ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಹಕರ ಮನೆ ಮನ ಮುಟ್ಟುವ ಉದ್ದೇಶದಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣಗಳ ಮೇಲಿನ ಸಾಲ ನೀಡಲಾಗುತ್ತಿದೆ ಎಂದು ಕೆನರಾ ಬ್ಯಾಂಕಿನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಪ್ರದೀಪ್ ಬಕ್ತ ಅವರು ಹೇಳಿದರು.
ಇಂದು ಕೆನರಾ ಬ್ಯಾಂಕ್ ಶಿವಮೊಗ್ಗದ ಪ್ರಾದೇಶಿಕ ಕಚೇರಿಯಲ್ಲಿ ಚಿನ್ನಾಭರಣಗಳ ವಿಶೇಷ ಸಾಲದ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿನ್ನಾಭರಣಗಳ ಸಾಲವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಗ್ರಾಹಕರಿಗೆ ಅತ್ಯಂತ ಸುಲಭವಾಗಿ ನೀಡುವ ಸಾಲವಿದು. ಕೃಷಿ ಮತ್ತು ಕೃಷಿಯೇತರ ಚಟುವಟಿಕೆ, ಹಾಗೂ ಯಾವುದೇ ಉದ್ದೇಶಕ್ಕಾಗಿ ನಮ್ಮ ಶಾಖೆಗಳಲ್ಲಿ ಗ್ರಾಹಕರಿಗೆ ಕೇವಲ 20 ನಿಮಿಷದ ಒಳಗಾಗಿ ಸಾಲ ಸಿಗುತ್ತದೆ ಎಂದರು.
ಕೇವಲ ವಾರ್ಷಿಕ ಶೇ.7.35 ಬಡ್ಡಿ ದರದಲ್ಲಿ ಅಂದರೆ ತಿಂಗಳಿಗೆ ಕೇವಲ 62 ಪೈಸೆಗೆ ಗರಿಷ್ಠ 35 ಲಕ್ಷದವರೆಗೆ ಪ್ರತಿ ಸ್ಕೀಮಿನಲ್ಲಿ ಅಂದರೆ 105 ಲಕ್ಷದವರೆಗೆ ಒಬ್ಬ ಗ್ರಾಹಕರಿಗೆ ಸಾಲ ನೀಡಲಾಗುತ್ತಿದೆ. ಪ್ರತಿ ಗ್ರಾಮಿಗೆ 3550ರೂ.ವರಗೆ ಸಾಲ ನೀಡಲಾಗುತ್ತಿದೆ. ಹೀಗೆ ಹಲವಾರು ಉಪಯೋಗಗಳನ್ನು ಚಿನ್ನಾಭರಣಗಳ ಮೇಲಿನ ಸಾಲದಿಂದ ಪಡೆಯಬಹುದಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ರೀಜನಲ್ ಹೆಡ್ ಸಂದೀಪ್ ರಾವ್ ಎಜಿಎಂ ಪೂರ್ಣಿಮಾ ಅವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post