Thursday, July 31, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ

ಮ್ಯಾಕ್ಸ್ ಆಸ್ಪತ್ರೆ ವೈದ್ಯರ ಐತಿಹಾಸಿಕ ಸಾಧನೆ: ಟಿಒಇಟಿವಿಎ ಯಶಸ್ವಿ ಶಸ್ತ್ರಚಿಕಿತ್ಸೆ

ಕಲೆಯೇ (ಶಸ್ತ್ರ ಚಿಕಿತ್ಸೆಯ ಗುರುತು ) ಇಲ್ಲದೇ ಥೈರಾಯ್ಡ್ ಶಸ್ತ್ರಚಿಕಿತ್ಸೆ ಮಾಡುವ ನೂತನ ವಿಧಾನ ಈಗ ಶಿವಮೊಗ್ಗದಲ್ಲಿ

October 28, 2021
in ಶಿವಮೊಗ್ಗ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ ಬೆಂಗಳೂರು ಹೊರತುಪಡಿಸಿ ಇಡೀ ರಾಜ್ಯದಲ್ಲೇ ಅತಿ ವಿನೂತನ ಶಸ್ತ್ರಚಿಕಿತ್ಸೆಯೊಂದನ್ನು ನೆರವೇರಿಸುವಲ್ಲಿ ನಗರದ ಮ್ಯಾಕ್ಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದು, ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲು ಸ್ಥಾಪಿಸಿದ್ದಾರೆ.

ಹೌದು… ಥೈರಾಯ್ಡ್’ಗೆ ಸಂಬಂಧಿಸಿದ ಟ್ರಾನ್ಸ್ ಓರಲ್ ಎಂಡೋಸ್ಕೋಪಿಕ್ ಥೈರಾಯ್ಡೆಕ್ಟಮಿ ವೆಸ್ಟಿಬುಲರ್ ಅಪ್ರೋಚ್(ಟಿಒಇಟಿವಿಎ) ಎಂಬ ಅತ್ಯಂತ ಸುಧಾರಿತ ಶಸ್ತ್ರಚಿಕಿತ್ಸೆಯನ್ನು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನೆರವೇರಿಸಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಬೆರಳೆಣಿಕೆಯಷ್ಟು ವೈದ್ಯರಷ್ಟೇ ಇದುವರೆಗೂ ನೆರವೇರಿಸಿದ್ದಾರೆ. ಆದರೆ, ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಇಂತಹ ಸಾಧನೆ ಮಾಡಿರುವುದು ಇದೇ ಮೊದಲು.


ಟಿಒಇಟಿವಿಎ ಎಂದರೇನು?

ಥೈರಾಯ್ಡ್ ಸಮಸ್ಯೆಗಾಗಿ ಸಾಮಾನ್ಯವಾಗಿ ಕುತ್ತಿಗೆ ಭಾಗದಲ್ಲಿ ಚರ್ಮವನ್ನು ಕೊಯ್ದು ಶಸ್ತ್ರಚಿಕಿತ್ಸೆ ನಡೆಸಿ, ಹೊಲಿಗೆ ಹಾಕಲಾಗುತ್ತದೆ. ಆದರೆ, ಶಸ್ತ್ರಚಿಕಿತ್ಸೆಯಾದ ಭಾಗದಲ್ಲಿ ಕಲೆ ಅಥವಾ ಗುರುತು ಉಳಿದುಬಿಡುತ್ತದೆ. ಇದು ಚಿಕ್ಕ ವಯಸ್ಸಿನ ಯುವತಿಯರಲ್ಲಿ, ರೂಪದರ್ಶಿಗಳಿಗೆ ಹಾಗೂ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿಯುಳ್ಳವರಿಗೆ ಸಮಸ್ಯೆಯಾಗಿ ಕಾಡುತ್ತದೆ.

ಈ ಸಮಸ್ಯೆ ಹೋಗಲಾಡಿಸಲು ಕುತ್ತಿಗೆ ಹೊರತುಪಡಿಸಿ ಬೇರೆ ಭಾಗದಿಂದ ರಿಮೋಟ್ ಆಕ್ಸಿಸ್ ಸರ್ಜರಿ ಎಂಬ ವಿಧಾನದ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ, ಆ ಭಾಗದಲ್ಲೂ ಕಲೆ ಉಳಿಯುವ ಜೊತೆಯಲ್ಲಿ ಕೆಲವು ಅಡ್ಡಪರಿಣಾಮಗಳು ಕಾಣಿಸಿಕೊಂಡವು. ಹೀಗಾಗಿ, ಇದರಲ್ಲಿ ಹೆಚ್ಚಿನ ಸಂಶೋಧನೆ ನಡೆಸಿದರ ಪರಿಣಾಮ ಈಗ ಅನುಸರಿಸುತ್ತಿರುವ ಟಿಒಇಟಿವಿಎ ವಿಧಾನವಾಗಿದೆ.


ಇದರಲ್ಲಿ, ದೇಹದ ಸ್ವಾಭಾವಿಕ ರಂಧ್ರಗಳ ಮೂಲಕ ದರ್ಶಕಗಳನ್ನು ಬಳಸಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ (NOTES- Natural Orifice Transluminal Endoscopic Surgery). ಬಾಯಿಯ ವಸಡು ಹಾಗೂ ತುಟಿಯ ನಡುವಿನ ಕೆಳ ವಸಡಿನಲ್ಲಿ 1 ಸೆಮೀ ಹಾಗೂ ಅರ್ಧ ಸೆಮೀ ಭಾಗದಷ್ಟು ರಂಧ್ರ ಕೊರೆಯಲಾಗುತ್ತದೆ. ಆನಂತರ ಚರ್ಮದ ಕೆಳಭಾಗದಲ್ಲಿ ಸಣ್ಣ ಕೊಳವೆ ಹೋಗುವ ರೀತಿ ಮಾಡಿ, ಕುತ್ತಿಗೆಯ ಮೂಲಕ ಥೈರಾಯ್ಡ್ ತಲುಪಿ ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರತೆಗೆಯಲಾಗುತ್ತದೆ.

ಈ ವಿಧಾನದ ಪ್ರಯೋಜನಗಳೇನು?
ಇದು ಪ್ರಪಂಚದಲ್ಲಿ ಅತ್ಯಂತ ಸುಧಾರಿತ ವಿಧಾನವಾಗಿದೆ. ಈ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದರೆ ಯಾವುದೇ ಭಾಗದಲ್ಲಿ ಕಲೆ ಅಥವಾ ಗುರುತು ಉಳಿಯುವುದಿಲ್ಲ. ಬಾಯಿಯ ಒಳಭಾಗದಲ್ಲಿ ರಂಧ್ರ ಮಾಡಿದ ಜಾಗದಲ್ಲಿ ಹಾಕುವ ಸಣ್ಣ ಹೊಲಿಗೆ ತಾನಾಗಿಯೇ ಕರಗಿ ಹೋಗುವುದರಿಂದ ಹೊಲಿಗೆ ತೆಗೆಸಬೇಕು ಎಂಬ ಸಮಸ್ಯೆಯಿಲ್ಲ. ಅತಿ ಕಡಿಮೆ ನೋವು ನೀಡುವ ಈ ವಿಧಾನದಲ್ಲಿ ಚಿಕಿತ್ಸೆ ಮಾಡಿಕೊಂಡರೆ 1-2 ದಿನದ ಒಳಗಾಗಿ ಆಸ್ಪತ್ರೆಯಿಂದ ಮನೆಗೆ ತೆರಳಬಹುದಾಗಿದೆ.

ಥೈರಾಯ್ಡ್ ಶಸ್ತ್ರಚಿಕಿತ್ಸೆಯಲ್ಲಿ ಇದು ಅತ್ಯಂತ ಸುಧಾರಿತವಾದ ವಿಧಾನವಾಗಿದ್ದು, ನಮ್ಮ ಆಸ್ಪತ್ರೆಯಲ್ಲಿ ನಡೆಸಲಾದ ಇದು ಸಂಪೂರ್ಣ ಯಶಸ್ವಿಯಾಗಿದೆ. ಚಿಕ್ಕಮಗಳೂರಿನ 17 ವರ್ಷದ ಬಾಲಕಿಗೆ ಥೈರಾಯ್ಡ್ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಆಕೆ ಹಾಗೂ ಅವರ ಕುಟುಂಬಸ್ಥರು ಶಸ್ತ್ರಚಿಕಿತ್ಸೆಯ ಬಗ್ಗೆ ಕೊಂಚ ಆತಂಕಗೊಂಡಿದ್ದರು. ಆದರೆ, ಈ ನೂತನ ವಿಧಾನದ ಬಗ್ಗೆ ಸಂಫೂರ್ಣವಾಗಿ ತಿಳಿಸಿದ ನಂತರ ಒಪ್ಪಿಕೊಂಡರು. ಆಕೆಗೆ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಅದಾದ ಅರ್ಧ ಗಂಟೆಯಲ್ಲಿಯೇ ಆಕೆ ಮಾತನಾಡಲು ಆರಂಭಿಸಿದರು. ಮೊದಲ ದಿನ ಕೇವಲ ದ್ರವ ರೂಪದ ಆಹಾರ ಕೊಡಲಾಗಿದ್ದು, ಮರುದಿನದಿಂದ ಸಾಮಾನ್ಯ ಆಹಾರವನ್ನು ತೆಗೆದುಕೊಳ್ಳಲು ಸೂಚಿಸಲಾಗಿತ್ತು. ಡೇ ಕೇರ್ ರೀತಿಯಲ್ಲಿ ಕೇವಲ ೨೪ ಗಂಟೆಗಳ ಅವಧಿಯಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಹಿಂತಿರುಗಬಹುದಾಗಿದೆ.

-ಡಾ.ಶ್ರೇಯಾಂಸ ಎಂ, ಎಂಡೋಕ್ರೈನ್ ಮತ್ತು ಆಂಕೋಪ್ಲಾಸ್ಟಿಕ್ ಸ್ತನ ಶಸ್ತ್ರಚಿಕಿತ್ಸಕ, ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

ವೈದ್ಯರು ವಹಿಸಬೇಕಾದ ಎಚ್ಚರಿಕೆಗಳೇನು?
ಬಾಯಿಯ ಮೂಲಕ ಕುತ್ತಿಗೆಯಲ್ಲಿ ನಡೆಸುವ ಅತಿ ಸುಧಾರಿತ ಶಸ್ತ್ರಚಿಕಿತ್ಸೆಯಾದ ಇದನ್ನು ಅತ್ಯಂತ ಪರಿಣಿತಿ ಹೊಂದಿರುವ ವೈದ್ಯರು ಮಾತ್ರ ನೆರವೇರಿಸಬೇಕು. ಚಿಕಿತ್ಸೆಯ ವೇಳೆ ಯಾವುದೇ ಸೂಕ್ಷ್ಮ ಅಂಗಗಳಿಗೆ ಹಾನಿಯಾಗದಂತೆ ನಡೆಸುವ ಅಗತ್ಯವಿದ್ದು ಭಾರೀ ಜಾಗ್ರತೆ ವಹಿಸಬೇಕಿರುತ್ತದೆ. ಕನಿಷ್ಠ 200 ರಿಂದ 300ರಷ್ಟು ಥೈರಾಯ್ಡ್ ಶಸ್ತ್ರಚಿಕಿತ್ಸೆ ನಡೆಸಿ ಅನುಭವ ಇರುವ ವೈದ್ಯರು ಇದರ ಪ್ರಯೋಗ ಮಾಡಬಹುದು.


ರೋಗಿಗಳು ವಹಿಸಬೇಕಾದ ಎಚ್ಚರಿಕೆಗಳೇನು?

ಈ ಶಸ್ತ್ರಚಿಕಿತ್ಸೆಗೆ ಒಳಗಾದವರು ಬಾಯಿಯ ಶುಚಿತ್ವವನ್ನು ನಿರಂತರವಾಗಿ ಕಾಪಾಡಿಕೊಳ್ಳಬೇಕು. ಯಾವುದೇ ರೀತಿಯ ಆಹಾರ ಸೇವಿಸಿದ ನಂತರ ಸ್ವಚ್ಛವಾಗಿ ಬಾಯಿಯನ್ನು ಶುಭ್ರಗೊಳಿಸಿ, ಇನ್ಪೆಕ್ಷನ್ ಆಗದಂತೆ ಜಾಗ್ರತೆ ವಹಿಸಬೇಕು. ಆರಂಭದಲ್ಲಿ ಒಂದೆರಡು ದಿನ ದ್ರವ ಆಹಾರ ಸೇವಿಸಿ, ಆನಂತರ ಸಾಮಾನ್ಯ ಆಹಾರ ತೆಗೆದುಕೊಳ್ಳಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada NewsKannada News LiveKannada News OnlineKannada News WebsiteKannada WebsiteLatest News KannadaLocal NewsMalnad NewsMax HospitalNews in KannadaNews KannadaShimogaShivamoggaShivamogga NewsThyroidಥೈರಾಯ್ಡ್ಮಲೆನಾಡು_ಸುದ್ಧಿಮ್ಯಾಕ್ಸ್‌ ಆಸ್ಪತ್ರೆಶಿವಮೊಗ್ಗಶಿವಮೊಗ್ಗ_ನ್ಯೂಸ್
Previous Post

ಯಲ್ಲಾಪುರ: ಜನಪ್ರಿಯ ಟ್ರಸ್ ವತಿಯಿಂದ ಉಚಿತ ಪಠ್ಯ ಪುಸ್ತಕ ವಿತರಣೆ

Next Post

ಕನ್ನಡ ವಿಶ್ವಮಟ್ಟದಲ್ಲಿ ವಿಜೃಂಭಿಸುವಂತಾಗಬೇಕು: ತಹಸೀಲ್ದಾರ್ ಪ್ರದೀಪ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕನ್ನಡ ವಿಶ್ವಮಟ್ಟದಲ್ಲಿ ವಿಜೃಂಭಿಸುವಂತಾಗಬೇಕು: ತಹಸೀಲ್ದಾರ್ ಪ್ರದೀಪ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸಾಗರ | ಐವರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

July 31, 2025

ಸಮಾಜಮುಖಿ ಪತ್ರಿಕೋದ್ಯಮ ಕಣ್ಮರೆ: ಹಿರಿಯ ಪತ್ರಕರ್ತ ತ್ಯಾಗರಾಜ್ ವಿಷಾದ

July 31, 2025
Representational Image

ಸಮಾಜಮುಖಿ ಕೆಲಸಗಳು ವ್ಯಕ್ತಿಯ ಉದ್ಯಮವನ್ನು ಕೂಡ ಬೆಳೆಸುತ್ತದೆ: ಈಶ್ವರಪ್ಪ

July 31, 2025

ಉದಯ ರತ್ನಕುಮಾರ ರವರಿಗೆ ಗೌರವ ಡಾಕ್ಟರೇಟ್ ಪ್ರದಾನ

July 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸಾಗರ | ಐವರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

July 31, 2025

ಸಮಾಜಮುಖಿ ಪತ್ರಿಕೋದ್ಯಮ ಕಣ್ಮರೆ: ಹಿರಿಯ ಪತ್ರಕರ್ತ ತ್ಯಾಗರಾಜ್ ವಿಷಾದ

July 31, 2025
Representational Image

ಸಮಾಜಮುಖಿ ಕೆಲಸಗಳು ವ್ಯಕ್ತಿಯ ಉದ್ಯಮವನ್ನು ಕೂಡ ಬೆಳೆಸುತ್ತದೆ: ಈಶ್ವರಪ್ಪ

July 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!