ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಹೊಸನಗರ ತಾ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಬೆಂಗಳೂರು ಕರ್ನಾಟಕ ಜಾನಪದ ಪರಿಷತ್ತು, ನಾಗರಕೊಡಿಗೆ ಸಾಹಿತ್ಯಾಭಿಮಾನಿಗಳು ಇವರ ನೇತೃತ್ವದಲ್ಲಿ ನಾಗರಕೊಡಿಗೆ ಗಣೇಶ್ ಮೂರ್ತಿಯವರ ಮನೆಯಲ್ಲಿ ಶ್ರಾವಣ ಕಾವ್ಯ ಚಿಂತನೆ – ಜನಪದ ಶ್ರಾವಣ ಸಂಭ್ರಮ ಏರ್ಪಡಿಸಲಾಗಿತ್ತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಹಿರಿಯ ಸಾಹಿತಿ, ಯಕ್ಷಗಾನ, ತಾಳಮದ್ದಲೆ ಖ್ಯಾತಿಯ ಡಾ. ಪಿ. ಶಾಂತಾರಾಮ್ ಪ್ರಭು ಅವರು ಗಿಡಕ್ಕೆ ನೀರೆರದು ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಕಜಾಪ ಜಿಲ್ಲಾ ಸಮಿತಿ, ಕಸಾಸಾಂವೇ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕವಿ ಗಣೇಶ್ ಮೂರ್ತಿ ನಾಗರಕೊಡಿಗೆ ಅವರು ಆಶಯದ ಮಾತುಗಳನ್ನಾಡಿದರು. ಪ್ರೊ ಕೆ. ಎಸ್. ಶ್ರೀಧರಮೂರ್ತಿ ಕಡಸೂರು ಮಾತು ಮಂಥನದಲ್ಲಿ ಭಾಗವಹಿಸಿದ್ದರು.
ಎರಡೂ ಸಂಸ್ಥೆಗಳ ತಾಲ್ಲೂಕು ಅಧ್ಯಕ್ಷರಾದ ಡಾ. ಶ್ರೀಪತಿ ಹಳಗುಂದ, ಸತೀಶ್ ರಿಪ್ಪನ್ ಪೇಟೆ, ಮಂಜುನಾಥ ಕಾಮತ್, ಗ್ರಾಮಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಕೃಷ್ಣಮೂರ್ತಿ ತೊಗರೆ, ಉಪನ್ಯಾಸಕ ಗಣೇಶ್ ಐತಾಳ್, ಸಾಹಿತಿಗಳಾದ ಅಂಬ್ರಯ್ಯಮಠ, ಪ್ರೊ ಮಾರ್ಷಲ್ ಶರಾಂ, ಬಸಪ್ಪಗೌಡರು, ವಿದ್ವಾನ್ ಎ. ಬಿ. ರಾಘವೇಂದ್ರ, ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತ ರಿದ್ದರು.
ಹಿರಿಯ ಗಾಯಕರಾದ ಭದ್ರಪ್ಪಗೌಡ ಆನಂದಪುರ, ಕೆ. ಸುರೇಶ್ ಕುಮಾರ್, ಎನ್.ವಿ. ಲಲಿತ, ಬಿ. ಟಿ. ಅಂಬಿಕಾ, ಕು. ಯಶಸ್ವಿನಿ, ಮಾಧುರಿ ದೇವಾನಂದ್, ಅನುಪಮ ಸುರೇಶ್, ಅಹಲ್ಯ ಚಡಗ, ಗಂಗಾ ಶ್ರೀವತ್ಸ, ಜನಪದ ಕಲಾತಂಡ ಭಜನೆ ಸುಧಾಕ ಮತ್ತು ತಂಡ, ಜನಪದ ಹಾಡು ದೇವೇಂದ್ರ ಮತ್ತು ತಂಡ, ಲಾವಣಿ ರಾಘವೇಂದ್ರ ತೊಗರೆ ಮತ್ತು ತಂಡದವರು ಉತ್ತಮ ತಾಳ ಮೇಳಗಳೊಂದಿಗೆ ರಂಜಿಸಿದರು.
ಶ್ರಾವಣ ಕಾವ್ಯ ಸಂಭ್ರಮದಲ್ಲಿ ಡಾ. ಮಾರ್ಷಲ್ ಶರಾಂ, ಮಂಜುನಾಥ ಕಾಮತ್, ಕೆಸಿನಮನೆ ರತ್ನಾಕರ್, ಡಾ. ಅಂಜಲಿ, ಡಾ. ನಾಗಾ ಎಚ್. ಹುಬ್ಬಳ್ಳಿ, ಶಾಲಿನಿ ಪ್ರಶಾಂತ, ಡಾ. ಶ್ರೀಪತಿ ಹಳಗುಂದ, ಚೇತನ ಗುರುರಾಜ್, ಗೀತಾ ಚಂದ್ರಶೇಖರ್, ನಾಗರಾಜ್ ಸೌಳಿ, ರಶ್ಮಿ ಶಮಂತ್ ಸೇರಿದಂತೆ ಹಲವರು ತಮ್ಮ ಕವನಗಳನ್ನು ವಾಚಿಸಿದರು.
ಗಾಯಕಿ ಕು. ಯಶಸ್ವಿನಿ ಅವರ ಹಾಡಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವೇದಿಕೆಯ ಪ್ರಧಾನ ಕಾರ್ಯದರ್ಶಿ ರಿಪ್ಪನ್ ಪೇಟೆ ತ. ಮ. ನರಸಿಂಹ ಸ್ವಾಗತಿಸಿದರು.
– ಸಿ. ಎಂ. ನೃಪತುಂಗ, ಶಿವಮೊಗ್ಗ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post