ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಕ್ಷ ನಿಷ್ಠೆಯಿಂದ ಇದ್ದರೂ ನನಗಾದ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ K S Eshwarappa ಸ್ಪಷ್ಟನೆ ನೀಡಿದರು.
ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಹಿಂದೂ ಪರ ಮಾತನಾಡುವ ನಾಯಕರನ್ನು ದಮನ ಮಾಡಲಾಗುತ್ತಿದೆ. ಪಕ್ಷ ನಿಷ್ಠೆಯಿಂದ ನನಗಾದ ಅನ್ಯಾಯದ ಬಗ್ಗೆ ಸ್ಪರ್ದೆ ಮಾಡುತ್ತಿದ್ದೇನೆ. ನಾನು ಗೆಲ್ಲುವುದು 100% ಸತ್ಯ ಎಂದರು.
ನಾನು ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದು ಪುರರುಚ್ಚರಿಸಿದ ಅವರು, ಮಠ, ಮಂದಿರಗಳು ವಿವಿಧ ಜಾತಿ ಧರ್ಮದವರು ನನಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
Also read: ಭಾರೀ ಉಗ್ರರ ದಾಳಿ | 60ಕ್ಕೂ ಅಧಿಕ ಸಾವು | ಹೊತ್ತಿ ಉರಿದ ಮಾಸ್ಕೋ ಏರಿಯಾ | ಸಿಕ್ಕಸಿಕ್ಕವರ ಮೇಲೆ ಗುಂಡು
ಬಿಜೆಪಿ ನನ್ನ ತಾಯಿ ಇದ್ದಂತೆ. ನಾನೆಂದು ಹೊರ ಹೋಗಿ ಬಂದಿಲ್ಲ. ಕೆಲವರ ಷಡ್ಯಂತ್ರದಿಂದ ನನ್ನ ತಾಯಿಯಿಂದ ದೂರ ಮಾಡುವವರ ಕುತಂತ್ರ ಫಲಿಸಲ್ಲ ಎಂದು ತಿರುಗೇಟು ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post