ಶಿವಮೊಗ್ಗ ತುಂಗಾ ಭದ್ರ ಸಕ್ಕರೆ ಕಾರ್ಖಾನೆಯ ಜಮೀನನ್ನು ರೈತರು ಉಳುಮೆ ಮಾಡಿಕೊಂಡು ಬಂದಿದ್ದು, ಈಗ ಮಾಲೀಕರು ಅದನ್ನು ಹೈಕೋರ್ಟ್ ಆದೇಶದಂತೆ ವಶಪಡಿಸಿಕೊಳ್ಳುತ್ತಾರೆ ಎಂಬ ಆತಂಕದಲ್ಲಿ ರೈತರು ಇರುವುದು ಮತ್ತು ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಸರ್ಕಾರ ರೈತರ ಪರವಾಗಿದೆ ಎಂದು ಸಚಿವ ಮಧು ಬಂಗಾರಪ್ಪ Minister Madhu Bangarappa ಹೇಳಿದ್ದಾರೆ.
ಕೋವಿಡ್ Covid ಸಂಬಂಧಪಟ್ಟಂಗೆ ಜಿಲ್ಲೆಯಲ್ಲಿ ಆತಂಕದ ವಾತಾವರಣ ಸಧ್ಯಕ್ಕೆ ಇಲ್ಲ. ಜನರ ಸಹಕಾರ ಅತಿ ಮುಖ್ಯ. ಸರ್ಕಾರದ ಗೈಡ್ಲೈನ್ಸ್ ಪ್ರಕಾರ ಎಲ್ಲಾ ನಾಗರೀಕರು ಅನುಸರಿಸಬೇಕಾಗುತ್ತದೆ. ಜನನಿಬಿಡ ಪ್ರದೇಶಗಳಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಬೇಕು, ಮಾಸ್ಕ್ ಧರಿಸಬೇಕು, ಸರ್ಕಾರ ಏನು ಮಾಡಿದರು ಜನರ ವಿವೇಚನೆ ಅತಿ ಮುಖ್ಯ, ಜನರು ಜಾಗೃತಿಗೊಳ್ಳಬೇಕು ಎಂದರು.
Also read: ರಾಷ್ಟ್ರಮಟ್ಟದ ಸ್ಕ್ವಾಯ್ ಕ್ರೀಡೆ: ಶಿವಮೊಗ್ಗ ಜಿಲ್ಲೆಯ 2 ಕ್ರೀಡಾಪಟುಗಳ ಆಯ್ಕೆ
ಸಂಸದ ಪ್ರತಾಪ್ ಸಿಂಹ MPPrathapSimha ಜನರ ಘನತೆ ಗೌರವ ತೆಗೆಯುತ್ತಿದ್ದಾರೆ, ಪ್ರತಾಪ್ ಸಿಂಹ ಏನು ಅಂತ ಅವರೇ ಹೇಳಿಕೊಂಡಿದ್ದಾರೆ. ಸೋಮಾರಿಗಳು ತಾನೇ ಇಂತಹ ಮಾತುಗಳನ್ನ ಹೇಳೋದು. ಬದ್ದಿವಂತರು ಇಂತಹ ಹೇಳಿಕೆ ಕೊಟ್ತಾರಾ ?. ಮಾಧ್ಯಮದಲ್ಲಿ ಮಾತಾಡೋದನ್ನ ಬಿಟ್ಟು ಏನ್ ಸಾಹಸ ಮಾಡಿದ್ದಾರೆ. ನಾನು ಬರಹಗಾರ, ನಾನು ಬರಹಗಾರ ಅನ್ನೊದನ್ನ ಬಿಟ್ಟು. ಮತ ಹಾಕಿರುವವರರ ಘನತೆ ಕಾಪಾಡಿಕೊಳ್ಳಲಿ ಎಂದರು.
ಬಿಜೆಪಿ ಅಧಿಕಾರದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಿಂದೇನೆ ಕೂಡ ನಾವು ವಿರೋಧ ಪಕ್ಷದಲ್ಲಿದಾಗ ಹೇಳುತ್ತಿದ್ದೇವು. ಅದನ್ನು ಯತ್ನಾಳ್ ಈಗ ಸತ್ಯವನ್ನು ನುಡಿದಿದ್ದಾರೆ. ಮುಂದೆ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು. ಸರ್ಕಾರದ ಹಣ ಆ ರೀತಿಯ ದುರ್ಬಳಕೆ ಮಾಡಿಕೊಳ್ಳಲು ಬರುವುದಿಲ್ಲ. ಯತ್ನಾಳ್ ಅವರಿಗೆ ಆ ಭಾವನೆ ಇದ್ದರೆ ಸರ್ಕಾರ ಗಮನಕ್ಕೆ ತಗೆದುಕೊಂಡು ಕ್ರಮ ಕೈಗೊಳ್ಳುವುದು ಒಳ್ಳೆಯದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post