ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೋಗ ಅಭಿವೃದ್ಧಿ ಮಾಜಿ ಮುಖ್ಯಮಂತ್ರಿ ಬಿಎಸ್ವೈ #BSY ಕನಸ್ಸಾಗಿದ್ದು, ಅವರು ಮುಖ್ಯಮಂತ್ರಿಗಳಾಗಿದ್ದಾಗ, ಜೋಗದ ಪ್ರವಾಸೋದ್ಯಮ ಅಭಿವೃದ್ಧಿ 160 ಕೋಟಿ ರೂ. ಯೋಜನೆ ರೂಪಿಸಿ, 80 ಕೋಟಿ ರೂ. ಬಿಡುಗಡೆ ಮಾಡಿದ್ದರು. ಆದರೆ ಈಗ ಹೋಗಿ ಈ ಸರ್ಕಾರದ ನಾಯಕರು ಕೂಲಿಂಗ್ ಗ್ಲಾಸ್ಹಾಕಿ, ಫೋಸ್ ಕೊಡುವುದು ಬೇಡ ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಟಾಂಗ್ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮಕ್ಕೆ ಸಿದ್ಧರಾಮಯ್ಯ #Siddaramaiah ಸರ್ಕಾರ ಬಜೆಟ್ನಲ್ಲಿ ಮೀಸಲಿಟ್ಟದ್ದು ಕೇವಲ 50 ಕೋಟಿ. ಈಗ ಜೋಗದಲ್ಲಿ ಕೆಲಸ ನಿಧಾನಗತಿಯಲ್ಲಿ ಸಾಗಿದ್ದು, ಸ್ವಲ್ಪಸ್ವಲ್ಪ ಹಣವನ್ನು ಅಭಿವೃದ್ಧಿ ನೀಡುತ್ತಿದ್ದಾರೆ ಅಂದ ಮಾತ್ರಕ್ಕೆ ಎಲ್ಲವನ್ನು ಈಗಿನ ಸರ್ಕಾರ ಮಾಡಿದೆ ಅಂದಲ್ಲ, ಜೋಗ ಸುತ್ತಮುತ್ತಲಿನ 10 ಕಿ.ಮೀಟರ್ ಬಫರ್ ಜೋನ್ ವ್ಯಾಪ್ತಿಗೆ ಬರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಕೇಂದ್ರದ ಜೊತೆಗೆ ಹಲವಾರು ಬಾರಿ ಚರ್ಚೆ ನಡೆಸಿ, ಇದನ್ನು 1 ಕಿ.ಮೀ. ವ್ಯಾಪ್ತಿಗೆ ಇಳಿಸಿದ್ದರಿಂದ ಈಗ ಅಭಿವೃದ್ಧಿ ಕಾರ್ಯಗಳು ಮುಂದುವರೆದಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಲಾಭವಾಗಲಿದೆ. ಜೋಗ ಅಭಿವೃದ್ಧಿ ಮತ್ತು ಶರಾವತಿ ಸೇತುವೆ ಎರಡೂ ಕೂಡ ಬಿಎಸ್ವೈ ಆಶೀರ್ವಾದ ಮತ್ತು ಕೇಂದ್ರ ಸರ್ಕಾರದ ಸಹಯೋಗ ಎಂದರು.
ಭದ್ರಾವತಿಯಿಂದ ಚಿಕ್ಕಜಾಜೂರು ರೈಲ್ವೆ ಮಾರ್ಗದ ಸರ್ವೆಗೆ ಈಗಾಗಲೇ 1.80 ಕೋಟಿ ಬಿಡುಗಡೆಯಾಗಿದೆ. ಈ ರೈಲುಮಾರ್ಗ ಪೂರ್ಣಗೊಂಡರೆ, ಮಧ್ಯೆ ಕರ್ನಾಟಕ ಭಾಗದ ಜನರಿಗೆ ಸಂಪರ್ಕಕ್ಕೆ ಅನುಕೂಲವಾಗಲಿದೆ. ಕೇಂದ್ರ ಸಚಿವ ಕುಮಾರಸ್ವಾಮಿಯವರು ಕೂಡ ಈ ಬಗ್ಗೆ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದಾರೆ. ಶರಾವತಿ ಸಂತ್ರಸ್ಥರ ವಿಚಾರದಲ್ಲಿ ಯಾವುದೇ ರಾಜಕಾರಣ ಬೇಡ. ಹಿಂದೆ ಪಕ್ಷಾತೀತವಾಗಿ ಶಾಸಕ ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ಹಾಗೂ ಅಡಿಕೆ ಬೆಳೆಗಾರರ ಪ್ರಮುಖ ನಿಯೋಗ ಕರೆದುಕೊಂಡು ಹೋಗಿ, ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ವಿಶೇಷ ಸಭೆ ಮಾಡಲಾಗಿತ್ತು. ಈ ಬಗ್ಗೆ ಚರ್ಚೆಕೂಡ ವಿಸ್ತಾರವಾಗಿ ನಡೆದ ಪರಿಣಾಮ ಕೇಂದ್ರದ ಸಾಲಿಟರಿ ಜನರಲ್ ಕೂಡ ಸ್ಪಂದಿಸಿದ್ದರು. ರೈತರ ಬಗ್ಗೆ ಸುಪ್ರಿಂಕೋರ್ಟ್ ಕೂಡ ಒಲವು ತೋರಿಸಿ, ರಾಜ್ಯ ಸರ್ಕಾರಕ್ಕೆ ಸರಿಯಾದ ದಾಖಲೆಗಳನ್ನು ಒದಗಿಸುವಂತೆ ಅವಕಾಶ ನೀಡಿತ್ತು. ಬಗರ್ ಹುಕುಂ ಮತ್ತು ಹಲವಾರು ವರ್ಷಗಳಿಂದ ಸಾಗುವಳಿ ನಡೆಸುತ್ತಿರುವ ರೈತರನ್ನು ಗುರುತಿಸಿ, ಸರಿಯಾದ ಮಾಹಿತಿ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಆದರೆ ಈ ಕೆಲಸದಲ್ಲಿ ರಾಜಕಾರಣವಾಗುತ್ತಿದೆ. ರೈತರ ಪಟ್ಟಿಯನ್ನು ದೋಷಪೂರಿತವಾಗಿ ಮಾಡುತ್ತಿದ್ದಾರೆ. ಸಂತ್ರಸ್ಥರನ್ನು ಸರಿಯಾಗಿ ಗುರುತಿಸುವ ಕೆಲಸವಾಗಬೇಕು. 9,550 ಎಕರೆ ಭೂಮಿಯನ್ನು ಡಿನೋಟೀಫಿಕೇಷನ್ ಮಾಡಿರುವ ಬಗ್ಗೆ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿ, ಅದು ಕ್ಲಿಯರ್ ಆದರೆ ಅದನ್ನು ಮಾದರಿಯಾಗಿರಿಸಿ ಮತ್ತೆ ಇನ್ನಷ್ಟು ಭೂಮಿಯನ್ನು ಪಡೆಯಲು ಅವಕಾಶವಿರುತ್ತದೆ ಎಂದರು.
ಆಪರೇಷನ್ ಸಿಂಧೂರದ ಮುಖಾಂತರ ನಮ್ಮ ವೀರ ಸೈನಿಕರು ಮತ್ತು ಮೋದಿ ಸರ್ಕಾರ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿದೆ. ಅದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ಈಗಾಗಲೇ ಬಿಜೆಪಿ ತಿರಂಗಾಯಾತ್ರೆ ಆರಂಭಿಸಿದ್ದು, ಶಿವಮೊಗ್ಗದಲ್ಲಿ ಮೇ20ರಂದು ಬೆಳಿಗ್ಗೆ 10-30ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಗೋಪಿ ವೃತ್ತದವರೆಗೆ ತಿರಂಗಾಯಾತ್ರೆ ನಡೆಯಲಿದ್ದು, ಬಹಿರಂಗ ಸಭೆ ಕೂಡಾ ಆಯೋಜಿಸಲಾಗಿದೆ. ನಿವೃತ್ತ ಸೈನಿಕರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸೈನಿಕರು ಮತ್ತು ಮೋದಿ ಸರ್ಕಾರದ ಮೇಲಿನ ಟೀಕೆಗಳು ಸರಿಯಲ್ಲ, ಹಿಂದಿನ ಸರ್ಕಾರ ಮಾಡಿದ ತಪ್ಪುಗಳನ್ನು ಸರಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮುಳ್ಳಿನ ಮೇಲೆ ಬಿದ್ದ ಬಟ್ಟೆಯನ್ನು ಎಚ್ಚರಿಕೆಯಿಂದ ತೆಗೆಯುವಂತೆ ಜಾಗ್ರತೆಯಿಂದ ಕೇಂದ್ರ ಸರ್ಕಾರ ವರ್ತಿಸುತ್ತಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post