ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಮಹಾನಗರ ಪಾಲಿಕೆ ವತಿಯಿಂದ ನಗರದ ಪತ್ರಕರ್ತರ ಶ್ರೇಯೋಭಿವದ್ಧಿಗಾಗಿ ಪಾಲಿಕೆ ಬಜೆಟ್ನಲ್ಲಿ ಮೀಸಲಿಟ್ಟಿರುವ 20 ಲಕ್ಷರೂ.ಗಳ ನಿಧಿಯ ಬಳಕೆಗೆ ಅಧಿಕಾರಿಗಳು ಹಾಗೂ ಪತ್ರಕರ್ತರ ಸಂಘದ ಪದಾಧಿಕಾರಿಗಳಿರುವ ಸಮಿತಿ ರಚಿಸುವಂತೆ ಕೋರಿ ಇಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಹಾಗೂ ಆಯುಕ್ತ ಮಾಯಣ್ಣಗೌಡ ಇವರಿಗೆ ಮನವಿ ಸಲ್ಲಿಸಲಾಯಿತು.
ಕಳೆದ 2 ವರ್ಷದಿಂದ ಮಹಾನಗರ ಪಾಲಿಕೆಯು ಪತ್ರಕರ್ತತರಿಗಾಗಿ ಪ್ರತ್ಯೇಕ ನಿಧಿಯನ್ನು ಇಡುತ್ತ ಬಂದಿದೆ.ಆದರೆ ಸದರಿ ನಿಧಿಯ ಬಳಕೆಗೆ ಸೂಕ್ತ ಮಾರ್ಗ ಸೂಚಿ ಇಲ್ಲವಾಗಿದೆ ಹಾಗೂ ನಿಧಿ ಬಳಕೆಗೆ ಸಮಿತಿ ರಚನೆ ಮಾಡದಿದ್ದರಿಂದ ಸದರಿ ಹಣದ ಸದ್ಭಳಕೆ ಆಗುತ್ತಿಲ್ಲ.
ಜಿಲ್ಲಾಧಿಕಾರಿಗಳು, ವಾರ್ತಾಧಿಕಾರಿಗಳು, ಪಾಲಿಕೆ ಮೇಯರ್, ಆಯುಕ್ತರು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿರುವ ಸಮಿತಿ ರಚಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
Also read: ಮೇ 1ರಂದು ಹವ್ಯಕ ಸಂಸ್ಥಾಪನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಅನಾರೋಗ್ಯಕ್ಕೊಳಗಾದ ಪತ್ರಕರ್ತರಿಗೆ ಗುಂಪು ಅಥವಾ ವ್ಯಯಕ್ತಿಕ ವಿಮೆ ಮಾಡಿಸುವುದು,ಪತ್ರಕರ್ತರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವುದು, ಪತ್ರಕರ್ತರ ಕ್ರೀಡಾಕೂಟ, ಕಾರ್ಯಾಗಾರ ನಡೆಸಲು ಹಣ ನಿಗಧಿ ಮಾಡಬೇಕು ಎಂದು ಕೋರಲಾಗಿದೆ.
ಮನವಿ ಸ್ವೀಕರಿಸಿದ ಮೇಯರ್ ಸುನೀತಾ ಅಣ್ಣಪ್ಪ ಹಾಗೂ ಆಯುಕ್ತರಾದ ಮಾಯಣ್ಣಗೌಡ ಅವರು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ಖಜಾಂಚಿ ರಂಜಿತ್, ನಗರ ಕಾರ್ಯದರ್ಶಿ ಸೋಮನಾಥ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮಂಜುನಾಥ್, ಸೋಮಶೇಖರ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post