ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ KSEshwarappa 75ನೇ ಹುಟ್ಟುಹಬ್ಬದ ಅಮೃತ ಸಂಭ್ರಮ ಪ್ರಯುಕ್ತ ಶ್ರೀ ಮಾರಿಕಾಂಬಾ ಮೈಕ್ರೋ ಫೈನಾನ್ಸ್ ಪ್ರೈ.ಲಿ. ಶಿವಮೊಗ್ಗ ಇದರ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಲದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಮಹಿಳೆಯರಿಂದಲೇ ಅತ್ಯುತ್ತಮವಾಗಿ ಕುಟುಂಬ ನಿರ್ವಹಣೆ ಸಾಧ್ಯ. ಮನೆಯೊಡತಿ ಇದ್ದಾಗ ಮಾತ್ರ ಮನೆಗೆ ಲಕ್ಷಣ. ಒಂದು ಮನೆಯನ್ನು ಒಳಗಿರುವ ವಸ್ತುಗಳ ಮೇಲೆ ಅಳೆಯುವುದಲ್ಲ. ಆ ಮನೆಯ ಸಂಸ್ಕಾರ ಮತ್ತು ಸಂಸ್ಕøತಿಯನ್ನು ನೋಡಿ ಅಳೆಯಬೇಕು. ಎಲ್ಲವನ್ನೂ ಒಳಗೊಳ್ಳುವ ಶಕ್ತಿ ಇರುವುದು ಮಾತೆಗೆ ಮಾತ್ರ. ಅನೇಕ ಕುಟುಂಬಗಳು ಇತ್ತೀಚಿನ ದಿನಗಳಲ್ಲಿ ಮನೆಯೊಡತಿ ಇಲ್ಲದೆ ಅನಾಥವಾಗಿವೆ. ಕುಟುಂಬವನ್ನು ಸಂಸ್ಕಾರ ಸಂಸ್ಕøತಿಯಿಂದ ಮುನ್ನಡೆಸುವ ಜವಾಬ್ದಾರಿ ತಾಯಂದಿರದ್ದು. ಅನೇಕ ಪುರುಷರು ದುಶ್ಚಟ ಮತ್ತು ಅವ್ಯವಹಾರಗಳಿಗೆ ಬಲಿಯಾಗಿ ಕುಟುಂಬಕ್ಕೆ ಮಾರಕವಾಗುತ್ತಾರೆ ಈ ಸಂದರ್ಭದಲ್ಲಿಕುಟುಂಬದ ಜವಾಬ್ದಾರಿಯನ್ನು ಹೊತ್ತು ಹೆಣ್ಣು ಮಕ್ಕಳು ಅಚ್ಚುಕಟ್ಟಾಗಿ ರೂಪಿಸುತ್ತಾರೆ. ಅವರಿಗೆ ನೀಡುವ ಆರ್ಥಿಕ ಸಹಾಯ ವ್ಯರ್ಥವಾಗುವುದಿಲ್ಲ ಎಂದರು.
ಚಿತ್ರನಟಿ ತಾರಾ ಅನುರಾಧ ಮಾತನಾಡಿ, ನನ್ನ ರಾಜಕೀಯ ಪ್ರವೇಶಕ್ಕೆ ಈಶ್ವರಪ್ಪನವರೇ ಕಾರಣ. ಅವರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಹಮ್ಮಿಲ್ಲದೆ ಪ್ರೀತಿಯಿಂದ ಮಾತನಾಡಿ, ಮಾರ್ಗದರ್ಶನ ಮಾಡುವುದು ಅವರ ದೊಡ್ಡತನ. ನೂರಾರು ಸಂಘ ಸಂಸ್ಥೆಗಳಿಗೆ ಸಾಲ ನೀಡಿದರೂ ಕೂಡ ಒಂದೇ ಒಂದು ಎನ್ಪಿಎ ಇಲ್ಲದೆ ಸಾಲ ಮರುಪಾವತಿ ಮಾಡಿರುವುದು ಒಂದು ದೊಡ್ಡ ಸಾಧನೆ. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಕೂಡ ಖುಷಿಪಡುವ ವಿಚಾರ. ಮಕ್ಕಳು ಸಾಧನೆ ಮಾಡಿದಾಗ ತಂದೆತಾಯಿಗಳಿಗೆ ಮೊದಲು ಅತ್ಯಂತ ಖುಷಿಯಾಗುತ್ತದೆ. ಇಂದು ಪ್ರತಿಭಾ ಪುರಸ್ಕಾರ ಪಡೆದವರನ್ನು ನೋಡಿ ಇನ್ನೂ ಹೆಚ್ಚಿನ ಮಕ್ಕಳು ಸಾಧನೆ ಮಾಡಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಈ.ಕಾಂತೇಶ್, ಮಾರಿಕಾಂಬಾ ಮೈಕ್ರೋ ಫೈನಾನ್ಸ್ ಕೇವಲ ವ್ಯಾವಹಾರಿಕ ಸಂಸ್ಥೆಯಲ್ಲ. ಸಂಸ್ಥೆಯ ಲಾಭದ ಅರ್ಧದಷ್ಟು ಮಹಿಳೆಯರ ಮತ್ತ ಸದಸ್ಯರ ಮಕ್ಕಳಿಗಾಗಿ ವಿನಿಯೋಗಿಸುತ್ತಿದ್ದೇವೆ. ಸುಮಾರು 70ಕೋಟಿಯಷ್ಟು ಸಾಲವನ್ನು 1200 ಮಹಿಳಾ ಸಂಘಗಳಿಗೆ ವಿತರಿಸಿದ್ದೇವೆ. 500ಕ್ಕೂ ಹೆಚ್ಚು ಅಂಕ ಪಡೆದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯ 103 ವಿದ್ಯಾರ್ಥಿಗಳಿಗೆ ಈ ಬಾರಿ ಸ್ಕಾಲರ್ಶಿಪ್ ನೀಡಿದ್ದೇವೆ. ಕಳೆದ ಬಾರಿ ಸುಮಾರು 9ಸಾವಿರ ಹೆಣ್ಣುಮಕ್ಕಳಿಗೆ ಸೀರೆ ಮತ್ತು ಬಾಗಿನವನ್ನು ನೀಡಿದ್ದೇವೆ ಎಂದರು.
Discussion about this post