ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅನ್ಯ ಕೋಮಿನ ಕೆಲವು ವ್ಯಕ್ತಿಗಳು ನಗರದಲ್ಲಿ ಅಶಾಂತಿಯನ್ನು ಸೃಷ್ಠಿಮಾಡುತ್ತಿದ್ದಾರೆ. ಹಿಂದೂ ಸಂಘಟನೆಯ ಯುವಕರ
ಮೇಲೆ ಹಾಗೂ ಅಮಾಯಕ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆಸುತ್ತಿದ್ದಾರೆ. ಇದರಿಂದ ಶಿವಮೊಗ್ಗ ನಗರದ ಸುತ್ತಮುತ್ತಾ ಭಯದ ವಾತಾವರಣ ಸೃಷ್ಠಿಯಾಗಿದೆ. ಇದರ ಮಧ್ಯದಲ್ಲಿ ಜನಜೀವನ ಅಸ್ತ್ರವ್ಯಸ್ತಗೊಂಡಿದೆ. ಇದಕ್ಕೆ ಕಾರಣವಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಬಿಜೆಪಿ ವತಿಯಿಂದ ಇಂದುಜಿಲ್ಲಾರಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಹಿಜಾಬ್ ಪ್ರಕರಣದಿಂದ ಆರಂಭವಾದ ಗೊಂದಲದ ನಂತರ ಪ್ರಕರಣಗಳಾದ ಶಿವಮೊಗ್ಗ ನಗರದ ಮಂಜುನಾಥ ಬಡಾವಣೆಯ ರಾಹುಲ್ ಮತ್ತು ಸಚಿನ್ ಇವರುಗಳ ಮೇಲೆ ಆರ್.ಎಂ.ಎಲ್. ನಗರದಲ್ಲಿ ಮಾರಣಾಂತಿಕ ಹಲ್ಲೆ ನಡೆದಿದ್ದು, ಬಜರಂಗದಳದ ಪ್ರಮುಖ ಹರ್ಷ ಹಿಂದೂವನ್ನು ಬರ್ಬರವಾಗಿ ಹತ್ಯೆ ಮಾಡಿರುವುದು, ಅನುಪಿನಕಟ್ಟೆಯ ಬಳಿ ಇಬ್ಬರು ಹಿಂದೂಗಳ ಮೇಲೆ ಹಲ್ಲೆ ನಡೆಸಿರುವುದು, ಟಿಪ್ಪುನಗರದ ಮಂಜುನಾಥ ಬಡಾವಣೆಯ ನಿವಾಸಿ ವೆಂಕಟೇಶ್ ಇವರ ಮೇಲೆ ಹಲ್ಲೆ, ಗೋಪಾಳಗೌಡ ಬಡಾವಣೆಯ ವಿನಾಯಕ ವೃತ್ತದ ಬಳಿ ಹಾಲಿನ ಡೈರಿಯ ನಾಗರಾಜ್ ಎಂಬುವವರ ಮೇಲೆ ಹಲ್ಲೆ, ಬಜರಂಗದಳದ ಪ್ರಮುಖ ಜಿತೇಂದ್ರ ಅವರಿಗೆ ಧಮಕಿ ಹಾಕಿರುವಂತದ್ದು, ಅಶೋಕನಗರದಲ್ಲಿ ನೀರಾವರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರ ಸಂತೋಷ್ ಹಾಗೂ ಹೊನ್ನಾಳಿ ರಸ್ತೆಯ ಮೇಲ್ಲೇತುವೆ ಬಳಿ ಪವನ್ಕುಮಾರ್ ಎಂಬುವವರ ಮೇಲೆ ಹಲ್ಲೆ, ಬಜರಂಗದಳದ ಕಾರ್ಯಕರ್ತ ಭರತ್ ಇವರಿಗೆ ಕೊಲೆ ಬೆದರಿಕೆ ಸೇರಿದಂತೆ ಎಂ.ಕೆ.ಕೆ. ರಸ್ತೆಯಲ್ಲಿ ಅಕ್ಷಯ್ ಜೋಯ್ಸ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
Also read: ಯಂತ್ರಗಳ ಭರಾಟೆಗೆ ಸಿಲುಕಿ ಪೂರ್ವಜರ ಕಾಲದ ಬೇಸಾಯ ಪದ್ದತಿಗಳು ಕಣ್ಮರೆ: ಶಾಸಕ ರಘುಮೂರ್ತಿ
ಮೇಲ್ಕಂಡ ಎಲ್ಲವೂ ಆಯಾ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿದೆ. ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿ ನೆಮ್ಮದಿಯನ್ನು ಹಾಳುಮಾಡುತ್ತಿರುವ ವ್ಯಕ್ತಿಗಳ ಮೇಲೆ ಗೂಂಡಾ ಕಾಯ್ದೆಯನ್ನು ದಾಖಲಿಸಿ ಅವರುಗಳನ್ನು ಗಡಿಪಾರು ಮಾಡಿ ಶಿವಮೊಗ್ಗ ನಗರದಲ್ಲಿ ಶಾಂತರೀತಿಯ ವಾತಾವರಣವನ್ನು ಸೃಷ್ಟಿ ಆಗುವಂತೆ ತಾವು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post