ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೃತ್ಯ ಶಿಕ್ಷಣ ಅತೀ ಹೆಚ್ಚು ದೈಹಿಕ ಹಾಗೂ ಮಾಸಿಕ ಪರಿಶ್ರಮವನ್ನು ಬೇಡುತ್ತದೆ. ಯುವಾವಸ್ಥೆಯಲ್ಲಿ ದೈಹಿಕ ಹಾಗೂ ಮಾನಸಿಕ ಶ್ರಮ ಮಕ್ಕಳ ಮನಸ್ಸನ್ನು ಪ್ರಫುಲ್ಲಿವಾಗಿಡುವುದಲ್ಲದೆ ಉಳಿದೆಲ್ಲಾ ವಿಷಯದಲ್ಲೂ ಮಕ್ಕಳು ಅಗ್ರಗಣ್ಯರಾಗಲು ಸಹಾಯ ಮಾಡುತ್ತದೆ. ಅದು ಶಾಲಾ ಶಿಕ್ಷಣಕ್ಕೆ ಎಂದೂ ಅಡ್ಡಿಯಾಗುವುದಿಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಅಭಿಪ್ರಾಯಪಟ್ಟರು.
ಕರ್ನಾಟಕ ಸಂಘದಲ್ಲಿ ಸಹಚೇತನ ನಾಟ್ಯಾಲಯವು ಹ್ಮುಕೊಂಡಿದ್ದ ಭಾರತೀಯಂ ಹಾಗೂ ಅಜಿತಶ್ರೀ ಪುರಸ್ಕಾರ್ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಕಲೆ ಸಂಸ್ಕೃತಿ ಹಾಗೂ ಸಾಂಸ್ಕೃತಿಕತೆ ನಮ್ಮ ಭಾರತೀಯರ ಜೀವಾಳ. ಇದು ಅಲಭ್ಯವಾಗಿರುವ ಮಕ್ಕಳಿಗೆ ನೃತ್ಯಗುರು ಸಹನಾ ಚೇತನ್ ಉಚಿತವಾಗಿ ನೃತ್ಯ ಶಿಕ್ಷಣವನ್ನು ನೀಡುತ್ತಾ ಒಂದು ದಶಕ ಕಳೆದರೂ ಅದನ್ನು ಈಗಲೂ ಮುಂದುವರಿಸುತ್ತಾ ಸಾಗಿರುವುದು ಒಂದು ಹೆಮ್ಮೆಯ ವಿಚಾರ. ಇದು ಇತರರಿಗೂ ಸ್ಪೂರ್ತಿಯಾಗಲಿ ಎಂದು ಶ್ಲಾಘಿಸಿದರು.
Also read: ದೈಹಿಕ ಸ್ಥಿರತೆ ಕಾಪಾಡಿಕೊಳ್ಳಲು ಕನಿಷ್ಟ ಒಂದು ಗಂಟೆ ವ್ಯಾಯಾಮ ಮಾಡಿ: ಜ್ಯೋತಿಪ್ರಕಾಶ್ ಕಿವಿಮಾತು
ಹಿಂದುಳಿದ ಬಡಾವಣೆ ಹಾಗೂ ಆಯ್ದ ಸರ್ಕಾರಿ ಶಾಲಾ 130 ಮಕ್ಕಳ ದೇಶಭಕ್ತಿಗೀತೆಗಳಿಗೆ ನೃತ್ಯವನ್ನು ವೀಕ್ಷಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹಾಲಾಡಿ, ಹಿಂದುಳಿದ ಬಡಾವಣೆ ಮುಂದೊಂದು ದಿನ ಮುಂದುವರಿದ ಬಡಾವಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಮಕ್ಕಳ ಪ್ರತಿಭಾ ಅನಾವರಣದಿಂದ ಸಾಬೀತಾಗಿದೆ. ಉದಯೋನ್ಮುಖ ಕಲಾವಿದರ ದಿಬ್ಬಣವೇ ಇಲ್ಲಿ ಸಾಗಿರುವುದು ಹೆಮ್ಮೆಯ ವಿಚಾರ. ಕನ್ನಡ ಸಂಸ್ಕೃತಿ ಇಲಾಖೆ ಇಂತಹ ಗುಣಾತ್ಮಕ ಕಾರ್ಯಗಳಿಗೆ ಸದಾ ಸಹಕಾರ ನೀಡಲು ಸಿದ್ಧವಾಗಿದೆ ಎಂದರು.
ಶಿವಮೊಗ್ಗೆಯ ಸಾಮಾಜಿಕ ಕಾರ್ಯಕರ್ತ ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೊಡಕ್ಕಲ್ ಶಿವಪ್ರಸಾದ್, ಯೋಗಾಚಾರ್ಯ ಶ್ರೀನಿವಾಸ ಮೂರ್ತಿ ಹಾಗೂ ಆರೋಗ್ಯ ಸಾವಾ ಸಂಸ್ಥೆಯಾದ ಗುಡ್ಲಕ್ ಆರೈಕೆ ಕೇಂದ್ರಕ್ಕೆ ಅಜಿತಶ್ರೀ ಪುರಸ್ಕಾರ್-2022 ನ್ನು ನೀಡಿ ಸಮಾನ್ಯ ಕೆ. ಎಸ್. ಈಶ್ವರಪ್ಪನವರು ಗೌರವಿಸಿದರು.
ಅಜಿತಶ್ರೀ ಪುರಸ್ಕಾರನ್ನು ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಮೂರ್ತಿಯವರು ಅಜಿತರ ಸಮಾಜಮುಖಿ ಜೀವನ ಹಾಗೂ ಹಿಂದೂ ಸೇವಾ ಪ್ರತಿಷ್ಠಾನವನ್ನು ಕಟ್ಟಿ ಬೆಳೆಸಿದ ರೀತಿ ಬೆರಗನ್ನುಂಟು ಮಾಡುತ್ತದೆ. ಆತ ಕೇವಲ ವ್ಯಕ್ತಿಯಾಗಿರಲಿಲ್ಲ ಸಮಾಜದ ಶಕ್ತಿಯಾಗಿದ್ದರು ಎಂದರು.
ಮಕ್ಕಳ ಪ್ರತಿಭೆಗಳನ್ನು ಕಡೆಗಣಿಸಿ ಬರೀ ಶೈಕ್ಷಣಿಕ ಪಠ್ಯಾಧ್ಯಯನಕ್ಕೆ ಮಹತ್ವವನ್ನು ಕೊಡುವ ಬದಲು, ಅವರ ವೈಯಕ್ತಿಕ ವ್ಯಕ್ತಿತ್ವ ನಿರ್ಮಾಣಕ್ಕೆ ಹೆಚ್ಚು ಒತ್ತುಕೊಟ್ಟರೆ ಅದು ಅವರನ್ನು ಬಹಳಾ ಎತ್ತರಕ್ಕೆ ಕೊಂಡೊಯ್ಯುತ್ತದೆ. ಅಜಿತರು 2 ಇಂಜಿನಿಯರ್ ಪದವಿಯನ್ನು ಪಡೆದು ಎರಡೂ ಬಾರಿ ಗೋಲಡ್ ಮೆಡಲ್ ಪಡೆದಿದ್ದರೂ ತಮ್ಮ ಸಾಧನೆ ಸೇವೆ ಏನಿದ್ದರೂ ಅದು ಸಮಾಜಕ್ಕೆ ಅರ್ಪಿತ ಎಂಬುದನ್ನು ತಮ್ಮ ಜೀವಿತಾವಧಿಯಲ್ಲಿ ನಿರೂಪಿಸಿದರು. ಅವರದ್ದು ಪರಿಪೂರ್ಣ ವೈಕ್ತಿತ್ವ ಎಂದು ಅಧ್ಯಕ್ಷೀಯ ನುಡಿಗಳಲ್ಲಿ ಸಹಚೇತನದ ಗೌರವಧ್ಯಕ್ಷರಾದ ಎಸ್.ಎನ್. ಚನ್ನಬಸಪ್ಪ ನುಡಿದರು.
ನೃತ್ಯಗುರು ಸಹನಾ ಚೇತನ್ ಸ್ವಾಗತಿಸಿದರು, ನಾಗಮಣಿ ಆನಂದ್ ನಿರೂಪಿಸಿದರು, ಎಸ್. ಚೇತನ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post