ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಾದಯಾತ್ರೆ ಮಾಡಿ ಸಾಯಬೇಡ್ರಿ ಅಂತ ಹೇಳ್ತಿವಿ, ಇಲ್ಲ.. ನಾವು ಸಾಯಿತೀವಿ ಅಂತ ಹಠ ಹಿಡಿದ್ರೆ ಏನ್ ಮಾಡೋಣ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿರುದ್ಧ ಗರಂ ಆಗಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನಾ ಹೆಚ್ಚಾಗುತ್ತಿರುವ ಕಾರಣ ಯಾವುದೇ ಪ್ರತಿಭಟನೆ, ಜನಜಂಗುಳಿ ಸೇರದಂತೆ ನಿರ್ಬಂಧ ಹೇರಲಾಗಿದೆ. ಈ ಮಧ್ಯೆಯೂ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡ್ತೀವಿ ಅಂದ್ರೆ ಏನು ಹೇಳೋದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಬಿಗಿ ಮಾಡಿದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮಾತ್ರ ಪಾದಯಾತ್ರೆ ಮಾಡ್ತೀವಿ ಅಂದಿದ್ದಾರೆ. ನೀವು ಅಧಿಕಾರ ನಡೆಸಿದವರು. ಕಾನೂನಿನ ಬಗ್ಗೆ ನಿಮಗೂ ಅರಿವಿದೆ. ನೀವು ಪಾದಯಾತ್ರೆ ಹೋದರೆ ನಿಮ್ಮ ಜೊತೆ ಕಾರ್ಯಕರ್ತರೂ ಬರುತ್ತಾರೆ. ಅದಕ್ಕೆ ದಯಮಾಡಿ ಹೋರಾಟ ಕೈಬಿಡಿ ಎಂದು ಮನವಿ ಮಾಡುವೆ ಎಂದರು.
ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನಸಭೆ ಚುನಾವಣೆ ಬರುತ್ತೆ ಅಂತ ಶೋ ಮಾಡಲು ನಿಮ್ಮೂಂದಿಗೆ ಜನ ಬಂದೇ ಬರ್ತಾರೆ. ನೀವು ಸಾಯೋದ್ಯಾಕೆ? ನಿಮ್ಮವರನ್ನು ಯಾಕೆ ಸಾಯಿಸುತ್ತೀರಿ. ನಾವು-ನೀವು ಒಟ್ಟಿಗೆ ಸಂತೋಷದಿಂದ ಜೀವನ ಮಾಡೋಣ ಅಂತ ಪ್ರಾರ್ಥನೆ ಮಾಡ್ತೀನಿ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post