ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದುಗಳು ಶಾಂತಿ ಪ್ರಿಯರು, ಹಿಂದೂ ಸಮಾಜ ಸಿಡಿದೆದ್ದರೆ ಮುಸ್ಲಿಂ ಸಮಾಜ ಏನಾಗಲಿದೆ ಎಂಬ ಕಲ್ಪನೆ ಇದೆಯೇ? ಮುಸ್ಲಿಂ ನಾಯಕರು ಯುವಕರಿಗೆ ಬುದ್ಧಿ ಹೇಳಬೇಕು, ಇಲ್ಲದಿದ್ದರೆ ನಮ್ಮ ಸರ್ಕಾರ ಅವರಿಗೆ ಬುದ್ಧಿ ಕಲಿಸಲಿದೆ ಎಂದು ಶಾಸಕ ಈಶ್ವರಪ್ಪ MLA Eshwarappa ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಎಸ್ಡಿಪಿಐ, ಸಿಪಿಐ ಸಂಘಟನೆಗಳು ಬದಲಾಗುವ ಮನಸ್ಥಿತಿಯಲ್ಲಿಲ್ಲ. ಆದ್ದರಿಂದ ಅದನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಮತ್ತು ಗೃಹಸಚಿವರಲ್ಲಿ ಮನವಿ ಮಾಡಿದ್ದೇನೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಸೂಕ್ತ ಕೈಗೊಳ್ಳಲಿದೆ ಎಂದು ಹೇಳಿದರು.
ಡಿಕೆಶಿ, ಸಿದ್ಧರಾಮಯ್ಯ ಅವರಿಗೆ ಸರ್ದಾರ್ ವಲ್ಲಬಾಯ್ ಪಟೇಲ್, ಭಗತ್ ಸಿಂಗ್, ಸಾವರ್ಕರ್ ಬೇಕಿಲ್ಲ. ದೇಶವನ್ನು ತುಂಡು ಮಾಡಿದ ನೆಹರೂ ಪರ ಮಾತನಾಡುತ್ತಿದ್ದಾರೆ. ಅವರು ಜಾತಿವಾದಿಗಳು ಪ್ರತಿಯೊಂದಕ್ಕೂ ಜಾತಿ ಲೇಪನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ಮುಸಲ್ಮಾನರ ಮೇಲೂ ಆರೋಪ ಮಾಡುವುದಿಲ್ಲ. ಅವರ ಹಬ್ಬಗಳ ಆಚರಣೆಗೆ ನಾವು ತೊಂದರೆ ನೀಡಿಲ್ಲ. ಅಂತೆಯೇ ನಮ್ಮ ಹಬ್ಬಗಳ ತಂಟೆಗೆ ಬರಬೇಡಿ, ಗಣೇಶೋತ್ಸವಕ್ಕೆ ಅಡ್ಡಿಪಡಿಸಿದರೆ ಸರಿ ಇರುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post