ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕೆ.ಆರ್.ಪುರಂ ರಸ್ತೆಯಲ್ಲಿರುವ ಶ್ರೀ ಸಂಜೀವಾಂಜನೇಯ ದೇವಸ್ಥಾನದಲ್ಲಿ ಗೆಳೆಯ ವೃಂದದ ವತಿಯಿಂದ ದಾಸ ಶ್ರೇಷ್ಠರಾದ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವವನ್ನು ಆಚರಿಸಲಾಯಿತು.
ಈ ಪ್ರಯುಕ್ತ ಇಂದು ಬೆಳಿಗ್ಗೆ ಕೆ.ಆರ್.ಪುರಂ, ತಿಮ್ಮಪ್ಪನ ಕೊಪ್ಪಲು ಮತ್ತು ತುಮಕೂರು ಶ್ಯಾಮರಾವ್ ರಸ್ತೆಯ ಬಡಾವಣೆಗಳಲ್ಲಿ ವಿಜಯದಾಸರ ಕೀರ್ತನೆಗಳನ್ನು ಹಾಡುತ್ತ ಯಾಯಿವಾರ (ಗ್ರಾಮ ಪ್ರದಕ್ಷಿಣೆ) ನಡೆಸಲಾಯಿತು. ನಂತರ ಶ್ರೀ ಸಂಜೀವಾಂಜನೇಯ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿ ವತಿಯಿಂದ ದಾಸರ ಕೀರ್ತನೆಗಳನ್ನು ಹಾಡಲಾಯಿತು.
ಇದೇ ಸಂದರ್ಭದಲ್ಲಿ ಪಾಂಡುರಂಗಿ ಧರ್ಮಾಚಾರ್, ಪಂ.ಪುರುಷೋತ್ತಮಚಾರ್ ನವರತ್ನ, ರಾಯಚೂರು ಕೃಷ್ಣಮೂರ್ತಿ, ಕುಷ್ಟಗಿ ವಾಸುದೇವ ಮೂರ್ತಿ, ಮತ್ತು ಪಂ.ರಘೋತ್ತಮಚಾರ್ ಸಂಡೂರು ಇವರುಗಳಿಂದ ಶ್ರೀ ವಿಜಯದಾಸರ ದಾಸರ ಬಗ್ಗೆ ಉಪನ್ಯಾಸ ನಡೆಸಲಾಯಿತು.
Also read: ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಶವವಾಗಿ ಪತ್ತೆ
ಕಾರ್ಯಕ್ರಮದಲ್ಲಿ ಹೆಚ್.ಎಸ್.ನಾಗೇಂದ್ರ, ಟಿ.ವಿ.ಬಿಂದುಮಾಧವ, ಕುಷ್ಠಗಿ ಅನಂತಾಚಾರ್, ಸತ್ಯನಾರಾಯಣ, ಕೇಶವಮೂರ್ತಿ, ಪಲ್ಲಕ್ಕಿ ಮಧುಸೂಧನಾಚಾರ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post