ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ದುರ್ಗಿಗುಡಿಯ ರತ್ನಮ್ಮ ಮಾಧವರಾವ್ ರಸ್ತೆಯಲ್ಲಿರುವ ಹೆಚ್ಎಮ್ ಸರ್ವಿಸ್ ಸ್ಟೇಷನ್ ಆವರಣದಲ್ಲಿ ರೈತ ಮಹಾ ಪಂಚಾಯತ್ ಕಚೇರಿಯ ಉದ್ಘಾಟನೆಯನ್ನು ರೈತ ನಾಯಕರಾದ ಹೆಚ್.ಆರ್. ಬಸವರಾಜಪ್ಪ ಮತ್ತು ಕೆ.ಟಿ. ಗಂಗಾಧರ್ ನೆರವೇರಿಸಿದರು.
ಜಿಲ್ಲೆಯ ಶಿಕಾರಿಪುರ-ಸೊರಬದಲ್ಲಿ ಈಗಾಗಲೇ ಕಛೇರಿ ಉದ್ಘಾಟನೆಯಾಗಿದ್ದು, ಇದು ಮೂರನೇ ಕಛೇರಿಯಾಗಿದೆ. ಮಾ.20ರ ಶನಿವಾರ ಸಂಜೆ 4 ಗಂಟೆಗೆ ನಗರದ ಸೈನ್ಸ್ ಮೈದಾನದಲ್ಲಿ ದೆಹಲಿಯ ಹೋರಾಟನಿರತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರು ನಗರಕ್ಕೆ ಆಗಮಿಸಲಿದ್ದು, ರೈತ ಮಹಾಪಂಚಾಯತ್ ಸಮಾವೇಶಕ್ಕೆ ಪೂರ್ವಭಾವಿಯಾಗಿ ಇಂದು ನೂತನ ಕಛೇರಿಯಲ್ಲಿ ವಿವಿಧ ಸಂಘಟನೆಗಳು ನಾಯಕರು ಸೇರಿ ಕಾರ್ಯಕ್ರಮಕ್ಕೆ ರೂಪುರೇಷೆಯನ್ನು ಸಿದ್ಧಪಡಿಸಿದರು.
ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ನಡೆಯುತ್ತಿರುವ ರೈತ ಚಳವಳಿಗೆ ಬೆಂಬಲವಾಗಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಈ ಸಮಾವೇಶ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಪ್ರಮುಖರಾದ ಶ್ರೀಪಾಲ್, ಕೆ.ಎಲ್.ಅಶೋಕ್, ಎನ್.ರಮೇಶ್, ಡಿಎಸ್ಎಸ್ನ ಗುರುಮೂರ್ತಿ, ಹಾಲೇಶಪ್ಪ, ಹೆಚ್.ಸಿ.ಯೋಗೀಶ್, ಪಾಲಾಕ್ಷಿ, ವೀರೇಶ್, ಚಂದ್ರಶೇಖರ್ ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post