ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರವೀಂದ್ರ ನಗರ ಶ್ರೀ ಪ್ರಸನ್ನಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಸಾಮ ಸಂಹಿತಾಯಾಗ, ಚತುರ್ವೇದ ಪಾರಾಯಣ, ಶ್ರೀ ಪ್ರಸನ್ನ ಗಣಪತಿ ಅನುಗ್ರಹ ಪ್ರಶಸ್ತಿ, ನಿತ್ಯ ಭಜನೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ದೇವಸ್ಥಾನ ದತ್ತಿಯ ಅಧ್ಯಕ್ಷ ಎಸ್.ಪಿ. ಶೇಷಾದ್ರಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಕಗ್ಗ ಖ್ಯಾತಿಯ ವಿದ್ವಾನ್ ಜಿ.ಎಸ್.ನಟೇಶ್, ಯಕ್ಷಗಾನ ಗುರುಗಳಾದ ಐನಬೈಲ್ ಪರಮೇಶ್ವರ ಹೆಗಡೆ ಹಾಗೂ ಉದ್ಯಮಿಗಳಾದ ಅಚ್ಯುತ ರಾವ್ ಹೆಬ್ಬಾರ್ ಉಪಸ್ಥಿತರಿದ್ದರು.
ವೇದಘೋಷವನ್ನು ವೇದಮೂರ್ತಿ ಕಾರ್ತಿಕ ಉಡುಪ ನೆರವೇರಿಸಿದರು. ಸುಮಂಗಲ ಪ್ರಾರ್ಥಿಸಿ, ವೇದಮೂರ್ತಿ ಸುದರ್ಶನ ಭಟ್ ಪ್ರಾಸ್ತಾವಿಸಿದರು. ಅಚ್ಯುತ ಹೆಬ್ಬಾರ್ ವಂದಿಸಿ, ಶಬರೀಶ್ ಕಣ್ಣನ್ ನಿರೂಪಿಸಿದರು.
Also read: ಶಿಕ್ಷಣದ ಜೊತೆಗೆ ನಾಯಕತ್ವದ ಗುಣ ಬೆಳೆಸಿಕೊಳ್ಳಿ: ನ್ಯಾ. ಸದಾನಂದ ಸಾಲ್ಯಾನ್ ಬೈಲೂರು
ನಂತರ ಶಿವಮೊಗ್ಗ ಯಕ್ಷಕೂಟ ಪುರುಷರ ತಂಡದ ವತಿಯಿಂದ ಯಕ್ಷಗಾನ ತಾಳಮದ್ದಳೆ ಕರ್ಣಾರ್ಜುನ ಪ್ರಸಂಗವನ್ನು ಪ್ರದರ್ಶಿಸಲಾಯಿತು. ದೇವಾಲಯದ ಅರ್ಚಕ ಶ್ರೀ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post