ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತ್ತೀಚಿಗೆ ನಗರದ ವಾರ್ಡ್ ನಂ.7 ರ ಆದರ್ಶ ಕಾಲೋನಿಯಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದಂತಹ ಲಕ್ಷ್ಮಿ ಮತ್ತು ಯುವ ಮುಖಂಡ ಕೆ.ಈ. ಕಾಂತೇಶ್ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಸ್ಥಳದಲ್ಲಿ ಹಾಜರಿದ್ದ ಆದರ್ಶ ಕಾಲೋನಿಯ ಮಳೆಹಾನಿಗೊಳಗಾದ ನಿವಾಸಿಗಳ ಸಮಸ್ಯೆಗಳನ್ನು ವಿಚಾರಿಸಿದರು.
ಇಲ್ಲಿ ರಾಜಕಾಲುವೆ ಮತ್ತು 3 ಚರಂಡಿಗಳು ಸಂಪೂರ್ಣ ಮಳೆ ನೀರಿನಿಂದ ಉಕ್ಕಿ ಹರಿದು, ಸುಮಾರು 25-30 ಮನೆಗಳ ಒಳಗೆ 5-6 ಅಡಿ ಮಳೆ ನೀರು ನುಗ್ಗಿ ಹಾನಿಗೊಳಗಾದ ಬಗ್ಗೆ ವಿಚಾರಿಸಿ ತಿಳಿದುಕೊಂಡರು.
ಆದರ್ಶ ಕಾಲೋನಿ ನಿವಾಸಿಗಳಿಗೆ ಪ್ರತಿ ವರ್ಷ ಅತಿಯಾದ ಮಳೆಯಿಂದ ಹಾನಿ ಸಂಬಂವಿಸುತ್ತಿತ್ತು, ಕೂಡಲೇ ಆದರ್ಶ ಕಾಲೋನಿಯ 2 ಡೆತ್ ಸ್ಟ್ರಾಬ್ ಗಳನ್ನ ಕನಿಷ್ಠ 2 1/2 ಅಡಿ ಎತ್ತರಕ್ಕೆ ಎರಿಸಿ ನಮಸ್ಯೆಯನ್ನು ಬಗೆಹರಿಸಲು ಕಾಂತೇಶ್ ರವರು ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದಂತಹ ಲಕ್ಷ್ಮಿ ಅವರನ್ನು ಕೋರಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ಕಲ್ಲೂರು ಮೇಘರಾಜ, ಕೆ ನಾಗರಾಜ, ಜಯಮ್ಮ, ಲತಾ, ಮತಿ ರಶ್ಮಿ, ಪೂವಯ್ಯ ಮುಂತಾದವರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















