ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮನುಷ್ಯನ ಬುದ್ದಿಮತ್ತೆಯ ಸಾಮರ್ಥ್ಯ ಮರು ರಚಿಸಲು ಕೃತಕ ಬುದ್ದಿಮತ್ತೆ ತಂತ್ರಜ್ಞಾನದಿಂದ ಸಾಧ್ಯವಾಗಲಿದೆ ಎಂದು ಮಲೆನಾಡು ಕಾಲೇಜು ಆಫ್ ಎಂಜಿನಿಯರಿಂಗ್ ಸಹ ಪ್ರಾದ್ಯಾಪಕ ಡಾ. ಬಿ.ವಿ. ಬಾಲಾಜಿ ಪ್ರಭು ಅಭಿಪ್ರಾಯಪಟ್ಟರು.
ಈಚೆಗೆ ನಗರದ ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಒಂದು ವಾರಗಳ ಕಾಲ ಏರ್ಪಡಿಸಿದ್ದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಕುರಿತ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
ಕೃತಕ ಬುದ್ದಿಮತ್ತೆ ತಂತ್ರಜ್ಞಾನದಲ್ಲಿ ದತ್ತಾಂಶಗಳ ನಿರ್ವಹಣೆ ಪ್ರಮುಖ ಸವಾಲಾಗಿದೆ. ಸನ್ನಿವೇಶಗಳ ಅನುಗುಣವಾಗಿ ಕೃತಕವಾಗಿ ಯಂತ್ರ ಕಾರ್ಯನಿರ್ವಹಿಸಲು ಅಗತ್ಯ ಕ್ರಮಾವಳಿಗಳು ಅನುಷ್ಟಾನಗೊಳ್ಳಬೇಕಿದೆ. ಎ.ಐ ಮತ್ತು ಎಂ.ಎಲ್ ಮೂಲಕ ಯಂತ್ರಗಳು ಸೂಕ್ಷ್ಮವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಪೈಥಾನ್ ನಂತಹ ಪ್ರೋಗ್ರಾಮಿಂಗ್ ಲಾಂಗ್ವೇಜ್, ಕ್ಲಸ್ಟರಿಂಗ್ ನ್ಯೂರಲ್ ನೆಟ್ವರ್ಕ್, ಲಿನಿಯರ್ ರಿಗ್ರೆಷನ್ ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ, ಉಪಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಮಂಜುನಾಥ, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಪೂರ್ಣಿಮ.ಕೆ.ಎಂ ಉಪಸ್ಥಿತರಿದ್ದರು. ಕಾರ್ಯಾಗಾರ ಸಂಯೋಜಕರಾದ ಸೈಯದ್ ಜೋಹಾರ್ ಸ್ವಾಗತಿಸಿದರು. ಸಹ ಪ್ರದ್ಯಾಪಕರಾದ ಶ್ರೀದೇವಿ ಎಸ್ ಪ್ರಾರ್ಥಿಸಿ, ಪುಷ್ಪ.ಆರ್.ಎನ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post