ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ಪಕ್ಷದ ಕಚೇರಿ ದೇವಾಲಯವಿದ್ದಂತೆ ಇಲ್ಲಿಗೆ ಬಂದು ಗಲಾಟೆ ಮಾಡುವುದನ್ನು ನಾವು ಸಹಿಸುವುದಿಲ್ಲ. ಕಾಂಗ್ರೆಸ್ಸಿನ ಕೆಲವು ಮುಖಂಡರು ಮುಸ್ಲಿಂ ಸಮುದಾಯದವರೊಬ್ಬರಿಗೆ ಹಣ ಮತ್ತು ಮೊಬೈಲ್ ನೀಡಿದ್ದಾರೆ ಎಂದರೆ ಇದು ಪ್ರಚೋದನೆ ಅಲ್ಲವೇ, ದೇಶದ್ರೋಹವಲ್ಲವೇ? ಪಾಪವನ್ನು ಮಾಡುತ್ತಾರೆ, ಇನ್ನೊಂದು ಕಡೆ ಪಾಪವನ್ನು ತೊಳೆಯುತ್ತಾರೆ. ಇವರಿಗೆ ಪಾಪ ತುಂಬಿಹೋಗಿದೆ ಎಂದು ಮಹಾನಗರ ಪಾಲಿಕೆ #Shivamogga Corporation ಸದಸ್ಯ ಚನ್ನಬಸಪ್ಪ (ಚೆನ್ನಿ) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ #Shivamogga BJP Office ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ್ರೋಹಿಗಳು ಯಾರಾದರೂ ಇದ್ದರೆ, ಅದು ಕಾಂಗ್ರೆಸ್ಸಿನವರು. ಈ ದೇಶದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ಸಿನವರು ಇದೇ ರೀತಿ ಸಮಾಜಗಳ ಮಧ್ಯೆ ವಿಷ ಬೀಜ ಬಿತ್ತಿ ರಾಜಕೀಯ ಮಾಡುತ್ತಾ ಬಂದಿದ್ದಾರೆ. ಇದೀಗ ಈಶ್ವರಪ್ಪನವರ #Minister Eshwarappa ಮೇಲೆ ಆರೋಪವನ್ನ ಮಾಡುವುದರೊಂದಿಗೆ ಈ ದೇಶದ ವ್ಯವಸ್ಥೆಯನ್ನೇ ಹಾಳು ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಶಿವಮೊಗ್ಗದ ಶಾಲೆಯ ಆವರಣದಲ್ಲಿ ಖಾಲಿ ಇರುವ ಕಂಬಕ್ಕೆ ಕೇಸರಿ ಧ್ವಜವನ್ನು #Kesari Dhwaja ಹಾಕಿದ್ದಾರೆ ವಿನಃ ರಾಷ್ಟ್ರ ಧ್ವಜವನ್ನು #National Flag ಇಳಿಸಿ ಹಾಕಿಲ್ಲ. ಅಲ್ಲಿ ಖಾಲಿ ಇರುವ ಕಾರಣ ಹಾಕಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಕಾಂಗ್ರೆಸ್ಸಿನವರು ತನಗೆ ಬೇರೆ ಕೆಲಸವಿಲ್ಲದೆ ಇದನ್ನೇ ಕಾಯುತ್ತಾ ಕುಳಿತಿರುತ್ತಾರೆ, ಕಾಂಗ್ರೆಸ್ಸಿನವರು #Congress ಸಮಾಜದಲ್ಲಿ ಸುಳ್ಳುಸುದ್ದಿಯನ್ನು ಹಬ್ಬಿಸುವ ಮೂಲಕ ರಾಷ್ಟ್ರದ್ರೋಹಿ ಕೆಲಸವನ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Also Read: ಮೃತ ವ್ಯಕ್ತಿಯಿಂದ ತಿರುಪತಿ ದೇಗುಲಕ್ಕೆ ಬಂದ ಬೃಹತ್ ಮೊತ್ತದ ದೇಣಿಗೆ ಎಷ್ಟು ಗೊತ್ತಾ?
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್. ಜಿ. ನಾಗರಾಜ್, ಪಾಲಿಕೆ ಉಪಮೇಯರ್ ಗನ್ನಿ ಶಂಕರ್, ಸದಸ್ಯ ಜ್ಞಾನೇಶ್ವರ, ವಿಶ್ವಾಸ್, ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಬಳ್ಳಕೆರೆ ಮತ್ತು ಮಾಧ್ಯಮ ಪ್ರಮುಖ ಅಣ್ಣಪ್ಪ ಮತ್ತು ನಗರ ಮಾಧ್ಯಮ ಪ್ರಮುಖ್ ಬಾಲು ಸೇರಿದಂತೆ ಇನ್ನಿತರರಿದ್ದರು.
Also Read: ಪುನೀತ್ ರಾಜ್ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಬಿಬಿಎಂಪಿ ಅಧಿಕೃತ ಅನುಮೋದನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post