೆಯು ಸಹ ಮುಖ್ಯ ಎಂದು ಇನ್ನರ್ವಿಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅಭಿಮತ ವ್ಯಕ್ತಪಡಿಸಿದರು.
ಆಕಾಶ್ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ಸಾಕಷ್ಟು ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಇದ್ದಾರೆ. ಅವರಿಗೆ ಸಲಹೆ ಸಹಕಾರ ನೀಡುವುದರಿಂದ ಅವರ ಬದುಕು ಹಸನವಾಗುತ್ತದೆ. ಹಾಗೂ ನಮ್ಮ ಸಂಸ್ಥೆಯ ಗೌರವವು ಹೆಚ್ಚಾಗುತ್ತೆ ಎಂದು ನುಡಿದರು.

Also read: ಬಾಂಬ್ ಬೆದರಿಕೆ ಹಿನ್ನೆಲೆ : ಮುಂಬೈನಿಂದ ನ್ಯೂಯಾರ್ಕ್ಗೆ ತೆರಳುತ್ತಿದ್ದ ವಿಮಾನ ವಾಪಾಸ್
ಕಾರ್ಯಕ್ರಮದಲ್ಲಿ ಇನ್ನರ್ವಿಲ್ ಸಂಸ್ಥೆ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಮೂರು ಜನ ಮಹಿಳೆಯರಾದ ಅಂಕಿತ, ಕಾಮಾಕ್ಷಿ ಹಾಗೂ ಭಾಗ್ಯ ಇವರಿಗೆ ಹೊಲಿಗೆ ಯಂತ್ರಗಳನ್ನ ವಿತರಿಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post