ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ನಡೆಯುತ್ತಿರುವ ಕೃಷಿ ಮತ್ತು ತೋಟಗಾರಿಕಾ ಮೇಳಕ್ಕೆ ಇಂದು ತೆರೆ ಬೀಳಲಿದ್ದು, ಕಳೆದ ಮೂರು ದಿನಗಳಲ್ಲಿ ಲಕ್ಷಾಂತರ ಮಂದಿ ಭೇಟಿ ನೀಡಿರುವುದು ಭರ್ಜರಿ ಪ್ರತಿಕ್ರಿಯೆ ದೊರೆತಿದೆ.
ನ.7ರಂದು ಆರಂಭವಾದ ಮೇಳಕ್ಕೆ ಮೊದಲ ದಿನವೇ ಸುಮಾರು 50 ಸಾವಿರಕ್ಕೂ ಅಧಿಕ ರೈತ ಬಾಂಧವರೇ ಭೇಟಿ ನೀಡಿದ್ದರು.
ಇನ್ನು, ಎರಡನೇ ದಿನ ಸುಮಾರು 2 ಲಕ್ಷದಷ್ಟು ರೈತರು ಹಾಗೂ ಸಾರ್ವಜನಿಕರು ಮೇಳದಲ್ಲಿ ಪಾಲ್ಗೊಂಡಿದ್ದರು. ಪ್ರಮುಖವಾಗಿ, ಯುವ ಜನತೆ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.
ಅಲ್ಲದೆ ಇಂದಿನ ಮೇಳದಲ್ಲಿ ಸುಮಾರು ಒಂದುವರೆ ಲಕ್ಷ ಮೊತ್ತದ ವಿವಿಧ ಬೀಜಗಳ ಮಾರಾಟವಾಗಿದ್ದು ಸುಮಾರು ಮೂರರಿಂದ ನಾಲ್ಕು ಲಕ್ಷದ ಮೊತ್ತದ ಸಸಿಗಳ ಮಾರಾಟ ಆಗಿದೆ. ಇದರ ಪ್ರಯೋಜನವನ್ನು ರೈತರು ಪಡೆದುಕೊಂಡಿದ್ದಾರೆ.
ಮೂರನೇ ದಿನವೂ ಸಹ ಕೃಷಿ ಮತ್ತು ತೋಟಗಾರಿಕಾ ಮೇಳ ಯಶಸ್ವಿಯಾಗಿದ್ದು ರೈತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು.
ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪಾಟೀಲ್ ಅವರು ಮೇಳದ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು.
ಅಣಬೆ, ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರು ಮಾಡುವುದು, ಕೃಷಿ ವಿಜ್ಞಾನ ಕೇಂದ್ರದ ಹೂ ಮತ್ತು ತರಕಾರಿ ಪ್ರಾತ್ಯಕ್ಷತೆಗೆ ಭೇಟಿ ನೀಡಿದರು.
ಹಾಗೆಯೇ ಕೃಷಿ ವಿಜ್ಞಾನ ಕೇಂದ್ರದಿಂದ ಉದ್ಘಾಟನೆಗೊಂಡಿರುವ ಕೃಷಿ ಆನ ಕೇಂದ್ರಕ್ಕೂ ಭೇಟಿ ನೀಡಿ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳು ಪ್ರಶಂಸೆ ವ್ಯಕ್ತಪಡಿಸಿದರು.

ಇನ್ನು, ಕೃಷಿ ಮತ್ತು ತೋಟಗಾರಿಕೆ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರು ಮಾಡುವ ಬಗ್ಗೆ ವಿಶೇಷವಾಗಿ ಆಸಕ್ತಿವಹಿಸಿ ಅದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರು ತಯಾರು ಮಾಡುವ ಬಗ್ಗೆ ಕೆವಿಕೆ ಕೃಷಿ ಕೆವಿಕೆ ಕೃಷಿ ವಿಜ್ಞಾನ ಕೇಂದ್ರದ ಪ್ರಾತ್ಯಕ್ಷಿಕೆ ತಾಲೂಕುಗಳಲ್ಲಿ ಇದರ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಇರಿಸಲಾಗಿದೆ.ಸಂಸದ ಬಿ.ವೈ. ರಾಘವೇಂದ್ರ ಅವರು ತಮ್ಮ ಕುಟುಂಬ ಸಹಿತ ಮೇಳಕ್ಕೆ ಭೇಟಿ ನೀಡಿದ್ದರು.
ಸಂಸದರು ಕುಲಪತಿಗಳೊಂದಿಗೆ ತೆರಳಿ ಮೇಳವನ್ನು ವೀಕ್ಷಿಸಿ, ಮಾಹಿತಿ ಪಡೆದುಕೊಂಡರು. ಮೇಳದಲ್ಲಿರುವ ವಿಶೇಷತೆಗಳು, ಇವುಗಳು ರೈತರಿಗೆ ಆಗಬಹುದಾದ ಉಪಯೋಗಳು ಸೇರಿದಂತೆ ಹಲವು ವಿಷಯಗಳು ಕುರಿತಾಗಿ ಮಾಹಿತಿ ಪಡೆದುಕೊಂಡರು.
ಹಾಗೆಯೇ, ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಡಿ.ಎಸ್. ಅರುಣ್ ಸೇರಿದಂತೆ ಹಲವು ಗಣ್ಯರು ಮೇಳಕ್ಕೆ ಭೇಟಿ ನೀಡಿದ್ದಾರೆ.
ಇನ್ನು, ಮೇಳದಲ್ಲಿ ಸುಮಾರು 225 225 ಹೈಟೆಕ್ ಮಳಿಗೆಗಳು, 150 ಎಕಾನಮಿ ಮಳಿಗೆಗಳನ್ನು ತೆರೆಯಲಾಗಿದೆ. ಇದರೊಟ್ಟಿಗೆ 25 ಯಂತ್ರೋಪಕರಣ ಮಳಿಗೆಗಳು, 40 ಆಹಾರ ಮಳಿಗೆಗಳು ಸೇರಿ ಒಟ್ಟಾರೆಯಾಗಿ ಸುಮಾರು 450 ಮಳಿಗೆಗಳಲ್ಲಿ ಕೃಷಿ ಮತ್ತು ತೋಟಗಾರಿಕಾ ಸಂಬಂಧಿತ ತಾಂತ್ರಿಕ ಮಾಹಿತಿಗಳು ದೊರೆಯುತ್ತಿವೆ. ಅಲ್ಲದೇ, ಯಂತ್ರೋಪಕರಣಗಳ ಪ್ರದರ್ಶನ ಅಡಿಕೆಯಲ್ಲಿ ಸಮಗ್ರ ಮಾಹಿತಿ ನೀಡಲಾಗುತ್ತಿದೆ.
ವಿದ್ಯಾರ್ಥಿಗಳ ಭೇಟಿ
ಇನ್ನು, ಕೃಷಿ ಮೇಳಕ್ಕೆ ಇಂದು ನೂರಾರು ವಿದ್ಯಾರ್ಥಿಗಳು ಭೇಟಿ ಕೊಟ್ಟು ಕೃಷಿ ಸಂಬಂಧಿತ ಮಾಹಿತಿ ಪಡೆದುಕೊಳ್ಳುವ ಜೊತೆಯಲ್ಲಿ, ಸಾಂಪ್ರದಾಯಿಕ ಆಟಗಳನ್ನೂ ಸಹ ಆಡಿ ಸಂಭ್ರಮಿಸಿದರು.
ಕೃಷಿ ವಿಜ್ಞಾನ ಕೇಂದ್ರದಲ್ಲಿನ ಕೃಷಿ ಪ್ರವಾಸೋದ್ಯಮಕ್ಕೆ ನಗರದ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇಂದು ಭೇಟಿ ನೀಡಿದ್ದರು.
ಮೇಳದ ಮಾಹಿತಿ ಕೇಂದ್ರಗಳಿಗೆ ತೆರಳಿದ ವಿದ್ಯಾರ್ಥಿಗಳು ಕೃಷಿ ಸಂಬಂಧಿತ ಬೀಜಗಳ ಉಪಕರಣಗಳ ಕೃಷಿ ಬೆಳೆಗಳ ಕೃಷಿ ಅರಣ್ಯ ಸಾಂಪ್ರದಾಯಿಕ ಕ್ರೀಡೆಗಳ ವಿವಿಧ ಮಾಹಿತಿಗಳನ್ನ ಪಡೆದುಕೊಂಡರು.
ಕೃಷಿಯನದಲ್ಲಿರುವ ಸಾಂಪ್ರದಾಯಿಕ ಕ್ರೀಡೆಗಳಾದ ಲಗೋರಿ, ಬುಗುರಿ, ಚಿನ್ನಿದಾಂಡು, ಕುಂಟೆಪಿಲ್ಲೆ, ಮರಕೋತಿ ಆಟ, ಜೋಕಾಲಿ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡಿ ಆನಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















