ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ದೇಶ ಎನ್ನುವುದು ಕೇವಲ ರಸ್ತೆ, ಚರಂಡಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ. ಇದು ಒಂದು ಭಾವನಾತ್ಮಕ ವಿಚಾರವಾಗಿದೆ ಎಂದು ಆರ್’ಜಿಯುಎಚ್’ಎಸ್ ಸೆನೆಟ್ ಸದಸ್ಯ, ಎಂಎಲ್’ಸಿ ಆಯನೂರು ಮಂಜುನಾಥ್ ಅಭಿಪ್ರಾಯಪಟ್ಟರು.
ನೇತಾಜಿ ಸುಭಾಷಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪರಾಕ್ರಮ ದಿವಸದಲ್ಲಿ ಅವರು ಮಾತನಾಡಿದರು.
75 ವರ್ಷದಲ್ಲಿ ನಮಗೆ ಸ್ವಾತಂತ್ರ ಹೇಗೆ ಬಂದಿತು ಎಂಬ ವಿಚಾರಗಳೇ ಮರೆತು ಹೋಗುವಂತಹ ಪರಿಸ್ಥಿತಿ ಬಂದೊದಗಿದೆ. ಇಂದಿನ ಪೀಳಿಗೆಗೆ ಸ್ವಾತಂತ್ರ ಹೋರಾಟದ ಘಟನೆಗಳೇ ಮರೆತುಹೋಗಿವೆ. ಮಾತ್ರವಲ್ಲ ನಮಗಾಗಿ ಪ್ರಾಣತ್ಯಾಗ ಮಾಡಿದ ನಾಯಕರ ಹೆಸರುಗಳೇ ತಿಳಿದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ನಮ್ಮ ದೇಶಕ್ಕೆ ಸ್ವಾತಂತ್ರ ಯಾವಾಗ ಬಂತು ಎಂದರೆ ಎಲ್ಲರಿಗೂ ತಿಳಿದಿದೆ. ಆದರೆ, ಮೊದಲ ಬಾರಿಗೆ ಸ್ವಾತಂತ್ರ ಕಳೆದುಕೊಂಡಿದ್ದು ಯಾವಾಗ ಎಂದರೆ ಯಾರಿಗಾದರೂ ತಿಳಿದಿದೆಯೇ. ಇದು ಬಹಳಷ್ಟು ಮಂದಿಗೆ ಈ ವಿಚಾರ ತಿಳಿದಿಲ್ಲ. ಆ ಸಂದರ್ಭದಲ್ಲೂ ಸಹ ಬಹಳಷ್ಟು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಇಂತಹ ವಿಚಾರಗಳ ಕುರಿತಾಗಿ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ಸುಭಾಷ್ ಚಂದ್ರಬೋಸ್ ಅವರು ಅಂದಿನ ಕಾಲದಲ್ಲಿ ಅತ್ಯಂತ ಕಠಿಣವಾಗಿದ್ದ ಐಸಿಎಸ್ ಪರೀಕ್ಷೆ ಪಾಸು ಮಾಡಿದ್ದತಂಹ ಸಾಧಕ. ಇವರಂತೆಯೇ ಸುಖದೇವ್, ರಾಜಗುರು, ಭಗತ್ ಸಿಂಗ್ ಸೇರಿದಂತೆ ಹಲವರು ಪ್ರಾಣತ್ಯಾಗ ಮಾಡಿದ್ದು, ನಮ್ಮ ದೇಶದ ಗುಲಾಮಗಿರಿಯನ್ನು ಹೋಗಲಾಡಿಸಲು ಹೋರಾಟ ಮಾಡಿ, ಪ್ರಾಣತ್ಯಾಗ ಮಾಡಿದ್ದಾರೆ ಎಂದರು.

Also read: ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಟ್ಟು ಅಗತ್ಯ ಬಂಡವಾಳ ತೊಡಗಿಸಿ
ನೇತಾಜಿ ಅವರ ಸಾವಿನ ಕುರಿತಾಗಿ ಇಂದಿಗೂ ಸತ್ಯ ಇಂದಿಗೂ ನಿಗೂಢವಾಗಿದೆ. ಅದು ಹೊರಬೀಳಬೇಕಿದೆ. ಇವರುಗಳ ತ್ಯಾಗವನ್ನು ಇಂದಿನ ಪೀಳಿಗೆ ಅರಿಯಬೇಕು ಎಂದು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ, ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಮಾನವನ ದೇಹದಲ್ಲಿ ಉತ್ಪತ್ತಿಯಾಗುವ ರಕ್ತವನ್ನು ಪರ್ಯಾಯವಾಗಿ ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ, ತೀರಾ ಅವಶ್ಯಕತೆಯಿರುವ ರಕ್ತವನ್ನು ಅರ್ಹರು ದಾನ ಮಾಡಬೇಕು. ರಕ್ತದಾನದಿಂದ ಹೃದಯಾಘಾತ, ಹೃದಯ ಸಂಬAಧಿ ಕಾಯಿಲೆಗಳ ಸಾಧ್ಯತೆ ಕಡಿಮೆ ಎಂದರು.
ಆರ್’ಎಸ್’ಎಸ್ ಪ್ರಮುಖ ಭಾನುಪ್ರಕಾಶ್, ಕಾಲೇಜಿನ ಡೀನ್ ಡಾ.ಕೃಷ್ಣಪ್ರಸಾದ್, ಉಪಪ್ರಾಂಶುಪಾಲ ಡಾ.ಸಿದ್ಧಲಿಂಗಪ್ಪ, ಡಾ.ಗೌತಮ್, ಡಾ. ಮಲ್ಲಾರಾಧ್ಯ, ಡಾ.ರಮೇಶ್, ಡಾ.ವಿನೀತ್ ಆನಂದ್ ಸೇರಿದಂತೆ ವೈದ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.










Discussion about this post