ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದ ಸ್ವಾತಂತ್ರ ಹೋರಾಟದಲ್ಲಿ ಮೊದಲ ಬಾರಿಗೆ ಸ್ವುಯಂ ಸ್ವಾತಂತ್ರ ಘೋಷಣೆ ಮಾಡಿಕೊಂಡ ಜಿಲ್ಲೆಯ ಈಸೂರು ಜನರ ಹೋರಾಟ, ತ್ಯಾಗ ಹಾಗೂ ಧೈರ್ಯ ಯುವಕರಿಗೆ ಮಾದರಿಯಾಗಿರಬೇಕು ಎಂದು ನಿವೃತ್ತ ಡಿವೈಎಸ್’ಪಿ ಮಂಜಪ್ಪ ಅಭಿಪ್ರಾಯಪಟ್ಟರು.
ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲೂ 1942 ಆಗಸ್ಟ್ 9ರಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಗಾಂಧೀಜಿ ಘೋಷಣೆಗೆ ಗ್ರಾಮದ ಜನತೆ ಕಿವಿಗೊಟ್ಟು ಹೋರಾಟದ ಹಾದಿಯನ್ನು ಇಳಿದರು. 1942 ಸೆಪ್ಟೆಂಬರ್ 27ರಂದು ಈಸೂರು ಗ್ರಾಮದ ಜನತೆ ಈಸೂರು ಸ್ವಾತಂತ್ರö್ಯ ಗ್ರಾಮ ಬ್ರಿಟಿಷರಿಗೆ ಪ್ರವೇಶವಿಲ್ಲ ಎಂಬ ನಾಮ ಫಲಕವನ್ನು ಊರ ಪ್ರವೇಶದ್ವಾರಕ್ಕೆ ಹಾಕಿದ್ದರು ಎಂದು ನೆನಪಿಸಿದರು.
Also read: ದೇಶದ ಭವಿಷ್ಯ ಯುವ ಪೀಳಿಗೆ ಮೇಲೆ ಅವಲಂಭಿತ | ಡಾ. ಸಿದ್ಧಲಿಂಗಪ್ಪ ಅಭಿಮತ
ತಮ್ಮ ಗ್ರಾಮವನ್ನು ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ಗ್ರಾಮವೆಂದು ಘೋಷಿಸಿಕೊಂಡಿತು. ತಮ್ಮ ಗ್ರಾಮವನ್ನು ಸ್ವಾತಂತ್ರ್ಯ ಗ್ರಾಮ ಎಂದು ಘೋಷಿಸಿಕೊಂಡ ಪ್ರಥಮ ಗ್ರಾಮ ಈಸೂರು ಆಯಿತು. ಗ್ರಾಮದ ಯುವಕರು, ಹಿರಿಯರು ಹೋರಾಟದ ರೂಪುರೇಷೆ ಸಿದ್ಧಪಡಿಸುವುದನ್ನು ಕಂಡ ಗ್ರಾಮದ ಮಕ್ಕಳು ಸಹ ತಮ್ಮನ್ನು ಸ್ವಾತಂತ್ರತ್ರ್ಯ ಹೋರಾಟಕ್ಕೆ ಅರ್ಪಿಸಿಕೊಂಡರು. ಇಂತಹ ಗ್ರಾಮದ ಜನರ ತ್ಯಾಗವನ್ನು ಆದರ್ಶವನ್ನಾಗಿಸಿಕೊಂಡು ಇಂದಿನ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜೈನ್ ಪಬ್ಲಿಕ್ ಶಾಲೆ ಸತತ 12 ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಜೈನ್ ಪಬ್ಲಿಕ್ ಶಾಲೆಯ ಕುರಿತಾದ ಸಾಧನೆಯನ್ನು ಸ್ಮರಿಸುವ ಮೂಲಕ 78ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ನಡೆಯಿತು. ಶಾಲೆಯ ವಿದ್ಯಾರ್ಥಿ ದೇಶಭಕ್ತರ ವೇಷಭೂಷಣ ಸ್ಪರ್ಧೆ ಅತ್ಯಂತ ಆಕರ್ಷಣೀಯವಾಗಿತ್ತು. ದೇಶಭಕ್ತಿ ಗೀತೆಗಳು ಮತ್ತು ನೃತ್ಯ ಮಾಡುವ ಮೂಲಕ ಭಾರತಾಂಭೆಗೆ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಪ್ರಿಯದರ್ಶಿನಿ, ಶಾಲಾ ಸಿಓಓ ಸುಮಂತ್ ಮತ್ತು ಸೌಲಭ್ಯ ವ್ಯವಸ್ಥಾಪಕರಾದ ವಿಜಯಕುಮಾರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post