ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಿಳಾ ಸಬಲೀಕರಣದಲ್ಲಿ ಶಿಕ್ಷಣವೇ ಮೊದಲ ಪ್ರಮುಖ ವಿಚಾರವಾಗಿದ್ದು ಮಹಿಳಾ ಶಿಕ್ಷಣದಿಂದ ಮಾತ್ರ ಉತ್ತಮ ಸಮುದಾಯ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅಭಿಪ್ರಾಯಪಟ್ಟರು.
Also read: ಮಲೆನಾಡಿನ ನೆಟ್ ವರ್ಕ್ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಬದ್ಧ: ಸಂಸದ ರಾಘವೇಂದ್ರ
ವ್ಯಕ್ತಿತ್ವ ವಿಕಸನದಲ್ಲಿ ಯಾವುದೇ ಜಾತಿ ಧರ್ಮ ಅಡ್ಡಿಯಾಗಬಾರದು. ಎಲ್ಲಿ ಅತಿ ಹೆಚ್ಚು ಬಡತನ, ಅವಮಾನಗಳಿರುತ್ತದೆ ಅಲ್ಲಿ ಯಶಸ್ಸಿನ ಪರಿಶ್ರಮ ಹೆಚ್ಚಿರುತ್ತದೆ. ಮನೆಯ ಸಾಂಸ್ಕೃತಿಕ ವಾತಾವರಣ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ಸಾಹಿತ್ಯ ಸಾಂಸ್ಕೃತಿಕ ವ್ಯಕ್ತಿತ್ವ ವಿಕಸನದ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.
ಸರ್ಕಾರ ನಮಗೆ ಕೊಡುತ್ತಿರುವುದು ಸವಲತ್ತುಗಳಲ್ಲ ಅದು ಜವಾಬ್ದಾರಿ. ನಮ್ಮ ಕಣ್ಣಿಗೆ ತುಪ್ಪವನ್ನು ಸವರಿದ ಖಡ್ಗವನ್ನು ಇಂದಿನ ರಾಜಕೀಯ ವ್ಯವಸ್ಥೆಯಿಂದ ನೀಡಲಾಗುತ್ತಿದೆ. ತುಪ್ಪದ ಸವಿಗೆ ಖಡ್ಗವನ್ನು ನೆಕ್ಕುವಾಗ ಖಡ್ಗ ನಮ್ಮ ನಾಲಿಗೆಯನ್ನು ಕತ್ತರಿಸಬಹುದು ಎಂಬ ಅರಿವೆ ಇಲ್ಲದಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ. ನಾರಾಯಣ್, ನಿರ್ದೇಶಕರಾದ ಹೆಚ್.ಸಿ. ಶಿವಕುಮಾರ್, ಕಸ್ತೂರಬಾ ಬಾಲಿಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಂಗಪ್ಪ, ಉಪ ಪ್ರಾಂಶುಪಾಲರಾದ ಉಮೇಶ್, ಕಾಲೇಜಿನ ಪ್ರಧಾನಿ ಕೆ.ವಿ. ಇಂಚರ, ವಿರೋಧ ಪಕ್ಷದ ನಾಯಕಿ ವೇದಿಕಾ ಎನ್.ರಾಯ್ಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post