ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಮಾನದಿಂದ ಹಾರುವ ತರಬೇತಿ ವೇಳೆಯಲ್ಲಿ ಪ್ಯಾರಾಚೂಟ್ #Parachute ತೆರೆಯದೇ ಆಕಾಶದಿಂದ ಕೆಳಕ್ಕೆ ಬಿದ್ದ ವೀರಸ್ವರ್ಗ ಸೇರಿದ ವಾಯುಪಡೆ ಅಧಿಕಾರಿ ಜಿ.ಎಸ್. ಮಂಜುನಾಥ್ #GSManjunath ಅವರಿಗೆ ಶಿವಮೊಗ್ಗದಲ್ಲಿ #Shivamogga ಭಾವಪೂರ್ಣ ಅಂತಿಮ ನಮನ ಸಲ್ಲಿಸಲಾಯಿತು.
ಹುತಾತ್ಮರಾದ #Martyr ಮಂಜುನಾಥ್ ಅವರ ಪಾರ್ಥಿವ ಶರೀರವನ್ನು ಇಂದು ಶಿವಮೊಗ್ಗಕ್ಕೆ ತಂದಿದ್ದು, ಹೊಳೆಬಸ್ ನಿಲ್ದಾಣದ ಬಳಿಯಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.
Also Read>> Invest Karnataka 2025 to feature 19 Country Partners and 9 dedicated pavilions: M.B. Patil

ಬಾರತೀಯ ವಾಯಪಡೆಯಲ್ಲಿ ವಾರಂಟ್ ಆಫೀಸರ್ ಆಗಿದ್ದ ಜಿ.ಎಸ್.ಮಂಜುನಾಥ್ ಅವರ ಪಾರ್ಥೀವ ಶರೀರವನ್ನು ಸೇನಾ ವಾಹನದಲ್ಲಿ ತರಲಾಗಿದೆ. ವಾಯುಪಡೆಯ ಅಧಿಕಾರಿಗಳು, ಅವರ ಕುಟುಂಬ ಸದಸ್ಯರು ಜೊತೆಗಿದ್ದರು. ಪಾರ್ಥೀವ ಶರೀರವನ್ನು ಹೊತ್ತ ವಾಹನ ಈಗ ಹೊಸನಗರಕ್ಕೆ ತೆರಳಿದೆ.
ಸಮವಸ್ತ್ರ ಅಪ್ಪಿ ಪತ್ನಿ ಕಣ್ಣೀರು
ಇನ್ನು, ಹೊಳೆಬಸ್ ನಿಲ್ದಾಣದ ಬಳಿಯಲ್ಲಿ ಪತ್ನಿಯ ಶವ ಆಗಮಿಸುತ್ತಿದ್ದಂತೆಯೇ ಮಂಜುನಾಥ್ ಪತ್ನಿ ಕಲ್ಪಿತಾ ಅವರ ದುಃಖದ ಕಟ್ಟೆ ಒಡೆಯಿತು.
ತಮ್ಮ ಪತಿಯ ಸೇನಾ ಸಮವಸ್ತ್ರ ಅಪ್ಪಿಕೊಂಡು ಕಣ್ಣೀರು ಹಾಕಿದ ದೃಶ್ಯ ಕಲ್ಲನ್ನೂ ಕರಗಿಸುವಂತಿತ್ತು. ಜೊತೆಯಲ್ಲಿದ್ದ ಮುಖಂಡರು ಹಾಗೂ ಸಾರ್ವಜನಿಕರು ಇದನ್ನು ಕಂಡೂ ಅವರೂ ಸಹ ಕಣ್ಣೀರು ಹಾಕಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post