ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಡಿ.9ರಿಂದ 13ರವರೆಗೆ ಲಕ್ಷ ಮೋದಕಯಾಗ ಆಯೋಜಿಸಲಾಗಿದೆ ಎಂದು ಅ.ಪ. ರಾಮಭಟ್ಟ ಹೇಳಿದರು.
ನಗರದಲ್ಲಿ ಸುದ್ಧಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, 100ಕ್ಕೂ ಹೆಚ್ಚು ಅರ್ಚಕರ ವೃಂದ, ಭಜನಾ ಮಂಡಳಿ, ಸಂಸ್ಕಾರ ಪ್ರತಿಷ್ಠಾನ, ಎಸ್.ಕೆ. ಮರಿಯಪ್ಪ ಹಾಗೂ ಧರ್ಮದರ್ಶಿಯವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಡಿ.9ರಂದು ಬೆಳಿಗ್ಗೆ 8:30ಕ್ಕೆ ಮಹಾಗಣಪತಿ ಪ್ರಾರ್ಥನೆ, ಸ್ವಸ್ತಿವಾಚನ ಪುಣ್ಯಾಹ, ಋತ್ವಿಗ್ ವರ್ಣನೆ, ಮಧುಪರ್ಕ, ಕಲಶಸ್ಥಾಪನೆ ನಡೆಯಲಿದೆ ಎಂದರು.
ಮಧ್ಯಾಹ್ನ 12:30ಕ್ಕೆ ಲಕ್ಷಮೋದಕ ಯಾಗ ಪ್ರಾರಂಭವಾಗಲಿದ್ದು, ಯಾಗದ ನಂತರ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಪ್ರತಿದಿನ 20ಸಾವಿರ ಮೋದಕ ತಯಾರಿಸಿ ಅಗ್ನಿಗೆ ಆಹುತಿ ನೀಡಲಾಗುವುದು. ಹಾಗೂ ಸಂಜೆ 6:30ರಿಂದ ಅಷ್ಟವಧಾನ ಸೇವೆ, ಮಹಾಮಂಗಳಾರತಿ, ನಂತರ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದರು.
Also read: ಗಮನಿಸಿ! ಮನೆ ಬಾಡಿಗೆಗೆ ನೀಡುವ ಮುನ್ನ ಈ ನಿಯಮಗಳನ್ನು ಪಾಲಿಸಿ
ಡಿ.9, 10ರಂದು ನಡೆಯುವ ಕಾರ್ಯಕ್ರಮದಲ್ಲಿ ಕಾರ್ಕಳದ ಆದರ್ಶ ಗೋಖಲೆ ಇವರ ಉಪನ್ಯಾಸವಿರಲಿದ್ದು, ಡಿ.13ರ ಮಧ್ಯಾಹ್ನ 12:30ಕ್ಕೆ ಲಕ್ಷ ಮೋದಕ ಯಾಗದ ಮಹಾಪೂರ್ಣಾಹುತಿ ನಡೆಯಲಿದ್ದು, ನಂತರ ಮಹಾ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಶಬರೀಶ್ ಕಣ್ಣನ್, ಶ್ರೀಧರ್, ಶಂಕರ ನಾರಾಯಣ, ಗಣೇಶ್ ಅಡಿಗರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post