Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುವ ಉದ್ಯಮಿ ಶರತ್ ಭೂಪಾಳಂ ಹಾಗೂ ಸರ್ಜಿ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಚ್.ಎಸ್. ಸತೀಶ್ ಅವರ ಸ್ಮರಣಾರ್ಥ ಭಾನುವಾರ ನಗರದಲ್ಲಿ ಶಿವಮೊಗ್ಗ ರನ್ ಮ್ಯಾರಥಾನ್ ನಡೆಯಿತು.
ಶಿವಮೊಗ್ಗ ಸ್ಟೆಪ್ ಹೋಲ್ಡರ್ಸ್ ಡಾನ್ಸ್ ಸ್ಟುಡಿಯೋ, ರೌಂಡ್ ಟೇಬಲ್ ಶಿವಮೊಗ್ಗ ಘಟಕ ಹಾಗೂ ಸರ್ಜಿ ಫೌಂಡೇಷನ್ ಆಶ್ರಯದಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು. ಮಕ್ಕಳು, ಮಹಿಳೆಯರು ಹಾಗೂ ಪುರುಷರ ವಿಭಾಗದ ಮ್ಯಾರಥಾನ್ನಲ್ಲಿ 300ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಸುಮಾರು 4 ಕಿ.ಮೀ. ಮ್ಯಾರಥಾನ್ಗೆ ಶಿವಮೊಗ್ಗ ಟೇಬಲ್-166 ಘಟಕದ ಚೇರ್ಮನ್ ಟಿ.ಆರ್. ಕಾರ್ತಿಕ್ ಚಾಲನೆ ನೀಡಿದರು. ಮ್ಯಾರಥಾನ್ ಜೈಲ್ ಗೇಟ್ನಿಂದ ಆರಂಭಗೊಂಡು ಉಷಾ ನರ್ಸಿಂಗ್ ಹೋಂ, ನೆಹರು ಸ್ಟೇಡಿಯಂ ಸರ್ಕಲ್, ಜೈಲ್ ಸರ್ಕಲ್ ಮಾರ್ಗವಾಗಿ ಸಾಗಿ ಮರಳಿ ಫ್ರೀಡಂ ಪಾರ್ಕ್ ತಲುಪಿತು.
Also read: ಸ್ಯಾಂಡಲ್ವುಡ್ ಹಿರಿಯ ನಿರ್ದೇಶಕ ಭಗವಾನ್ ಇನ್ನಿಲ್ಲ
ವಿಜೇತರಿಗೆ ಪ್ರಶಸ್ತಿ ಪತ್ರ, ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಶಿವಮೊಗ್ಗ ಸ್ಟೆಪ್ ಹೋಲ್ಡರ್ಸ್ ಡಾನ್ಸ್ ಸ್ಟುಡಿಯೋ ವ್ಯವಸ್ಥಾಪಕ ನಿರ್ದೇಶಕ ಅರುಣರಾಜ್ ಶೆಟ್ಟಿ, ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ ಚೇರ್ಮನ್ ನಿತಿನ್, ಸರ್ಜಿ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ, ಟ್ರಸ್ಟಿಗಳಾದ ನಮಿತಾ ಸರ್ಜಿ ಈಶ್ವರ್ ಸರ್ಜಿ, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ರಜತ್, ಪ್ರಮುಖರಾದ ರೋಹನ್ ಗುತ್ತಿ, ರಂಜಿತ್, ಮಾಲತೇಶ್ ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


Discussion about this post