ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀಕೃಷ್ಣ ಜನ್ಮಾಷ್ಟಮಿ Krishna Janmashtami ಅಂಗವಾಗಿ ನಗರದ ಜೈನ್ ಪಬ್ಲಿಕ್ ಶಾಲೆಯಲ್ಲಿ Jain Public School ಆಯೋಜಿಸಲಾಗಿದ್ದ ವಿವಿಧ ಸಾಂಸ್ಕ್ರುತಿಕ ಕಾರ್ಯಕ್ರಮ ಹಾಗೂ ಸ್ಪರ್ಧೆಗಳು ಯಶಸ್ವಿಯಾಯಿತು.
ನರ್ಸರಿ, ಎಲ್’ಕೆಜಿ, ಯುಕೆಜಿ ಮಕ್ಕಳಿಗೆ ಶ್ರೀಕೃಷ್ಣ, ರಾಧ ಹಾಗೂ ಯಶೋಧ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಮುದ್ದು ಶ್ರೀಕೃಷ್ಣನ ಅಲಂಕಾರದಲ್ಲಿ ಸಾಕ್ಷಾತ್ ಶ್ರೀಕೃಷ್ಣ-ರಾಧೆ ಅಲಂಕಾರದಲ್ಲಿ ಕಂಗೊಳಿಸಿದ ಮಕ್ಕಳು ಹಾಗೂ ಯಶೋಧ ವೇಷದಲ್ಲಿ ಮಕ್ಕಳ ತಾಯಂದಿರು ಸ್ಪರ್ಧೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಹಲವು ಪೋಷಕರು ಶ್ರೀಕೃಷ್ಣನ ಶ್ಲೋಕ ಹೇಳಿ ನರ್ತನ ಮಾಡಿ ಸಂಭ್ರಮಿಸಿದರು.
ಶಾಲೆಯ ಸಂಯೋಜಕಿ ದಿವ್ಯಾ ಶೆಟ್ಟಿ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆ ಮಹಾಭಾರತ ಯುದ್ದದ ವೇಳೆ ಶ್ರೀಕೃಷ್ಣ ಉಪದೇಶ ಮಾಡಿದ ಭಗವದ್ಗೀತೆ ಸಾರ ಹಾಗೂ ಸಂದೇಶ ಇಂದಿಗೂ ಮಾತ್ರವಲ್ಲ ಸರ್ವಥಾ ಪ್ರಸ್ತುತ ಎಂದರು.
ನ್ಯಾಯ ಹಾಗೂ ಧರ್ಮದ ವಿಚಾರ ಬಂದಾಗ ಎಲ್ಲ ಮೋಹ ಹಾಗೂ ಸಂಬಂಧಗಳು ನಗಣ್ಯ ಆಗಬೇಕು ಎನ್ನುವ ವಿಚಾರ ಜೀವನ ಅಂದರೆ ಏನು ಎಂಬುದನ್ನು ಸಾರಿ ಸಾರಿ ಹೇಳುತ್ತದೆ. ಇದನ್ನು ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಕಲಿಸಬೇಕು ಎಂದರು.
ಪ್ರಾಂಶುಪಾಲರಾದ ಪ್ರಿಯದರ್ಶಿನಿ ಮಾತನಾಡಿ, ಶ್ರೀಕೃಷ್ಣನ ಜೀವನವೇ ಒಂದು ಸಂದೇಶವಾಗಿದೆ. ಇದನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಬದುಕು ಸಂತಸ ಹಾಗೂ ನೆಮ್ಮದಿಯಿಂದ ಕೂಡಿರುತ್ತದೆ ಎಂದರು.
ಬೆಳಗ್ಗೆ ಎದ್ದಾಗ, ದಿನಕ್ಕೆ ಒಂದು ದಿನ ಮಕ್ಕಳೊಂದಿಗೆ ಊಟ ಮಾಡುವುದು, ರಾತ್ರಿ ಮಕ್ಕಳನ್ನು ನಿಮ್ಮೊಂದಿಗೆ ಮಲಗಿಸಿಕೊಂಡು ಮೌಲ್ಯಾಧಾರಿತ ಕಥೆಗಳನ್ನು ಹೇಳಿಕೊಡಿ ಎಂದರು.
ಮೊಸರು ಕೂಡಿಕೆಯಂತೆ ಕುಡಿಕೆಯಲ್ಲಿ ಚಾಕೊಲೇಟ್ ಹಾಕಿ ಸಣ್ಣ ಮಕ್ಕಳಿಂದ ಅದನ್ನು ಒಡೆಸಿ, ಮಕ್ಕಳಿಗೆ ನೀಡಲಾಯಿತು.
ಶಾಲೆಯ ಸಿಇಒ ಸುಮಂತ್, ಸೌಲಭ್ಯ ವ್ಯವಸ್ತಾಪಕ ವಿಜಯ ಕುಮಾರ್, ಶಿಕ್ಷಕರು ಹಾಗೂ ಸಿಬ್ಬಂದಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post