ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ಬಯಲಾಗಿದ್ದು, ಇದರ ತನಿಖೆ ವೇಳೆ ದಾಖಲೆ ಪತ್ತೆಯಾಗಿರುವ ದೇಶ ವಿರೋಧಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಬೇಕು ಎಂದು ಜಿಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ಕೆ.ಈ. ಕಾಂತೇಶ್ K E Kantesh ಆಗ್ರಹಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇತ್ತೀಚೆಗೆ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿರವರನ್ನು ಹತ್ಯೆಗೈಯುವ ಸಂಚು ಬಯಲಾಗಿದ್ದು, ಈ ಸಂದರ್ಭದಲ್ಲಿ ತನಿಖೆಯಿಂದ ಹೊರ ಬಂದ ಸತ್ಯವು ಆಘಾತಕಾರಿಯಾಗಿದೆ ಎಂದು ಕಿಡಿ ಕಾರಿದ್ದಾರೆ.

Also read: ತಾಂತ್ರಿಕ ಕಾರಣಗಳಿಂದ ವಸತಿ ಯೋಜನೆ ಪರಿಹಾರ ವಿಳಂಬ: ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್
ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಯ ಸಂಚಿನ ವಿಷಯವಾಗಿ ಯಾವುದೇ ಪ್ರತಿಪಕ್ಷದ ನಾಯಕರುಗಳು ಖಂಡಿಸದಿರುವುದು ಅತ್ಯಂತ ದುರದೃಷ್ಟಕರ. ದೇಶದ ಅಖಂಡತೆಗೆ ಧಕ್ಕೆ ತರುವಂತಹ ವಿಷಯ ಬಂದರೂ ಪ್ರತಿಪಕ್ಷಗಳು ಒಟ್ಟಾಗಿ ನಿಲ್ಲದೆ ಆಂತರಿಕ ರಾಜಕೀಯದಲ್ಲಿ ನಿರತವಾಗಿರುವುದು ಅತ್ಯಂತ ವಿಷಾದನೀಯ ಎಂದಿದ್ದಾರೆ.

ಸಮಾಜದಲ್ಲಿ ಕೋಮು ಸೌಹಾರ್ದತೆ, ಶಾಂತಿ-ಸಹಬಾಳ್ವೆಯ ಪಾಠ ಬರಿಯ ಹಿಂದೂಗಳಿಗೆ ಮಾತ್ರವಾಗಬಾರದು. ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆಯಾಗಬೇಕು ಹಾಗೂ ದೇಶ ವಿರೋಧಿ ಎಫ್’ಐ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು ಎಂದು ಕಾಂತೇಶ್ ಆಗ್ರಹಿಸಿದ್ದಾರೆ.










Discussion about this post