ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ನ (ಮುಖ್ಯ ಕಛೇರಿ) ವತಿಯಿಂದ ಇಂದು ನಿವೃತ್ತ ಕರ್ನಲ್ ಆನಂದ್ ರಾವ್ ರವರನ್ನು 75ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಲ್ ರಾವ್ ಅವರು ಮಾತನಾಡಿ, ಅಂದಿನ ಸ್ವಾತಂತ್ರ್ಯದ ದಿನಗಳು ಮತ್ತು ದೇಶದ ವಿಭಜನೆಗಳು ನಿರಾಶ್ರಿತರ ಪಾಡುಗಳು ಆಂತರಿಕವಾದ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಹಾಗೆಯೇ ದೇಶ ಸ್ವಾತಂತ್ರ್ಯ ಸಿಕ್ಕಾಗಿನಿಂದ ಇಲ್ಲಿಯವರೆಗೂ ದೇಶ ನಡೆದುಬಂದ ಹಾದಿಗಳನ್ನ ನೆನೆದು ಇಂದಿನ ಯುವ ಜನತೆಗೆ ಹಲವು ಕಿವಿಮಾತುಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ದೇಶಭಕ್ತಿಗೀತೆಗಳನ್ನ ಹಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಗೈದ ನಮ್ಮ ಪೂರ್ವಿಕರು ಮತ್ತು ದೇಶದ ಯೋಧರನ್ನು ಸ್ಮರಿಸಿಕೊಂಡು ಅವರಿಗಾಗಿ ನುಡಿ ನಮನಗಳನ್ನು ಸಲ್ಲಿಸಲಾಯಿತು.
Also read: ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಮನೆಯಲ್ಲಿ ಧ್ವಜಾರೋಹಣ
ಈ ಸಂದರ್ಭದಲ್ಲಿ ರೀಜ಼ನಲ್ ಮ್ಯಾನೇಜರ್ ವಿ.ಕೆ .ಶ್ರೀಜಿತ್, ಶಾಖಾ ಮುಖ್ಯ ವ್ಯವಸ್ಥಾಪಕರಾದ ಕೆ. ಪುಷ್ಪಲತಾ, ಬ್ಯಾಂಕ್ನ ಪದಾಧಿಕಾರಿಗಳಾದ ಮಹಬಲೇಶ್ವರ ಹೆಗಡೆ, ಪುನೀತ್ ಕುಮಾರ್, ಕೆ.ಟಿ. ದೇವರಾಜ್, ಶಿವಮೊಗ್ಗ ವಲಯದ ಭಾರತೀಯ ಸ್ಟೇಟ್ ಬ್ಯಾಂಕ್ಗಳ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post