ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದ ಸಹಕಾರದೊಂದಿಗೆ ಶಿವಮೊಗ್ಗ #Shivamogga ಸಂಘಸಂಸ್ಥೆಗಳ ವತಿಯಿಂದ ನವೆಂಬರ್ ತಿಂಗಳಿನಲ್ಲಿ ಮೂರು ದಿನಗಳ ಚಾರಣವನ್ನು #Trekking ಆಯೋಜಿಸಲಾಗಿದೆ.
ನವೆಂಬರ್ 15 ರಿಂದ 17ರವರೆಗೂ ಮೂರು ದಿನಗಳ ಕಾಲ ಮಲೆನಾಡು ರಾಜ್ಯ ಮಟ್ಟದ ಚಾರಣ ಕಾರ್ಯಕ್ರಮ ಕುಪ್ಪಳ್ಳಿಯ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯಲಿದೆ.
ಈ ಮೂರು ದಿನದ ಚಾರಣದಲ್ಲಿ ಕವಲೇದುರ್ಗ, ಕೋಟೆಗುಡ್ಡ, ಆಲೆಮನೆ, ಕಗ್ಗ, ಅಶೋಕವನ, ಕವಿಶೈಲದಂತಹ ಅನೇಕ ಸ್ಥಳಗಳನ್ನು ಭೇಟಿ ನೀಡಲಾಗುತ್ತದೆ.
ಈ ಚಾರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕುವೆಂಪು ಪ್ರತಿಷ್ಠಾನದ ಕಡಿದಾಳ್ ಪ್ರಕಾಶ್, ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಹಾಗೂ ಸ್ನೇಹಜೀವಿ ವಿಜಯಕುಮಾರ್, ಆಗುಂಬೆಯ ಉರಗ ತಜ್ಞ ಗೌರಿಶಂಕರ್, ತೀರ್ಥಹಳ್ಳಿಯ ಪಕ್ಷಿ ತಜ್ಞ ಕೆ.ಎಸ್. ಭಟ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ಅನೇಕ ಜಿಲ್ಲೆಗಳಿಂದ ಆಗಮಿಸುವ ಚಾರಣಗರ ಜೊತೆ ಶಿವಮೊಗ್ಗದ ಸಾಹಸಿಗರಿಗಾಗಿ ಸುಮಾರು 25 ಸೀಟುಗಳನ್ನು ಕಾಯ್ದಿರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹರೀಶ್ ಪಂಡಿತ್ (9886422078), ಪ್ರಶಾಂತ್ (9353504801), ರಾಘವೇಂದ್ರ (7795516155) ಅವರುಗಳನ್ನು ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post