ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ನೂತನ ಅಧ್ಯಕ್ಷರಾಗಿ ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಎನ್. ಸುಧೀಂದ್ರ ಅವರು ಆಯ್ಕೆಯಾಗಿದ್ದು, ಪರಿಷತ್ನ ಜಿಲ್ಲಾ ಸಮಿತಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಗಿದೆ.
ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಎನ್. ಸುಧೀಂದ್ರ ಅವರು ಎಮ್ಎ ಪಿಹೆಚ್ಡಿ, ಜರ್ನಲಿಸಂ ಡಿಪ್ಲೊಮಾ ಪಡೆದಿದ್ದು, ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಹಾಗೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಇವರು, ಕನ್ನಡ ರೇಡಿಯೋ ನಾಟಕಗಳು, ಮಹಾ ಪ್ರಬಂಧವನ್ನು ಪ್ರೊ. ಶ್ರೀಕಂಠಕೂಡಿಗೆ ಅವರ ಮಾರ್ಗದರ್ಶನದಲ್ಲಿ ಕುವೆಂಪು ವಿವಿಗೆ ಸಲ್ಲಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಇವರ ಸಂಪ್ರತಿ ಕವನ ಸಂಕಲನ ಪ್ರಕಟವಾಗಿದ್ದು, ಸಾಹಿತ್ಯಾಸಕ್ತರ ಮೆಚ್ಚುಗೆಗೂ ಸಹ ಪಾತ್ರರಾಗಿದ್ದಾರೆ. ಡಾ. ಎನ್ ಸುಧೀಂದ್ರ ಅವರು ಕಲ್ಪ ಮೀಡಿಯಾ ಹೌಸ್ ಹಿರಿಯ ಸಲಹಾ ಸಂಪಾದಕರಾಗಿಯೂ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಉಳಿದಂತೆ ನೂತನ ಸಮಿತಿಯ ಕಾರ್ಯದರ್ಶಿಯಾಗಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮಹಾಪ್ರಬಂಧಕರಾದ ಸತ್ಯನಾರಾಯಣ್, ಸಹಕಾರ್ಯದರ್ಶಿಯಾಗಿ ಸಂಕೇತಿ ಸಂಭ್ರಮ ಪತ್ರಿಕೆಯ ಸಂಪಾದಕರು, ಹಲವು ಪುಸ್ತಕಗಳ ರಚನಾಕಾರರಾದ ನಾಗರಾಜ್ ಹೊಸಳ್ಳಿ, ಸಹಕಾರ್ಯದರ್ಶಿಯಾಗಿ, ನಿವೃತ್ತ ತಹಶೀಲ್ದಾರ್ ಕೆ.ಜಿ. ಮಂಜುನಾಥ್ ಶರ್ಮ ಖಜಾಂಚಿಯಾಗಿ, ಸದಸ್ಯರಾಗಿ ಪ್ರೊ. ಎಸ್.ಜೆ. ಸದಾನಂದ, ಪ್ರಸನ್ನಕುಮಾರ್, ಉಮಾ ವೆಂಕಟೇಶ್, ಕುಮಾರಶಾಸ್ತ್ರಿ, ಘಟಕ ಸಂಚಾಲಕರಾಗಿ ಸುಮಲತಾ ಭೂಪಾಳಂ, ಸಹ ಸಂಚಾಲಕರಾಗಿ ಲಕ್ಷ್ಮೀ ಮಹೇಶ್ ಅವರುಗಳು ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post