No Result
View All Result
Surprise Inspection for Enhanced Passenger Safety
English Articles

Surprise Inspection for Enhanced Passenger Safety

by ಕಲ್ಪ ನ್ಯೂಸ್
June 27, 2026
0

Kalpa Media House  |  Mysuru | As per the instructions of the Railway Board, the Divisional Railway Manager (DRM), Mysuru...

Read moreDetails
Henkel appoints Pradhyumna Ingle as Country President for India

Henkel appoints Pradhyumna Ingle as Country President for India

June 26, 2026
66% of Indians Face Health & Wellness Scams: McAfee Report Raises Alarm

66% of Indians Face Health & Wellness Scams: McAfee Report Raises Alarm

June 25, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
  • Advertise With Us
  • Grievances
  • About Us
  • Contact Us
Saturday, June 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ವೇ.ಬ್ರ. ವಿನಾಯಕ ಬಾಯರಿ ಅವರನ್ನು ತನ್ನ ಕುಟುಂಬದ ಸದಸ್ಯನಂತೆ ಕಂಡಿದ್ದೆ | ಕೆ.ಎಸ್. ಈಶ್ವರಪ್ಪ

ವೇ.ಬ್ರ. ವಿನಾಯಕ ಬಾಯರಿ ಅವರಿಗೆ ನುಡಿನಮನ, ಶ್ರದ್ಧಾಂಜಲಿ ಕಾರ್ಯಕ್ರಮ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 14, 2025
in ಶಿವಮೊಗ್ಗ
0
ಅ.ಪ. ರಾಮಭಟ್ಟರ ಹೆಸರಿನಲ್ಲಿ ಟ್ರಸ್ಟ್ ರೂಪಿಸಲು ಚಿಂತನೆ: ಶಾಸಕ ಈಶ್ವರಪ್ಪ

Representational Image

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ವೇ.ಬ್ರ. ವಿನಾಯಕ ಬಾಯರಿ ಅವರನ್ನು ನನ್ನ ಕುಟುಂಬದ ಸದಸ್ಯನಂತೆ ಕಂಡಿದ್ದೆ. ಅವರ ಕುಟುಂಬಕ್ಕೆ ಶ್ರೀ ಶನೈಶ್ಚರ ದೇವಾಲಯ ಸಮಿತಿಯಿಂದ 10ಲಕ್ಷ ರೂ.ನ ಚೆಕ್ ವಿತರಿಸಿದರು. ಬಾಯರಿ ಅವರ ಹಿರಿಯ ಪುತ್ರಿಗೆ ಪೈಲೆಟ್ (ವಿಮಾನ ಚಾಲಕಿ) ಆಗುವ ಆಶಾಭಾವನೆ ಇದೆ. ಎರಡನೇ ಪುತ್ರಿಗೆ ಪಿಎಚ್.ಡಿ. ಮಾಡುವ ಆಸೆ ಇಟ್ಟುಕೊಂಡಿದ್ದಾಳೆ. ಅದನ್ನೂ ಈಡೇರಿಸುವ ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಲ್ಲದೆ, ಬಾಯರಿ ಪತ್ನಿಗೆ ಸಧ್ಯದಲ್ಲೇ ಸಿ.ಬಿ.ಎಸ್.ಸಿ.ಶಾಲೆ ಆರಂಭಿಸಲಿದ್ದೇವೆ. ಅಲ್ಲಿ ಅವರಿಗೆ ಜೀವನೋಪಾಯಕ್ಕೆ ನೌಕರಿ ಕೊಡುವುದಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದರು.

ಅವರು ಇಂದು ಶುಭಮಂಗಳ ಸಮುದಾಯ ಭವನದಲ್ಲಿ ಶ್ರೀ ಶನೈಶ್ಚರ ದೇವಾಲಯದ ಸೇವಾ ಸಮಿತಿ ಟ್ರಸ್ಟ್, ಭಕ್ತ ವೃಂದ, ಅರ್ಚಕ ವೃಂದ, ಶ್ರೀಗಂಧ ಸಂಸ್ಥೆ, ಭಜನಾ ಪರಿಷತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವೇ.ಬ್ರ. ವಿನಾಯಕ ಬಾಯರಿ ಅವರಿಗೆ ಹಮ್ಮಿಕೊಂಡ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ ಭಾಗ್ವತ್ ಮಾತನಾಡಿ, ವಿನಾಯಕ ಬಾಯರಿ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದವರು. ನಾನು ಅಸ್ಪತ್ರಯಲ್ಲಿದ್ದಾಗ ಮೃತ್ಯುಂಜಯ ಜಪ ಹೋಮ ಮಾಡಿ ನನಗೆ ಮೃತ್ಯುವಿನ ಭಯ ಹೋಗಲಾಡಿಸಿದರು. ತಾವೇ ಮೃತ್ಯು ಧಾರಣೆ ಮಾಡಿದರು ಅ.ಪ.ರಾಮ ಭಟ್ಟರ ಮರಣದಿಂದ ಶೂನ್ಯ ಆವರಿಸಿತ್ತು. ಅದನ್ನು ತುಂಬುವ ಗುಣ ಹೊಂದಿದ್ದರು. ಶಿವಮೊಗ್ಗವನ್ನು ಕಲೆ-ಸಂಸ್ಕøತಿಯ ಕೇಂದ್ರವಾಗಲು ಪ್ರಯತ್ನಿಸಿದ್ದರು ಎಂದರು.

Also read: ಭೀಕರ ಅಪಘಾತ | ಲಾರಿ ಚಕ್ರಕ್ಕೆ ಸಿಲುಕಿ ಮಹಿಳೆ ಸಾವು

ಸಂಸ್ಕೃತ ವಿದ್ವಾಂಸ ಡಾ.ಸನತ್ ಕುಮಾರ್ ಮಾತನಾಡಿ, ವಿನಾಯಕ ಬಾಯರಿ ಅವರು ಆದರ್ಶ ವ್ಯಕ್ತಿಯಾಗಿ, ಇತರರಿಗೆ ಮಾದರಿಯಾಗಿ, ಬದುಕಿದ್ದರು. ಮೃತರಿಗೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಿದರಲ್ಲದೆ ಬಾಯರಿ ಅವರ ಮಕ್ಕಳ ಶಿಕ್ಷಣವನ್ನು ಸಮಾಜ ನೋಡಿಕೊಳ್ಳಬೇಕು ಎಂದರು.

ವೇ.ಬ್ರ.ಅಚ್ಚುತ ಅವಧಾನಿ, ವಿಧಿಯಾಟದ ಮುಂದೆ ಏನೂ ನಡೆಯುವುದಿಲ್ಲ. ಭಾರತೀಯ ಪರಂಪರೆ ಭೋಗಕ್ಕಲ್ಲ. ಲೋಕೋಪಕಾರ ಮಾಡುವುದಕ್ಕೆ ಎಂಬುದನ್ನು ಬಾಯರಿ ತೋರಿಸಿಕೊಟ್ಟಿದ್ದಾರೆ. ಅವರು ಮಾಡಿದ ಎಲ್ಲ ಕಾರ್ಯ ಯಜ್ಞದಂತಾಗಿದೆ. ಅವರದ್ದು ಋಷಿ ಸದೃಶ ಜೀವನ. ಶುಭಾ ರಾಘವೇಂದ್ರ ಮಾತನಾಡಿ, ಬಾಯರಿಯವರದ್ದು ಶಿಸ್ತು‍ಬದ್ಧ, ಗೊಂದಲವಿಲ್ಲದ, ಸಮಾಧಾನಚಿತ್ತದ ವ್ಯಕ್ತಿತ್ವವಾಗಿತ್ತು. ಅ.ಪ.ರಾಮಭಟ್ಟರ ಮರಣದಿಂದ ಅನಾಥವಾಗಿದ್ದ ಭಜನಾಪರಿಷತ್ತಿಗೆ ಜೀವ ತುಂಬಿದ್ದರು ಎಂದರು.

ವಿದ್ವಾನ್ ಜಿ.ಎಸ್. ನಟೇಶ್ , ಬಾಯರಿ ಅವರು ಜನಮಾನಸವನ್ನು ತಲುಪಿದ್ದರು. ಯಾವತ್ತೂ ದಕ್ಷಿಣೆ ಕೇಳಿದವರಲ್ಲ. ಕೋಪಗೊಂಡವರಲ್ಲ. ಹಿತವಾಗಿ ಮಾತನಾಡುವ, ಜೀವನ ತತ್ವವನ್ನು ಅರಿತವರು. ಈಗ ಬಾಯರಿ ಅವರ ಅಗಲುವಿಕೆಯಿಂದ ಶಿವಮೊಗ್ಗದ ಆಧ್ಯಾತ್ಮ ಸೌಧದ ಕಂಬಗಳು ಉದುರುತ್ತಿವೆ ಎಂದು ಹೇಳಿದರು.
ಅ.ನಾ. ವಿಜಯೇಂದ್ರ ಮಾತನಾಡಿ, ವಿನಾಯಕ ಬಾಯರಿ ವೃತ್ತಿಯಿಂದ ಪುರೋಹಿತರಾಗಿದ್ದರೂ ಪ್ರವೃತ್ತಿಯಿಂದ ಸಾಹಸಿಗರಾಗಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಬೈಕ್ ಸವಾರಿಯನ್ನು ಯಶಸ್ವಿಯಾಗಿ ಪೂರೈಸಿದ್ದರು ಎಂದರು.

ಡಾ.ಎಸ್. ಶ್ರೀಧರ್, ವೆಂಕಟೇಶ್ ರಾವ್, ಶ್ರೀರಂಜಿನಿ ದತ್ತಾತ್ರಿ, ಶಶಿಕಾಂತ್ ಕರಣಂ, ಸುಬ್ರಹ್ಮಣ್ಯ ಉಡುಪ, ಸಂದೇಶ ಉಪಾಧ್ಯ, ಸ.ನಾ. ಮೂರ್ತಿ ಮೊದಲಾದವರು ವಿನಾಯಕ ಬಾಯರಿ ಅವರ ಗುಣಗಾನ ಮಾಡಿದರು. ಕೊನೆಯಲ್ಲಿ ಬಾಯರಿ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ವಿ.ರಾಜು, , ಉಮೇಶ ಆರಾಧ್ಯ, , ಸಚ್ಚಿದಾನಂದ ಉಡುಪ, ಎನ್.ಶ್ರೀಧರ ಉಡುಪ, ಶಬರೀಶ ಕಣ್ಣನ್, ವಿನಯ ಶಿವಮೊಗ್ಗ ಮೊದಲಾದವರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/02/Kumadvati-College-Shikaripura-2025-Video.mp4
http://kalpa.news/wp-content/uploads/2024/04/VID-20240426-WA0008.mp4
Tags: K S EshwarappaKannada_NewsKannada_News_LiveKannada_News_Online ShivamoggaKannada_WebsiteKannadaNewsWebsiteLatestNewsKannadaLocalNewsMalnadNewsNews_in_KannadaNews_KannadaShimogaShivamoggaNewsಕೆ.ಎಸ್. ಈಶ್ವರಪ್ಪಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭೀಕರ ಅಪಘಾತ | ಲಾರಿ ಚಕ್ರಕ್ಕೆ ಸಿಲುಕಿ ಮಹಿಳೆ ಸಾವು

Next Post

ಶಾಂತವೇರಿ ಗೋಪಾಲಗೌಡರು ಎಲ್ಲಾ ರಾಜಕಾರಣಿಗಳಿಗೂ ಮಾದರಿ | ಪತ್ರಕರ್ತ ರವಿಕುಮಾರ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಾಂತವೇರಿ ಗೋಪಾಲಗೌಡರು ಎಲ್ಲಾ ರಾಜಕಾರಣಿಗಳಿಗೂ ಮಾದರಿ | ಪತ್ರಕರ್ತ ರವಿಕುಮಾರ್

ಶಾಂತವೇರಿ ಗೋಪಾಲಗೌಡರು ಎಲ್ಲಾ ರಾಜಕಾರಣಿಗಳಿಗೂ ಮಾದರಿ | ಪತ್ರಕರ್ತ ರವಿಕುಮಾರ್

Leave a Reply Cancel reply

Your email address will not be published. Required fields are marked *

No Result
View All Result
Surprise Inspection for Enhanced Passenger Safety
English Articles

Surprise Inspection for Enhanced Passenger Safety

by ಕಲ್ಪ ನ್ಯೂಸ್
June 27, 2026
0

Kalpa Media House  |  Mysuru | As per the instructions of the Railway Board, the Divisional Railway Manager (DRM), Mysuru...

Read moreDetails
Henkel appoints Pradhyumna Ingle as Country President for India

Henkel appoints Pradhyumna Ingle as Country President for India

June 26, 2026
66% of Indians Face Health & Wellness Scams: McAfee Report Raises Alarm

66% of Indians Face Health & Wellness Scams: McAfee Report Raises Alarm

June 25, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL