ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈಶ್ವರಪ್ಪನವರೇ, ನೀವು ಹಿರಿಯರಾಗಿದ್ದು, ಪಕ್ಷ ಕಟ್ಟುವಲ್ಲಿ ನಿಮ್ಮದೂ ದೊಡ್ಡ ಪಾಲಿದೆ. ಈಗಲೂ ಕಾಲ ಮಿಂಚಿಲ್ಲ. ಬಿಜೆಪಿಯೊಂದಿಗೆ ಸೇರಿಕೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ #B Y Raghavendra ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಕಟ್ಟುವಲ್ಲಿ ಈಶ್ವರಪ್ಪನವರದ್ದು ದೊಡ್ಡ ಪಾತ್ರವಿದೆ. ಯಾವುದೇ ಪರಿಸ್ಥಿತಿ ತಮ್ಮನ್ನು ಇಂತಹ ಸಂದರ್ಭಕ್ಕೆ ತಂದು ನಿಲ್ಲಿಸಿದೆ. ನಮಗೆಲ್ಲಾ ಬೇಕಿರುವುದು ಮೋದಿಯವರು ಪ್ರಧಾನಿಯಾಗುವುದು. ಈ ದೃಷ್ಠಿಯಿಂದ ತಾವು ಬಿಜೆಪಿಯೊಂದಿಗೆ ಸೇರಿಕೊಳ್ಳಿ ಎಂದರು ಕರೆ ನೀಡಿದರು.
Also read: ಟೀಕೆಗೆ ತಲೆ ಕೆಡಿಸಿಕೊಳ್ಳಲ್ಲ, ಈ ಅಂಶಗಳನ್ನು ಮುಂದಿಟ್ಟು ಮತ ಕೇಳ್ತೀವಿ: ಸಂಸದ ರಾಘವೇಂದ್ರ
ಶಿವಮೊಗ್ಗದಲ್ಲಿ ರಾಘವೇಂದ್ರ ಅವರು 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಇಂತಹ ಸಂದರ್ಭದಲ್ಲಿ ತಮಗೆ ಕೈ ಜೋಡಿಸಿ ವಿನಂತಿಸುತ್ತೇನೆ. ಏನೇ ಸಮಸ್ಯೆಯಿದ್ದರೂ ದೆಹಲಿ ನಾಯಕರೊಂದಿಗೆ ಚರ್ಚೆ ಮಾಡಿ. ನಿಮ್ಮೊಂದಿಗೆ ನಾವಂತ ಸದಾ ಇದ್ದೇವೆ. ನೀವು ಸಹ ನಮ್ಮೊಂದಿಗೆ ಇರಬೇಕು ಎಂಬುದು ನಮ್ಮೆಲ್ಲರ ಆಸೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post