ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಉದಯೋನ್ಮುಖ ಬರಹಗಾರ್ತಿ, ಅಂಕಣಗಾರ್ತಿ ಆರ್. ನಿತ್ಯಶ್ರೀ ಅವರಿಗೆ ಈ ಸಾಲಿನ ರಾಜ್ಯ ಮಟ್ಟದ ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿ ಲಭಿಸಿದೆ.
ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಈ ಪ್ರಶಸ್ತಿಗೆ ಆರ್. ನಿತ್ಯಶ್ರೀ ಭಾಜರಾಗಿದ್ದು, ಇವರೊಂದಿಗೆ ರಾಜ್ಯದಾದ್ಯಂತದ 21 ಮಂದಿ ಬರಹಗಾರರನ್ನು ಗೌರವಿಸಲಾಗುತ್ತಿದೆ ಎಂದು ಪ್ರತಿಷ್ಟಾನದ ಹುಲಿಯೂರು ದುರ್ಗ ಲಕ್ಷ್ಮೀನಾರಾಯಣ್ ತಿಳಿಸಿದ್ದಾರೆ.
ಆಯ್ಕೆಯಾದ ಬರಗಾರರು ಮತ್ತು ಅವರ ರಚನೆಯ ಕವಿತೆಯ ವಿವರ ಇಂತಿದೆ:
ಶಮಂತ್ ಕುಮಾರ್, ತುಮಕೂರು ಜಿಲ್ಲೆ. (ದೀಪ ರಂಜನಿ), ಕುಡಗುಂಟಿ ಗವಿಸಿದ್ದಪ್ಪ, ಕೊಪ್ಪಳ ಜಿಲ್ಲೆ (ಕನ್ನಡ ಕಂಪನ), ಭಾಗ್ಯ ಗಿರೀಶ್, ಚಿತ್ರದುರ್ಗ ಜಿಲ್ಲೆ (ಮೇಘ ಸಂದೇಶ), ಕಾಡಜ್ಜಿ ಮಂಜಪ್ಪ, ವಿಜಯನಗರ ಜಿಲ್ಲೆ (ಚೈತ್ರದ ಸಿರಿ), ತಿಪ್ಪೇಸ್ವಾಮಿ, ತುಮಕೂರು ಜಿಲ್ಲೆ (ಸಾಹಿತ್ಯ ವಿಸ್ಮಯ), ಲತಾ ಆಚಾರ್ಯ ಬನಾರಿ, ಕಾಸರಗೋಡು (ಕಾವ್ಯಲತೆ), ಕುಮಾರ ಸ್ವಾಮಿ ಹೆಚ್. ಎಂ., ಮೈಸೂರು ಜಿಲ್ಲೆ (ಮಧುರಾ), ಸಾವಿತ್ರಮ್ಮ ಓಂಕಾರ್, ಹಾಸನ ಜಿಲ್ಲೆ (ಸಂಸ್ಕೃತಿಯ ನಾಡು), ಕಾವ್ಯ ವಿ. (ಹೇವಿಕಾ ), ತುಮಕೂರು ಜಿಲ್ಲೆ (ಚುರುಕು), ಜಬೀವುಲ್ಲಾ ಎಂ. ಅಸದ್, ಚಿತ್ರದುರ್ಗ ಜಿಲ್ಲೆ (ಈ ತನಕ ತತ್ವಜ್ಞಾನ), ನಿತ್ಯಶ್ರೀಆರ್., ಶಿವಮೊಗ್ಗ ಜಿಲ್ಲೆ (ಕನವರಿಕೆ), ಶ್ರೀಮತಿ ಎಸ್. ಎಲ್. ಮಂಜುನಾಥ್, ಮೈಸೂರು (ಶ್ರೀಗಂಧ), ಸಂಗೀತ ಹೆಚ್. ಮಠಪತಿ, ಬಾಗಲಕೋಟೆ (ರಾಮಾಮೃತ), ಆರ್. ಸುನೀಲ್ ತರೀಕೆರೆ, ಚಿಕ್ಕಮಗಳೂರು ಜಿಲ್ಲೆ (ದೃಶ್ಯ), ರಾಘವೇಂದ್ರ ದೇವಪ್ಪ ತಳವಾರ, ಗದಗ ಜಿಲ್ಲೆ (ಆತ್ಮಾನುಭವ), ಬಿ. ಎನ್. ಪದ್ಮಪ್ರಸಾದ್ ಜೈನ್, ಬೆಳ್ಳೂರು, ಮಂಡ್ಯ ಜಿಲ್ಲೆ, ಜೆ. ಎಸ್. ಚಂದ್ರನಾಥ ನೀಲಾನಹಳ್ಳಿ, ದಾವಣಗೆರೆ ಜಿಲ್ಲೆ (ಸತ್ಯಧ್ವನಿ), ಮುದ್ದು ಮನಸು ಮಂಜುಳಾಗೌಡ, ಉತ್ತರ ಕನ್ನಡ ಜಿಲ್ಲೆ (ಕಾವ್ಯ ಕುಸುಮ), ಕ. ಮಾ. ನಾಗಶೆಟ್ಟಿ, ಚಾಮರಾಜನಗರ ಜಿಲ್ಲೆ (ನಾನೇಕೆ ಬರೆಯುತ್ತೇನೆ?), ಪೂರ್ಣಿಮಾ ಶ್ರೀಧರ ಯಲಿಗಾರ, ಬೆಳಗಾವಿ ಜಿಲ್ಲೆ (ಸ್ನೇಹದ ಸಿರಿ), ಅಂಜಿನ ಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲೆ (ಬದುಕು).
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post