ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಘವೇಂದ್ರ ಅವರ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಯುವ ಪ್ರತಿಭೆ ಪ್ರಸನ್ನ ಭಟ್ ರವರು ವಿಧಿವಶರಾಗಿದ್ದು, ಇವರ ಪಾರ್ಥಿವ ಶರೀರ ಇಂದು ಮಧ್ಯಾಹ್ನ 3:30ಕ್ಕೆ ಆಗಮಿಸುತ್ತಿದ್ದು, ಶಿವಮೊಗ್ಗದ ಭಾರತೀಯ ಜನತಾ ಪಕ್ಷ ಕಾರ್ಯಾಲಯದಲ್ಲಿ ಸ್ವಲ್ಪಕಾಲ ಅಂತಿಮ ದರ್ಶನ ಆಯೋಜಿಸಲಾಗಿದೆ.
ನಂತರ ಸುಮಾರು 5 ಗಂಟೆಗೆ ಹೊಸನಗರ ತಲುಪುವ ಸಾಧ್ಯತೆ ಇದ್ದು, ಕೊಡಚಾದ್ರಿ ಕಾಲೇಜು ಮುಂಭಾಗ ಸೇರಿ ಅಲ್ಲಿಂದ ಪ್ರಸನ್ನ ಭಟ್ ಅವರ ಮನೆಯವರೆಗೆ ಅಂತಿಮ ಯಾತ್ರೆಯ ಮೆರವಣಿಗೆಯಲ್ಲಿ ತರಲಾಗುವುದು. ಪಕ್ಷದ ಎಲ್ಲಾ ಕಾರ್ಯಕರ್ತರು, ಸ್ನೇಹಿತರು ಹಿತೈಷಿಗಳು ಹೊಸನಗರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಮನವಿ ಮಾಡಲಾಗಿದೆ.
Also read: ಸಿದ್ಧಾಂತದ ಗಣಿ ಸಿದ್ಧೇಶ್ವರ ಸ್ವಾಮಿಗಳು ಗುಣಮುಖರಾಗಿ, ಮಾರ್ಗದರ್ಶನ ಮಾಡಲಿ: ಈಶ್ವರಪ್ಪ ಪ್ರಾರ್ಥನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post