ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಇಂದು ಶಿವಮೊಗ್ಗ ನಗರ ವಿಧಾನಸಭಾ ವ್ಯಾಪ್ತಿಯ ಅರವಿಂದ ನಗರ, ಶಾಂತಿನಗರ ಹಾಗೂ ಕಂಟ್ರಿ ಕ್ಲಬ್ ಬಳಿ ಇರುವ ಗೋಶಾಲೆಯಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
Also read: ನರೇಂದ್ರ ಕುಮಾರ್ ಅವರಿಗೆ ವಿಟಿಯು ಪಿಹೆಚ್ಡಿ ಪದವಿ ಪ್ರದಾನ
ಶಿವಮೊಗ್ಗ ನಗರದ ಅರವಿಂದ್ ನಗರದಿಂದ ಪಿ ಎನ್ ಟಿ ಕಾಲೋನಿಗೆ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ, 35 ಲಕ್ಷ ರೂ ವೆಚ್ಚದಲ್ಲಿ ಶಿವಮೊಗ್ಗದ ಮಹಾವೀರ ಗೊಶಾಲೆಯಲ್ಲಿ ಶೌಚಾಲಯ, ಒಂದು ಕೊಳವೆ ಬಾವಿ ಮತ್ತು 500 ಮೀ. ರಸ್ತೆ ನಿರ್ಮಾಣ, 18 ಲಕ್ಷ ರೂ ವೆಚ್ಚದಲ್ಲಿ ಶಾಂತಿನಗರ ರಸ್ತೆ ಚರ್ಚ ಎದುರು ನೀರಿನ ಬ್ಯಾಂಕ್ ಹತ್ತಿರ 300 ಮೀಟರ್ ರಸ್ತೆ ನಿರ್ಮಾಣ, ಶಿವಮೊಗ್ಗ ನಗರದ ಸೂರ್ಯ ಲೇಔಟ್ ಮುಖ್ಯ ರಸ್ತೆಯಲ್ಲಿ ಬಾಕ್ಸ್ ಚರಂಡಿ ಕಾಮಗಾರಿ ನಿರ್ಮಾಣ ಮಾಡಲಾಗುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post