ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲಾ ಮಹಿಳಾ ಕದಳಿ ವೇದಿಕೆ ಹಾಗೂ ಇನ್ನರ್ವೀಲ್ ಕ್ಲಬ್ ಶಿವಮೊಗ್ಗ ವತಿಯಿಂದ ಎಸ್ ರಾಮಯ್ಯ ಸರ್ವೋದಯ ಬಾಲಕಿಯರ ಪ್ರೌಢಶಾಲೆಯಲ್ಲಿ ಮಕ್ಕಳಿಗೆ “ನೋಟ್ ಬುಕ್ ವಿತರಣಾ “ಹಾಗೂ “ವಚನ ಗಾಯನ, ವಿಶ್ಲೇಷಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕಿ ಜಿ.ಪಿ ಚಂದ್ರಮ್ಮ ವಿಶೇಷ ಅತಿಥಿಗಳಾಗಿ ಭಾಗವಹಿಸಿ, ಶರಣರ ಸ್ವ-ಅನುಭವ ದಿಂದ ಮೂಡಿಬಂದ ವಚನಗಳು ನಿಮ್ಮ ಜೀವನದಲ್ಲಿ ದಾರಿದೀಪವಾಗಲಿ ಎಂದರು.
ಜಿಲ್ಲಾ ಮಹಿಳಾ ಕದಳಿ ವೇದಿಕೆ ಸಂಚಾಲಕರು ಗಾಯತ್ರಿ ಪಾಟೀಲ್ ಮಾತನಾಡಿ, ಸಪ್ತಸೂತ್ರಗಳಿರುವ ವಚನವನ್ನು ಉಲ್ಲೇಖಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹಾರುದ್ರ ಶರಣರ ಮಾನವೀಯ ಗುಣಗಳನ್ನು ರೂಢಿಸಿಕೊಳ್ಳುವಂತೆ ವಿನಂತಿಸಿದರು.
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಾಂತ ಮುಖ್ಯಸ್ಥರು ಶ್ರೀರಂಜನಿ ದತ್ತಾತ್ರಿ ಮಾತನಾಡಿ, ಈ ಹದಿಹರೆಯದ ಹಂತದಲ್ಲಿ ಅವಶ್ಯವಾಗಿ ಅನುಸರಿಸಬೇಕಾದ ಅಭ್ಯಾಸ, ಹವ್ಯಾಸ ಮತ್ತು ಮೌಲ್ಯಯುತ ಗುಣಗಳನ್ನು ರೂಢಿಸಿಕೊಳ್ಳುವಂತೆ ಶುಭ ಹಾರೈಸಿದರು.
ಅತಿಥಿಗಳಾಗಿ ಶಿವಮೊಗ್ಗ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು ಆರ್. ಎಸ್. ಸ್ವಾಮಿ, ಅಕ್ಕನ ಬಳಗದ ಅಧ್ಯಕ್ಷರಾದ ಜಯಮ್ಮ ಕುಬಸದ, ಶಿವಮೊಗ್ಗ ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷರಾದ ಛಾಯಾ ವೀರಣ್ಣ, ಕಾರ್ಯದರ್ಶಿ ದೀಪಚಂದ್ರನ್, ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ವಿ ವತ್ಸಲ, ಸಹ ಶಿಕ್ಷಕಿ ಹೇಮಾ ಹಾಗೂ ಸಿಬ್ಬಂದಿ ವರ್ಗದವರು ಪ್ರೀತಿಪೂರ್ವಕವಾದ ಸಹಕಾರ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post